ಆ್ಯಪ್ನಗರ

ಉತ್ತರಕಾಶಿಯಲ್ಲಿ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಗುಡ್ಡಗಾಡು ಪ್ರದೇಶವಾದ ಚಿವಾ ಮಾರ್ಗದಲ್ಲಿ ಹಾರಾಡುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಪೈಲಟ್‌, ಟಿಕೋಚಿ ನದಿ ತೀರದ ಸಮೀಪ ಇಳಿಸಿದ ಪರಿಣಾಮ ಕಾಪ್ಟರ್‌ಗೆ ಹಾನಿಯಾಗಿದೆ.

PTI 24 Aug 2019, 5:00 am
ಡೆಹ್ರಾಡೂನ್‌: ಉತ್ತರಾಖಂಡದ ನೆರೆಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರ್‌ ಶುಕ್ರವಾರ ತಾಂತ್ರಿಕ ದೋಷದಿಂದ ತುರ್ತು ಭೂ ಸ್ಪರ್ಶ ಮಾಡಿದೆ. ಅದೃಷ್ಟವಶಾತ್‌ ಪೈಲಟ್‌ ಹಾಗೂ ಸಹ ಪೈಲಟ್‌ ಜೀವಾಪಾಯದಿಂದ ಪಾರಾಗಿದ್ದಾರೆ. 'ಆರ್ಯನ್‌ ಏವಿಯೇಷನ್‌' ಸಂಸ್ಥೆಗೆ ಸೇರಿದ ಕಾಪ್ಟರ್‌ನಲ್ಲಿ ಉತ್ತರಕಾಶಿಯ ನೆರೆ ಸಂತ್ರಸ್ತರಿಗೆ ಆಹಾರ ಪೊಟ್ಟಣ, ಬಟ್ಟೆ ಮತ್ತಿತರ ಅಗತ್ಯ ಸಾಮಾಗ್ರಿಗಳನ್ನು ಒಯ್ಯಲಾಗುತ್ತಿತ್ತು. ಗುಡ್ಡಗಾಡು ಪ್ರದೇಶವಾದ ಚಿವಾ ಮಾರ್ಗದಲ್ಲಿ ಹಾರಾಡುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಪೈಲಟ್‌, ಟಿಕೋಚಿ ನದಿ ತೀರದ ಸಮೀಪ ಇಳಿಸಿದ ಪರಿಣಾಮ ಕಾಪ್ಟರ್‌ಗೆ ಹಾನಿಯಾಗಿದೆ. ಕಳೆದ ಬುಧವಾರವಷ್ಟೇ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಖಾಸಗಿ ಕಾಪ್ಟರ್‌ ದುರಂತಕ್ಕೀಡಾಗಿ ಪೈಲಟ್‌ ಸೇರಿ ಮೂವರು ಮೃತಪಟ್ಟಿದ್ದರು.
Vijaya Karnataka Web capter

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ