ಪಟನಾ: ಮುಂಗಾರು ಮಳೆ ವಿಳಂಬದ ನಡುವೆ ಬಿಹಾರದಲ್ಲಿ ಅಬ್ಬರಿಸುತ್ತಿರುವ ಬಿಸಿಗಾಳಿಯ ರುದ್ರ ನರ್ತನಕ್ಕೆ ಇದುವರೆಗೆ 130 ಮಂದಿ ಮೃತಪಟ್ಟಿದ್ದಾರೆ. ಬಿಸಿಲ ಉಗ್ರಾವತಾರಕ್ಕೆ ಬೆಚ್ಚಿಬಿದ್ದಿರುವ ಜನ ಮನೆಯಿಂದ ಹೊರ ಹೋಗಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಖುದ್ದು ಸರಕಾರವೇ ಶಾಲಾ-ಕಾಲೇಜುಗಳಿಗೆ ಜೂನ್ 22ರವರೆಗೆ ರಜೆ ಘೋಷಿಸಿದೆ. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಮನೆಯಿಂದ ಹೊರ ಹೋಗದಂತೆ ಜನರಿಗೆ ಸೂಚನೆ ನೀಡಲಾಗಿದೆ. ಈ ಸಮಯದಲ್ಲಿ ನಿರ್ಮಾಣ ಕಾಮಗಾರಿಗಳಿಗೂ ನಿಷೇಧ ಹೇರಲಾಗಿದೆ. ಎಂನರೇಗಾ ಕಾರ್ಯಕ್ರಮದಡಿ ಬೆಳಗಿನ 10.30ರ ನಂತರ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಬಯಲು ಪ್ರದೇಶಗಳ ಸಭೆ ಸಮಾರಂಭಗಳಿಗೂ ಬ್ರೇಕ್ ಬಿದ್ದಿದೆ. ಪಟನಾ, ಗಯಾ ಮತ್ತು ಭಗಲ್ಪೂರ್ನಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಜನ ಗುಂಪು ಸೇರುವುದನ್ನು ತಪ್ಪಿಸಲು ಗಯಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಉಗ್ರ ಬಿಸಿಲಿನಿಂದ ಮೊದಲು ಮೆದುಳು ಘಾಸಿಗೊಳ್ಳುತ್ತದೆ. ಅದರಿಂದ ಇತರೆ ಅಂಗಾಂಗಳ ವೈಫಲ್ಯಕ್ಕೆ ಕಾರಣವಾಗಿ ಸಾವು ಸಂಭವಿಸುತ್ತದೆ.
ಬಿಸಿಗಾಳಿಯಿಂದ 130 ಸಾವು
ಖುದ್ದು ಸರಕಾರವೇ ಶಾಲಾ-ಕಾಲೇಜುಗಳಿಗೆ ಜೂನ್ 22ರವರೆಗೆ ರಜೆ ಘೋಷಿಸಿದೆ. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಮನೆಯಿಂದ ಹೊರ ಹೋಗದಂತೆ ಜನರಿಗೆ ಸೂಚನೆ ನೀಡಲಾಗಿದೆ.
PTI 19 Jun 2019, 5:00 am