ಆ್ಯಪ್ನಗರ

ಗುರಗಾಂವ್‌ ರೆಸಾರ್ಟ್‌ ಮುಂದೆ ಹೈಡ್ರಾಮಾ; ಹೋಟೆಲ್‌ ಪ್ರವೇಶಕ್ಕೆ ರಾಜಸ್ಥಾನ ಪೊಲೀಸರಿಗೆ ತಡೆ

ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟು ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆಯುತ್ತಿದೆ. ಆಡಿಯೋ ಟೇಪ್‌ ವಿಚಾರವಾಗಿ ಶಾಸಕರ ವಿಚಾರಣೆಗೆ ಬಂದಿದ್ದ ರಾಜಸ್ಥಾನ ಪೊಲೀಸರಿಗೆ ಕಾಂಗ್ರೆಸ್‌ ಬಂಡಾಯ ಶಾಸಕರಿದ್ದ ರೆಸಾರ್ಟ್‌ಗೆ ಪ್ರವೇಶ ನಿರಾಕರಿಸಲಾಗಿತ್ತು. ನಂತರ ಹಲವು ಸುತ್ತಿನ ಮಾತುಕತೆ ಬಳಿಕ ಒಳ ಹೋಗಲು ಅನುಮತಿ ನೀಡಲಾಯಿತು.

Agencies 17 Jul 2020, 8:54 pm
ಜೈಪುರ/ಗುರಗಾಂವ್‌: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದ್ದು, ಶುಕ್ರವಾರ ಹಲವು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಗುರಗಾಂವ್‌ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್‌ ಬಂಡಾಯ ಶಾಸಕರನ್ನು ಭೇಟಿಯಾಗಲು ಬಂದಿದ್ದ ರಾಜಸ್ಥಾನ ಪೊಲೀಸರನ್ನು ಶುಕ್ರವಾರ ಸಂಜೆ ಹರಿಯಾಣ ಪೊಲೀಸರು ತಡೆದಿದ್ದಾರೆ. ನಂತರ ಹಲವು ಸುತ್ತಿನ ಮಾತುಕತೆ ಬಳಿಕ ಕೊನೆಗೂ ರಾಜಸ್ಥಾನ ಪೊಲೀಸರಿಗೆ ಹೋಟೆಲ್‌ ಒಳಗಡೆ ಹೋಗಲು ಅನುಮತಿ ನೀಡಲಾಗಿದೆ.
Vijaya Karnataka Web haryana police stop rajasthan cops from entering dissidents hotel in gurgaon
ಗುರಗಾಂವ್‌ ರೆಸಾರ್ಟ್‌ ಮುಂದೆ ಹೈಡ್ರಾಮಾ; ಹೋಟೆಲ್‌ ಪ್ರವೇಶಕ್ಕೆ ರಾಜಸ್ಥಾನ ಪೊಲೀಸರಿಗೆ ತಡೆ


ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರಕಾರ ಬೀಳಿಸಲು ಶಾಸಕರು ಬಿಜೆಪಿ ಜೊತೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಬಂಡಾಯ ಶಾಸಕರ ಧ್ವನಿ ಸಂಗ್ರಹಕ್ಕೆ ರಾಜಸ್ಥಾನ ಪೊಲೀಸ್‌ ಇಲಾಖೆ ವಿಶೇಷ ಕಾರ್ಯಾಚರಣೆ ತಂಡವನ್ನು ಹರಿಯಾಣಕ್ಕೆ ಕಳುಹಿಸಿತ್ತು.

ಹೊಸದಿಲ್ಲಿ ಬಳಿಯ ಮನೆಸಾರ್‌ದಲ್ಲಿ ಎರಡು ಹೋಟೆಲ್‌ಗಳ ಪೈಕಿ ಒಂದಕ್ಕೆ ಹರಿಯಾಣ ಪೊಲೀಸರು ರಾಜಸ್ಥಾನ ಪೊಲೀಸರ ಪ್ರವೇಶವನ್ನು ನಿರಾಕರಿಸಿದ್ದಾರೆ. ಕಳೆದ ಭಾನುವಾರದಿಂದ ಸಚಿನ್‌ ಪೈಲಟ್‌ ಬಣದ 18 ಬಂಡಾಯ ಕಾಂಗ್ರೆಸ್‌ ಶಾಸಕರು ಮನೆಸಾರ್‌ ಬಳಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆಡಿಯೋ ಟೇಪ್‌ ವಿಚಾರವಾಗಿ ಅವರನ್ನು ವಿಚಾರಣೆ ನಡೆಸಲು ರಾಜಸ್ಥಾನ ಪೊಲೀಸರು ಆಗಮಿಸಿದ್ದರು.

ಗೆಹ್ಲೋಟ್‌ ತಂತ್ರ, ಅವಿನಾಶ್‌ ಪಾಂಡೆ ಕುತಂತ್ರ - ಪೈಲಟ್‌ ಬಂಡಾಯಕ್ಕೆ ಹಿಂದೆ ಹಲವರ 'ಕೈ' ಚಳಕ


ಕಾಂಗ್ರೆಸ್‌ ಬಿಡುಗಡೆ ಮಾಡಿದ ಆಡಿಯೋ ಟೇಪ್‌ ವಿಚಾರವಾಗಿ ಶಾಸಕರಾದ ಭನ್ವಾರ್‌ ಲಾಲ್‌ ಶರ್ಮಾ ಹಾಗೂ ವಿಶ್ವೆಂದ್ರ ಸಿಂಗ್‌ ಅವರನ್ನು ಶುಕ್ರವಾರ ಬೆಳಗ್ಗೆ ಸರಕಾರ ಪತನಕ್ಕೆ ಸಂಚು ರೂಪಿಸಿದ್ದಾರೆಂದು ಪಕ್ಷದಿಂದ ಕಾಂಗ್ರೆಸ್‌ ಅಮಾನತುಗೊಳಿಸಿತ್ತು. ಜೊತೆಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಮೇಲೂ ಕಾಂಗ್ರೆಸ್‌ ದೂರನ್ನು ಸಲ್ಲಿಸಿದೆ.

ಪೈಲಟ್ ವಿರುದ್ಧ ಮಂಗಳವಾದವರೆಗೆ ಕ್ರಮ ಇಲ್ಲ: ಅನರ್ಹತೆ ನೋಟಿಸ್‌ಗೆ ಹೈಕೋರ್ಟ್‌ ತಾತ್ಕಾಲಿಕ ತಡೆ!

ಕಳೆದ ಭಾನುವಾರದಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ನಡೆದಿದ್ದು, ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ರೆಬೆಲ್‌ ನಾಯಕ ಸಚಿನ್‌ ಪೈಲಟ್‌ರನ್ನು ಕಾಂಗ್ರೆಸ್‌ ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಜೊತೆಗೆ ಸಚಿನ್‌ ಪೈಲಟ್‌ ಸೇರಿ ಬಂಡಾಯ ಶಾಸಕರ ಮೇಲೆ ಅನರ್ಹತೆ ಅಸ್ತ್ರವನ್ನು ಕೂಡ ಅಶೋಕ್‌ ಗೆಹ್ಲೋಟ್‌ ಸರಕಾರ ಪ್ರಯತ್ನಿಸಿದ್ದು, ಮಂಗಳವಾರದವರೆ‌ಗೂ ಪೈಲಟ್‌ಗೆ ಹೈಕೋರ್ಟ್ ಶ್ರೀರಕ್ಷೆ ಸಿಕ್ಕಿದೆ.

ಕೇಂದ್ರ ಸಚಿವ-ಕಾಂಗ್ರೆಸ್ ಶಾಸಕನ ನಡುವಿನ ಮಾತುಕತೆ ಟೇಪ್ ಬಹಿರಂಗ?: ಬಿಜೆಪಿ ಕೈವಾಡ ಸಾಬೀತು ಎಂದ ಕಾಂಗ್ರೆಸ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ