ಆ್ಯಪ್ನಗರ

ಜೆಎನ್‌ಯು ಹಿಂಸಾಚಾರ: 2 ವಾಟ್ಸಾಪ್‌ ಗುಂಪಿನ ಸದಸ್ಯರ ಮೊಬೈಲ್‌ ಜಪ್ತಿಗೆ ಹೈಕೋರ್ಟ್‌ ಆದೇಶ

'ಫ್ರೆಂಡ್ಸ್‌ ಆಫ್‌ ಆರ್‌ಎಸ್‌ಎಸ್‌' ಮತ್ತು 'ಯುನಿಟಿ ಎಗೈನ್ಸ್ಟ್‌ ಲೆಫ್ಟ್‌' ಗುಂಪಿನ ಎಲ್ಲಾ ಸದಸ್ಯರಿಗೆ ಸಮನ್ಸ್‌ ನೀಡುವಂತೆ ದಿಲ್ಲಿ ಹೈಕೋರ್ಟ್‌ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

TIMESOFINDIA.COM 14 Jan 2020, 1:43 pm

ಹೊಸದಿಲ್ಲಿ: ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ದ ವಿದ್ಯಾರ್ಥಿಗಳ ಮೇಲೆ ಜನವರಿ 5ರಂದು ನಡೆದ ದಾಳಿಯನ್ನು ವಾಟ್ಸಾಪ್‌ ಗ್ರೂಪ್‌ಗಳ ಮೂಲಕ ಸಂಯೋಜಿಸಲಾಗಿದೆ ಎಂಬ ಆರೋಪದ ಮೇಲೆ ಈ ಗುಂಪಿನ ಸದಸ್ಯರ ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡುವಂತೆ ದಿಲ್ಲಿ ಹೈಕೋರ್ಟ್‌ ದಿಲ್ಲಿ ಪೊಲೀಸರಿಗೆ ಸೂಚನೆ ನೀಡಿದೆ.
Vijaya Karnataka Web Untitled


ವಾಟ್ಸಾಪ್‌,ತಾನು ಸಂದೇಶಗಳನ್ನು ಸರ್ವರ್‌ಗಳಲ್ಲಿ ಇಟ್ಟುಕೊಂಡಿರುವುದಿಲ್ಲ, ಆದರೆ ಬಳಕೆದಾರರ ಫೋನ್‌ಗಳಿಂದ ಸಂದೇಶಗಳನ್ನು ಪುನಃ ಪಡೆದುಕೊಳ್ಳಬಹುದು ಎಂದು ಹೇಳಿದ ಬಳಿಕ ದಿಲ್ಲಿ ಹೈಕೋರ್ಟ್‌ ಈ ಆದೇಶ ನೀಡಿದೆ.

ಇಷ್ಟೇ ಅಲ್ಲದೆ 'ಫ್ರೆಂಡ್ಸ್‌ ಆಫ್‌ ಆರ್‌ಎಸ್‌ಎಸ್‌' ಮತ್ತು 'ಯುನಿಟಿ ಎಗೈನ್ಸ್ಟ್‌ ಲೆಫ್ಟ್‌' ಗುಂಪಿನ ಎಲ್ಲಾ ಸದಸ್ಯರಿಗೆ ಸಮನ್ಸ್‌ ನೀಡುವಂತೆ ಹೈಕೋರ್ಟ್‌ ಪೊಲೀಸರಿಗೆ ನಿರ್ದೇಶನ ನೀಡಿದೆ.

ಜೆಎನ್‌ಯು ವಿದ್ಯಾರ್ಥಿಗಳಿಗೆ ನೋಟಿಸ್‌ ಜಾರಿ: ವಿಧಿವಿಜ್ಞಾನ ತಂಡದ ಭೇಟಿ, ಪೊಲೀಸ್‌ ಸರ್ಪಗಾವಲು

ಜೆಎನ್‌ಯುನ ಮೂವರು ಪ್ರಧ್ಯಾಪಕರು ಸಿಸಿಟಿವಿ ದೃಶ್ಯಾವಳಿಗಳು, ವಾಟ್ಸಾಪ್‌ ಸಂವಾದಗಳು ಮತ್ತು ಜನವರಿ 5ರ ಗಲಭೆಗೆ ಸಂಬಂಧಿಸಿದ ಇತರ ಸಾಕ್ಷ್ಯಾಧಾರಗಳನ್ನು ಸಂರಕ್ಷಿಸುವಂತೆ ಕೋರಿ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ ವಾಟ್ಸಾಪ್‌, ಗೂಗಲ್‌ಗೆ ಮಾಹಿತಿಯನ್ನು ಜೋಪಾನ ಮಾಡುವಂತೆ ಮತ್ತು ದಿಲ್ಲಿ ಪೊಲೀಸರು ಕೇಳುವ ಮಾಹಿತಿಯನ್ನು ನೀಡುವಂತೆ ಹೇಳಿದೆ.

ಇದರ ಜೊತೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪೊಲೀಸರು ಕೇಳಿದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ