ಆ್ಯಪ್ನಗರ

ರುದ್ರಾಕ್ಷಿ ಮಾಲೆ ಧರಿಸಲು ಆರಂಭಿಸಿದರೇ ರಾಹುಲ್?

ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಗುಜರಾತ್ ಚುನಾವಣೆ ಪ್ರಚಾರದ ವೇಳೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಬಿಜೆಪಿಯಿಂದ ಟೀಕೆಗೆ ಒಳಗಾಗಿದ್ದರು.

Vijaya Karnataka Web 13 Dec 2017, 3:18 pm
ಅಹ್ಮದಾಬಾದ್: ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಗುಜರಾತ್ ಚುನಾವಣೆ ಪ್ರಚಾರದ ವೇಳೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಬಿಜೆಪಿಯಿಂದ ಟೀಕೆಗೆ ಒಳಗಾಗಿದ್ದರು. ಈ ಬೆನ್ನಲ್ಲೇ ತಾವೊಬ್ಬ ಶಿವ ಭಕ್ತ ಎಂದೂ ಹೇಳಿಕೊಂಡಿದ್ದ, ರಾಹುಲ್ ತಮ್ಮ ಅಜ್ಜಿ ರುದ್ರಾಕ್ಷಿ ಮಾಲೆ ಧರಿಸುತ್ತಿದ್ದರು ಎಂದಿದ್ದರು. ಇದೀಗ ಅವರ ಕತ್ತಿನಲ್ಲಿಯೂ ರುದ್ರಾಕ್ಷಿ ಮಾಲೆ ಕಾಣಿಸುತ್ತಿದ್ದು, ಅಜ್ಜಿ ಇಂದಿರಾ ಗಾಂಧಿ ದಾರಿ ಹಿಡಿದಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.
Vijaya Karnataka Web has rahul gandhi started wearing rudraksha beads
ರುದ್ರಾಕ್ಷಿ ಮಾಲೆ ಧರಿಸಲು ಆರಂಭಿಸಿದರೇ ರಾಹುಲ್?


ಇಲ್ಲಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂದಿ ಕೊರಳಲ್ಲಿ ರುದ್ರಾಕ್ಷಿ ಮಾಲಾ ಕಾಣಿಸಿದ್ದು, ಇಂಥದ್ದೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಜಗನ್ನಾಥ ಮಂದಿರದಲ್ಲಿ ಪ್ರಾರ್ಥಿಸಿದ ನಂತರ ರಾಹುಲ್ ಗಾಂಧಿ ಅಲ್ಲಿಯೇ ಈ ಮಾಲೆಯನ್ನು ಪಡೆದಿರಬಹುದೆಂದು ಶಂಕಿಸಲಾಗಿದೆ. ಮಂದಿರಕ್ಕೆ ಭೇಟಿ ನೀಡಿದಾಗ ಅರ್ಚಕರಾದ ದಿಲೀಪ್ ದಾಸ್ ಮತ್ತು ರಾಹುಲ್ ಗಾಂಧಿ ಕೊಠಡಿಯೊಂದಕ್ಕೆ ತೆರಳಿದ್ದು, ಅಲ್ಲಿ ಮಾಧ್ಯಮ ಮಂದಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಗುಜರಾತ್ ಚುನಾವಣೆ ವೇಳೆ ಸೋಮನಾಥ ಮಂದಿರಕ್ಕೆ ರಾಹುಲ್ ಭೇಟಿ ನೀಡಿದ್ದು, ಪ್ರವೇಶ ಪುಸ್ತಕದಲ್ಲಿ ಹಿಂದೂಯೇತರ ಪಟ್ಟಿಯಲ್ಲಿ ಸಹಿ ಮಾಡಿದ್ದಾರೆಂದೂ ಕೇಸರ ಪಕ್ಷ ಟೀಕಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ