ಆ್ಯಪ್ನಗರ

ದೇಶದೆಲ್ಲೆಡೆ ರಣಬಿಸಿಲು, ನೀರು ಕುಡಿಯಿರಿ, ಟೀ, ಕಾಫಿ ತ್ಯಜಿಸಿ: ಆರೋಗ್ಯ ಸಚಿವಾಲಯ ಸೂಚನೆ

ಸಾಧ್ಯವಾದಷ್ಟು ಹೆಚ್ಚು ನೀರು ಮತ್ತು ಪಾನೀಯಗಳ ಸೇವಿಸಬೇಕು. ಚಹಾ, ಕಾಫಿಗಳನ್ನು ಆದಷ್ಟು ಕೆಲವು ದಿನ ತ್ಯಜಿಸಿದರೆ ಒಳಿತು ಎಂದು ತಿಳಿಸಲಾಗಿದೆ. ವಿಶೇಷವಾಗಿ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಆದಷ್ಟು ಮನೆಗಳಿಂದ ಹೊರಗೆ ಹೋಗಬಾರದೆಂದು ತಿಳಿಸಲಾಗಿದೆ.

Vijaya Karnataka Web 4 Jun 2019, 8:03 pm
ಹೊಸದಿಲ್ಲಿ: ದೇಶದ ಹಲವು ರಾಜ್ಯಗಳಲ್ಲಿ ರಣ ಬಿಸಿಲು ಮುಂದುವರೆದಿದ್ದು ತೀವ್ರ ಬಿಸಿ ಗಾಳಿಯ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ.
Vijaya Karnataka Web ರಣಬಿಸಿಲು
ರಣಬಿಸಿಲು


ಜನಸಾಮಾನ್ಯರ ಆರೋಗ್ಯದ ಮೇಲೆ ಬಿಸಿ ಗಾಳಿ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದಾದ್ದರಿಂದ ಹಗಲು ಹೊತ್ತಿನಲ್ಲಿ ಜನರು ಸಾಧ್ಯವಾದಷ್ಟು ನೆರಳಿರುವ ಸ್ಥಳಗಳಲ್ಲಿ ಇರಬೇಕು ಮತ್ತು ಹೊರ ಹೋಗುವಾಗ ಸಡಿಲವಾದ ಮತ್ತು ಹತ್ತಿಯ ಉಡುಪನ್ನು ಧರಿಸಿ,ಛತ್ರಿಗಳನ್ನು ಬಳಸುವುದು ಸೂಕ್ತವೆಂದು ಸೂಚಿಸಲಾಗಿದೆ.

ಸಾಧ್ಯವಾದಷ್ಟು ಹೆಚ್ಚು ನೀರು ಮತ್ತು ಪಾನೀಯಗಳ ಸೇವಿಸಬೇಕು. ಚಹಾ, ಕಾಫಿಗಳನ್ನು ಕೆಲವು ದಿನ ತ್ಯಜಿಸಿದರೆ ಒಳಿತು ಎಂದು ತಿಳಿಸಲಾಗಿದೆ. ವಿಶೇಷವಾಗಿ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಆದಷ್ಟು ಮನೆಗಳಿಂದ ಹೊರಗೆ ಹೋಗಬಾರದೆಂದು ತಿಳಿಸಲಾಗಿದೆ.

ಪ್ರಸ್ತುತ ಉತ್ತರ ಪ್ರದೇಶ, ರಾಜಸ್ಥಾನ, ವಿದರ್ಭ, ಮಧ್ಯಪ್ರದೇಶ ಮತ್ತು ಹೊಸದಿಲ್ಲಿಯ ಕೆಲವು ಭಾಗಗಳಲ್ಲಿ ತೀವ್ರ ಬಿಸಿಗಾಳಿಯ ಪರಿಸ್ಥಿತಿ ಉಂಟಾಗಿದೆ.

ಈ ನಡುವೆ ಪಂಜಾಬ್‌ನ ಕೆಲವು ಭಾಗಗಳಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ತಾಪಮಾನ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಹೈದರಾಬಾದ್ ಮತ್ತು ತೆಲಂಗಾಣದ ಕೆಲವು ಪ್ರದೇಶಗಳಲ್ಲೂ ಸ್ವಲ್ಪ ಮಳೆಯಾಗಿರುವ ವರದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ