ಆ್ಯಪ್ನಗರ

ಗಡಿಯಲ್ಲಿ ಪಾಕ್‌ ಸೇನೆಯಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಮನೆಗಳಿಗೆ ನುಗ್ಗಿದ ಶೆಲ್!

ಅಂತಾರಾಷ್ಟ್ರೀಯ ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇರುವ ಪಾಕಿಸ್ತಾನ, ಇಂದೂ(ಶುಕ್ರವಾರ) ಕೂಡ ಭಾರೀ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿದೆ. ಕಣಿವೆಯ ಕತುವಾ ಜಿಲ್ಲೆಯ ಹೀರಾನಗರ್ ಬಳಿ ಪಾಕ್ ಅಪ್ರಚೋದಿತ ದಾಳಿ ನಡೆಸಿದೆ.

Vijaya Karnataka Web 21 Aug 2020, 9:41 pm
ಶ್ರೀನಗರ: ಅಂತಾರಾಷ್ಟ್ರೀಯ ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇರುವ ಪಾಕಿಸ್ತಾನ, ಇಂದೂ(ಶುಕ್ರವಾರ) ಕೂಡ ಭಾರೀ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿದೆ.
Vijaya Karnataka Web Cease Fire
ಗಡಿಯಲ್ಲಿ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ


ಕಣಿವೆಯ ಕತುವಾ ಜಿಲ್ಲೆಯ ಹೀರಾನಗರ್ ಎಂಬ ಗ್ರಾಮದ ಮನೆಗಳ ಮೇಲೆ ಪಾಕಿಸ್ತಾನ ಸೇನೆ ಹಾರಿಸಿದ ಶೆಲ್‌ಗಳು‌ ಅಪ್ಪಳಿಸಿದ್ದು, ಗ್ರಾಮಸ್ಥರು ಭಯದ ನೆರಳಲ್ಲಿ ದಿನದೂಡುತ್ತಿದ್ದಾರೆ.

ಗಡಿಗೆ ಹೊಂದಿಕೊಂಡೇ ಇರುವ ಹೀರಾನಗರ್ ಗ್ರಾಮದಲ್ಲಿ ಶೆಲ್‌ಗಳ ರಾಶಿಯೇ ಬಿದ್ದಿದ್ದು, ಸಾರ್ವಜನಿಕ ಪ್ರದೇಶದ ಮೇಲೆ ಪಾಕ್‌ನ ಅಪ್ರಚೋದಿತ ದಾಳಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಉರಿಯಲ್ಲಿ ಭೂಗತ ಬಂಕರ್ ನಿರ್ಮಾಣ ಕಾರ್ಯಕ್ಕೆ ಚಾಲನೆ: ಈಡೇರಿದ ಗಡಿ ನಿವಾಸಿಗಳ ಬೇಡಿಕೆ!

ಈ ಕುರಿತು ಮಾತನಾಡಿರುವ ಹೀರಾನಗರ್ ಗ್ರಾಮಸ್ಥರು, ಪಾಕಿಸ್ತಾನದ ಅಪ್ರಚೋದಿತ ದಾಳಿ ಇಲ್ಲಿ ನಿತ್ಯದ ಮಾತಾಗಿದ್ದು, ಭಯದ ನೆರಳಲ್ಲೇ ನಾವು ದಿನದೂಡುತ್ತಿರುವುದಾಗಿ ನೊಂದು ನುಡಿದಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಶೆಲ್ ದಾಳಿ ಸಂಜೆ 5 ಗಂಟೆವರೆಗೂ ನಿರಂತರವಾಗಿ ಮುಂದುವರೆಸಿದ್ದು, ಪಾಕ್‌ನ ಉದ್ಧಟತನಕ್ಕೆ ಸಾಕ್ಷಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ