ಆ್ಯಪ್ನಗರ

ಮನೋಹರ್ ಪರಿಕ್ಕರ್: ಕೊನೆಯ ಟ್ವೀಟ್‌ನಲ್ಲಿ ಹೇಳಿದ್ದೇನು?

ಮಹಾನ್ ಹೋರಾಟಗಾರರಾಗಿದ್ದ ಪರಿಕ್ಕರ್ ಅವರ ಕಾರ್ಯಕ್ಷಮತೆಗೆ ಅನಾರೋಗ್ಯ ಎಂದೂ ಅಡ್ಡಿಯಾಗಲಿಲ್ಲ. ಗೋವಾ ಕುರಿತು ಅವರಿಗಿರುವ ಪ್ರೀತಿ ಅಗಾಧ. 2014ರಲ್ಲಿ ಅವರು ರಕ್ಷಣಾ ಸಚಿವರಾಗಿ ನೇಮಕವಾದ ಸುದ್ದಿ ಬರುತ್ತಿದ್ದಂತೆ, ತಮಗೆ ರಾಜ್ಯದ ಬಗ್ಗೆಯೇ ಅಧಿಕ ಒಲವು ಇರುವುದರಿಂದ ಆ ಹುದ್ದೆ ಅಷ್ಟೊಂದು ಖುಷಿ ನೀಡಲಿಕ್ಕಿಲ್ಲ ಎಂದು ಪರಿಕ್ಕರ್ ಹೇಳಿದ್ದರು.

Vijaya Karnataka Web 18 Mar 2019, 11:15 am
ಪಣಜಿ: ಗೋವಾ ಮುಖ್ಯಮಂತ್ರಿಯಾಗಿ 4ನೇ ಅವಧಿಯ ಅರ್ಧದಲ್ಲೇ ಮನೋಹರ್ ಪರಿಕ್ಕರ್ ಅವರು ಭಾನುವಾರ ಇಹಲೋಕಯಾತ್ರೆ ಮುಗಿಸಿದರು. ದೀರ್ಘಕಾಲದ ಪ್ಯಾಂಕ್ರಿಯಾಸಿಸ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಕೊನೆಯುಸಿರೆಳೆದರು.
Vijaya Karnataka Web Manohar Parrikar New-1


ಮಹಾನ್ ಹೋರಾಟಗಾರರಾಗಿದ್ದ ಪರಿಕ್ಕರ್ ಅವರ ಕಾರ್ಯಕ್ಷಮತೆಗೆ ಅನಾರೋಗ್ಯ ಎಂದೂ ಅಡ್ಡಿಯಾಗಲಿಲ್ಲ. ಗೋವಾ ಕುರಿತು ಅವರಿಗಿರುವ ಪ್ರೀತಿ ಅಗಾಧ. 2014ರಲ್ಲಿ ಅವರು ರಕ್ಷಣಾ ಸಚಿವರಾಗಿ ನೇಮಕವಾದ ಸುದ್ದಿ ಬರುತ್ತಿದ್ದಂತೆ, ತಮಗೆ ರಾಜ್ಯದ ಬಗ್ಗೆಯೇ ಅಧಿಕ ಒಲವು ಇರುವುದರಿಂದ ಆ ಹುದ್ದೆ ಅಷ್ಟೊಂದು ಖುಷಿ ನೀಡಲಿಕ್ಕಿಲ್ಲ ಎಂದು ಪರಿಕ್ಕರ್ ಹೇಳಿದ್ದರು.

ಅನಾರೋಗ್ಯದ ನಡುವೆಯೂ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸುತ್ತಿದ್ದ ಅವರು, ನಿಯಮಿತವಾಗಿ ಅಧಿಕಾರಿಗಳು, ಸಚಿವರ ಸಭೆ ನಡೆಸಿ ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸುತ್ತಿದ್ದರು.


2019 ಮಾರ್ಚ್ 11ರಂದು ಅವರು ಕೊನೆಯದಾಗಿ ಟ್ವೀಟ್ ಮಾಡಿದ್ದು, ಗೋವಾದ ಮೊದಲ ಮುಖ್ಯಮಂತ್ರಿ ದಯಾನಂದ್ ಬಂಧೋಕರ್‌ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದರು.

ಜನವರಿಯಲ್ಲಿ ಅವರ ಆರೋಗ್ಯ ತೀರಾ ಹದಗೆಟ್ಟಿತು. ಬೇರೆಯವರ ಸಹಾಯವಿಲ್ಲದೆ ನಿಲ್ಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅವರಿದ್ದರು. ಆಗಲೂ ಗೋವಾ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿ ಬಜೆಟ್ ಮಂಡಿಸಿದ್ದರು. ಅವರ ಕರ್ತವ್ಯ ನಿಷ್ಠೆಗೆ ಎಲ್ಲೆಡೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಮೂಗಿನಲ್ಲಿ ಟ್ಯೂಬ್‌ ಹಾಕಿಕೊಂಡೇ ಬಜೆಟ್ ಭಾಷಣ ಆರಂಭಿಸಿದ ಪರಿಕ್ಕರ್‌, 'ಪ್ರಸ್ತುತ ಸನ್ನಿವೇಶದಲ್ಲಿ ಬಜೆಟ್ ಭಾಷಣವನ್ನು ಪೂರ್ಣವಾಗಿ ಓದುವ ಶಕ್ತಿಯಿಲ್ಲ. ಹಾಗಿದ್ದರೂ ನನ್ನ ಜೋಶ್‌ ಅತ್ಯಧಿಕವಾಗಿಯೇ ಇದೆ' ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ