ಆ್ಯಪ್ನಗರ

31 ವರ್ಷ ಬಳಿಕ ತ್ರಾಲ್‌ನಲ್ಲಿ ಹಿಜ್ಬುಲ್‌ ಸಂಘಟನೆ ನಿರ್ನಾಮ!

ಜಮ್ಮು ಮತ್ತು ಕಾಶ್ಮೀರದ ತ್ರಾಲ್‌ನಲ್ಲಿ ಹಿಬ್ಜುಲ್‌ ಸಂಘಟನೆಯನ್ನ ನಿರ್ನಾಮ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಈಗ ಒಬ್ಬನೇ ಒಬ್ಬ ಉಗ್ರ ತ್ರಾಲ್‌ನಲ್ಲಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ವರ್ಷ ಒಟ್ಟು 111 ಉಗ್ರರು ಸಾವನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

TIMESOFINDIA.COM 27 Jun 2020, 7:24 am
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್‌ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು 1989ರಿಂದಲೂ ಸಕ್ರಿಯವಾಗಿದ್ದ ಪಾಕಿಸ್ತಾನ ಪೋಷಿತ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯನ್ನು ಬುಡಸಮೇತ ಕಿತ್ತೊಗೆಯಲಾಗಿದೆ. ''31 ವರ್ಷಗಳ ಬಳಿಕ ಈ ಪ್ರದೇಶದಲ್ಲಿ ಒಬ್ಬನೇ ಒಬ್ಬ ಹಿಜ್ಬುಲ್‌ ಉಗ್ರ ಇಲ್ಲ,'' ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್‌ಕುಮಾರ್‌ ಶುಕ್ರವಾರ ಘೋಷಿಸಿದ್ದಾರೆ.
Vijaya Karnataka Web indian_army_iit_delhi_jammu_and_kashmir_iit_technology_indian_army_technology_artificial_intell_1548246078_725x725


''ಗುರವಾರ ರಾತ್ರಿಯಿಂದ ನಡೆದ 15 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಮೂವರು ಹಿಜ್ಬುಲ್‌ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಮೃತ ಉಗ್ರರನ್ನು ತ್ರಾಲ್‌ ನಿವಾಸಿಗಳಾದ ಮೊಹಮ್ಮದ್‌ ಖಾಸಿಮ್‌ ಶಾ ಅಲಿಯಾಸ್‌ ಜುಗ್ನು, ಬಸಿತ್‌ ಅಹ್ಮದ್‌ ಪರ್ರೇ ಹಾಗೂ ಹ್ಯಾರಿಸ್‌ ಮನ್ಜೂರ್‌ ಭಟ್‌ ಎಂದು ಗುರುತಿಸಲಾಗಿದೆ. ಇದರೊಂದಿಗೆ ತ್ರಾಲ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ನ ಒಬ್ಬ ಉಗ್ರನೂ ಇಲ್ಲದಂತಾಗಿದೆ,'' ಎಂದು ಐಜಿಪಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ,

ಕಾಶ್ಮೀರದಲ್ಲಿಈ ವರ್ಷ 111 ಉಗ್ರರು ಖತಂ!
ಪಾಕಿಸ್ತಾನವು ಕಾಶ್ಮೀರದ ಹಲವು ಯುವಕರನ್ನು ಪ್ರಚೋದಿಸಿ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ತರಬೇತಿ ಶಿಬಿರಗಳಿಗೆ ಸೇರಿಸಿಕೊಂಡಿತ್ತು. ಆ ಪೈಕಿ ತ್ರಾಲ್‌ ಪಟ್ಟಣ ಪಾಕ್‌ಗೆ ಯುವಕರನ್ನು ಸೆಳೆಯುವ ಮುಖ್ಯ ಕೇಂದ್ರವಾಗಿತ್ತು. ಹಿಜ್ಬುಲ್‌ ಕಮಾಂಡರ್‌ಗಳಾಗಿದ್ದ ಉಗ್ರ ಬುರ್ಹಾನ್‌ ವಾನಿ, ಝಾಕಿರ್‌ ಮೂಸಾ ಕೂಡ ತ್ರಾಲ್‌ ಮೂಲದವರೇ ಎನ್ನುವುದು ಗಮನಾರ್ಹ.

ಜಮ್ಮು ಕಾಶ್ಮೀರ: ಪಾಕ್‌ ಪೋಷಿತ ಉಗ್ರರ ದಾಳಿಗೆ ಓರ್ವ ಯೋಧ ಹುತಾತ್ಮ, 4 ವರ್ಷದ ಮಗು ಸಾವು!

ಇದನ್ನು ಅರಿತಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ಪಡೆ ಮೊದಲು ಹಿಜ್ಬುಲ್‌ ಉಗ್ರರು ನಂತರ ಅವರ ಸಹಚರರು, ಸ್ಥಳೀಯ ಸಹಾಯಕರನ್ನು ತ್ರಾಲ್‌ ಪಟ್ಟಣ ಮತ್ತು ಪುಲ್ವಾಮ ಜಿಲ್ಲೆಯಾದ್ಯಂತ ಗುರಿಯಾಗಿಸಿತ್ತು.ಈ ವರ್ಷ ಕಾಶ್ಮೀರದಲ್ಲಿಒಟ್ಟು 111 ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಮೂಲಕ ಹಿಜ್ಬುಲ್‌ ಸೇರಿದಂತೆ ಅನೇಕ ಪಾಕ್‌ ಸಂಘಟನೆಗಳ ನೆಲೆಯನ್ನು ಕಣಿವೆಯಿಂದ ಕಿತ್ತೊಗೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ