ಆ್ಯಪ್ನಗರ

ಶಬರಿಮಲೆಯಲ್ಲಿ ಭಕ್ತರ ದಟ್ಟಣೆ

ಶುಕ್ರವಾರ 1,12,260 ಭಕ್ತರು ಭೇಟಿ ನೀಡಿದ್ದು, ಈ ಋತುವಿನಲ್ಲಿ ಇದುವೇ ದೊಡ್ಡ ಸಂಖ್ಯೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಜನಸಂದಣಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

Vijaya Karnataka 23 Dec 2018, 8:36 am
ಶಬರಿಮಲೆ: ಡಿಸೆಂಬರ್‌ 27ರಂದು ನಡೆಯುವ ವಾರ್ಷಿಕ ಮಂಡಲ ಪೂಜೆಗೆ ಮುನ್ನವೇ ಶಬರಿಮಲೆ ಅಯ್ಯಪ್ಪ ದೇವಾಲಯ ಭಕ್ತರಿಂದ ತುಂಬಿ ತುಳುಕುತ್ತಿದೆ. ಶುಕ್ರವಾರ ಒಂದೇ ದಿನ 1.12 ಲಕ್ಷ ಭಕ್ತರು ಮಲೆಗೆ ಭೇಟಿ ನೀಡಿದ್ದಾರೆ.
Vijaya Karnataka Web Shabarimala


ಈ ನಡುವೆ, ಭಾನುವಾರ ಚೆನ್ನೈ ಮೂಲದ 50 ವರ್ಷದೊಳಗಿನ 50 ಮಹಿಳೆಯರ ತಂಡ ಮಲೆಗೆ ಭೇಟಿ ನೀಡುವುದಾಗಿ ಹೇಳಿದ್ದು ಎಲ್ಲೆಡೆ ಕುತೂಹಲ ಮೂಡಿಸಿದೆ.

10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂಕೋರ್ಟ್‌ ತೀರ್ಪಿನ ಅನುಷ್ಠಾನಕ್ಕೆ ಮುಂದಾದ ಕೇರಳ ಸರಕಾರದ ಕ್ರಮದ ವಿರುದ್ಧ ಭಾರಿ ಪ್ರತಿಭಟನೆ, ನಿರ್ಬಂಧಗಳ ಹಿನ್ನೆಲೆಯಲ್ಲಿ ಕೆಲವು ಸಮಯ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಪೊಲೀಸರು ನಿರ್ಬಂಧಗಳನ್ನು ಸಡಿಲುಗೊಳಿಸಿದ ಬಳಿಕ ಭಕ್ತರ ಪ್ರವಾಹ ಹೆಚ್ಚಾಗಿದೆ.

ಶುಕ್ರವಾರ 1,12,260 ಭಕ್ತರು ಭೇಟಿ ನೀಡಿದ್ದು, ಈ ಋುತುವಿನಲ್ಲಿ ಇದುವೇ ದೊಡ್ಡ ಸಂಖ್ಯೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಜನಸಂದಣಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ನಾನಾ ರಾಜ್ಯಗಳ ಮಹಿಳೆಯರ ತಂಡ

ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಮತ್ತು ಒಡಿಶಾದ ಸುಮಾರು 50 ಮಹಿಳೆಯರು ತಮಿಳುನಾಡು ಮೂಲದ 'ಮಾನಿತಿ' ಎಂಬ ಸಂಘಟನೆಯ ನೇತೃತ್ವದಲ್ಲಿ ಭಾನುವಾರ ದೇವಳಕ್ಕೆ ಆಗಮಿಸಲಿದೆ ಎಂದು ತಂಡದ ಸದಸ್ಯೆ ಸೆಲ್ವಿ ಟಿವಿ ಚಾನೆಲ್‌ ಒಂದಕ್ಕೆ ತಿಳಿಸಿದ್ದಾರೆ. ತಮ್ಮ ಯೋಜನೆ ಬಗ್ಗೆ ಆಗಲೇ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದು ತಿಳಿಸಿದ್ದಾಗಿ ಅವರು ಹೇಳಿದ್ದಾರೆ.

''ತಂಡ ಬೆಳಗ್ಗೆ 10 ಗಂಟೆಗೆ ಕೊಟ್ಟಾಯಂ ತಲುಪಲಿದೆ. ಅವರು ಯಾವುದೇ ವಿಷಯ ಭದ್ರತೆಗೆ ಕೋರಿಕೆ ಮಂಡಿಸಿಲ್ಲ. ಅವರು ನಿಲಕ್ಕಲ್‌ಗೆ ಬಂದಾಗ ಏನಾದರೂ ಕಾನೂನು ಸಮಸ್ಯೆ ಎದುರಾದರೆ ಅದನ್ನು ಸೂಕ್ತವಾಇ ನಿಭಾಯಿಸಲಾಗುವುದು,'' ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಂಧ್ರದ ಮಹಿಳೆ ವಾಪಸ್‌

ಶುಕ್ರವಾರ ರಾತ್ರಿ ಆಂಧ್ರ ಪ್ರದೇಶದ 43 ವರ್ಷದ ಮಹಿಳೆಯೊಬ್ಬರು ಯಾತ್ರಾರ್ಥಿಗಳ ತಂಡದ ಜತೆ ಬಂದಿದ್ದರು. ಆದರೆ, ಪೊಲೀಸರು ಅವರನ್ನು ಭದ್ರತಾ ಕಾರಣ ನೀಡಿ ಹಿಂದಕ್ಕೆ ಕಳುಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ