ಆ್ಯಪ್ನಗರ

ಕಾಶ್ಮೀರಿ ಬಾಲಕನಿಂದ ಇಂಟರ್‌ನೆಟ್ ರೇಡಿಯೊ!

ಸದಾ ಮದ್ದುಗುಂಡಿನ ಸದ್ದು ಕೇಳುವ ಜಮ್ಮು-ಕಾಶ್ಮೀರದ ಗಡಿ ಭಾಗ ತ್ರಾಲ್‌ನಲ್ಲಿ ಸದ್ದಿಲ್ಲದೇ ಇಂಟರ್‌ನೆಟ್ ರೇಡಿಯೊ ಕ್ರಾಂತಿ ನಡೆದಿದೆ. ಅದರಲ್ಲೂ ಇನ್ನೂ ಮೀಸೆ ಚಿಗುರದ 10 ನೇ ತರಗತಿ ವಿದ್ಯಾರ್ಥಿ ಇಂತಹ ಸಾಧನೆ ಮಾಡಿರುವುದು ವಿಶೇಷ.

ಏಜೆನ್ಸೀಸ್ 27 Mar 2016, 4:00 am
ಗುಂಡಿನ ಮೊರೆತದ ನಡುವೆ ಅರಳಿದ ಬಾನುಲಿ / ಆನ್‌ಲೈನ್ ರೇಡಿಯೋ ಸಿದ್ಧಪಡಿಸಿದ 7 ಬಾಲಕ
Vijaya Karnataka Web hello kashmir teen sets up an online radio greater kashmir
ಕಾಶ್ಮೀರಿ ಬಾಲಕನಿಂದ ಇಂಟರ್‌ನೆಟ್ ರೇಡಿಯೊ!


ಶ್ರೀನಗರ: ಸದಾ ಮದ್ದುಗುಂಡಿನ ಸದ್ದು ಕೇಳುವ ಜಮ್ಮು-ಕಾಶ್ಮೀರದ ಗಡಿ ಭಾಗ ತ್ರಾಲ್‌ನಲ್ಲಿ ಸದ್ದಿಲ್ಲದೇ ಇಂಟರ್‌ನೆಟ್ ರೇಡಿಯೊ ಕ್ರಾಂತಿ ನಡೆದಿದೆ. ಅದರಲ್ಲೂ ಇನ್ನೂ ಮೀಸೆ ಚಿಗುರದ 10 ನೇ ತರಗತಿ ವಿದ್ಯಾರ್ಥಿ ಇಂತಹ ಸಾಧನೆ ಮಾಡಿರುವುದು ವಿಶೇಷ.

ತ್ರಾಲ್ ನಗರದ ವಿದ್ಯಾರ್ಥಿ ಉಮರ್ ನಿಸಾರ್ (15), ಉಗ್ರರು ಹಾಗೂ ಸೇನೆಯ ನಡುವಿನ ಕಾಳಗಕಕ್ಕೆ ಸಾಕ್ಷಿಯಾಗುವ ರಕ್ತಸಿಕ್ತ ಘಟನೆಗಳನ್ನು ನೋಡುತ್ತಲೇ ಬೆಳೆದುಬಂದವ. ಆದರೆ ಇದ್ಯಾವುದೂ ಈ ಬಾಲಕನ ಕನಸಿಗೆ ಘಾಸಿ ಮಾಡಲಿಲ್ಲ. ಎಂತಹ ಪ್ರತಿಭಟನೆ, ಗಲಭೆಗಳು ನಡೆದರೂ ಶಾಲೆಗೆ ತಪ್ಪದೇ ಹೋಗುತ್ತಿರುವ ನಿಸಾರ್ ಮನದ ಮೂಲೆಯಲ್ಲಿ ಸಮುದಾಯಕ್ಕೆ ಉಳಿತಾಗುವ ಇಂಟರ್‌ನೆಟ್ ರೇಡಿಯೊ ಹುಟ್ಟಹಾಕುವ ಕಲ್ಪನೆ ಮೂಡಿದ್ದೇ ತಡ, ಸತತ ಪ್ರಯತ್ನದ ಫಲವಾಗಿ ಡಿಡಿಡಿ.ಚ್ಞ್ಞ್ಠ್ಞ್ಛಞ.ಜ್ಞಿ ಎಂಬ ರೇಡಿಯೊ ಚಾನೆಲ್ ಸಿದ್ಧಗೊಂಡಿದೆ. ಈ ಚಾನೆಲ್ ಸಿಇಒ ಕೂಡ ಇವರೇ!

ಅಂತರ್ಜಾಲಗಳನ್ನು ಜಾಲಾಡುತ್ತಿದ್ದ ನಿಸಾರ್‌ಗೆ ಇಂಟರ್‌ನೆಟ್ ರೇಡಿಯೊ ಬಗ್ಗೆ ಆಸಕ್ತಿ ಬೆಳೆಯಿತು. ಸ್ವಯಂ ಪ್ರೇರಣೆಯಿಂದಲೇ ಕೋಡಿಂಗ್ ತಂತ್ರಜ್ಞಾನ ಕರಗತ ಮಾಡಿಕೊಂಡು ಎಂಟು ತಿಂಗಳ ಪರಿಶ್ರಮದಿಂದ ಇದನ್ನು ಸಿದ್ಧಪಡಿಸಿದ್ದಾರೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

‘‘ಭಯೋತ್ಪಾದನೆಯ ಆಚೆಗೂ ಕಾಶ್ಮೀರದ ಯುವಕರಲ್ಲಿ ಹೊಸತನದ ತುಡಿತವಿದೆ. ನಮ್ಮ ರಾಜ್ಯದಲ್ಲಿ ಉಗ್ರರ ಉಪಟಳದ ಜತೆಜತೆಗೆ ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ, ನೀರಿನ ಅಭಾವವಿದೆ. ಇದರಿಂದ ಸಾಕಷ್ಟು ದಿನವಹಿ ಸಮಸ್ಯೆಗಳೂ ಇರುತ್ತವೆ. ಇವೆಲ್ಲಕ್ಕೂ ವೇದಿಕೆಯಾಗುವ ಉದ್ದೇಶದೊಂದಿಗೆ ನಾನು ಇಂಟರ್‌ನೆಟ್ ರೇಡಿಯೊ ಚಾನೆಲ್ ರೂಪಿಸಿದ್ದೇನೆ,’’ ಎನ್ನುತ್ತಾರೆ ನಿಸಾರ್.

‘‘ಕಾಶ್ಮೀರಿ ಜನರ ಜೀವನ ಶೈಲಿ, ಸಂಸ್ಕೃತಿ, ಭಾಷೆ ಸೇರಿದಂತೆ ಒಂದಷ್ಟು ಮನೋರಂಜನಾ ಕಾರ್ಯಕ್ರಮಗಳೂ ಇಲ್ಲಿ ಲಭ್ಯ. ಸಮಾನ ಮನಸ್ಕ ಸ್ನೇಹಿತರು ಹಾಗೂ ಪತ್ರಕರ್ತರು ನನ್ನ ಸಾಧನೆಗೆ ಬೆಂಬಲವಾಗಿ ನಿಂತಿರುವುದು ಖುಷಿ ತಂದಿದೆ. ಜಾಹೀರಾತುಗಳಿಂದ ಹಾಗೂ ಹೂಡಿಕೆದಾರರಿಂದ ಆದಾಯ ಎದುರು ನೋಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸ್ಟುಡಿಯೊ ರಚಿಸುವ ಇರಾದೆ,’’ ಎನ್ನುತ್ತಾರೆ ಅವರು. ಇವರ ಕುಟುಂಬ ಪುಟ್ಟದೊಂದು ಸೇಬಿನ ತೋಟ ಹೊಂದಿದ್ದು, ಉಪಜೀವನಕ್ಕೆ ತಂದೆ ಟ್ರ್ಯಾಕ್ಟರ್ ಓಡಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ