ಆ್ಯಪ್ನಗರ

ತಿರುವನಂತಪುರದಲ್ಲೊಂದು ಅದ್ಧೂರಿ ಮದುವೆ

ಮಾಜಿ ರೆವಿನ್ಯೂ ಸಚಿವ ಅಡೂರ್‌ ಪ್ರಕಾಶ್‌ ಅವರ ಪುತ್ರ ಅಜಯ್‌ ಮತ್ತು ಬಾರ್‌ ಬ್ರೈಬ್‌ ಪ್ರಕರಣವನ್ನು ಬಯಲಿಗೆಳೆದ ಬಿಜು ರಮೇಶ್‌ ಅವರ ಪುತ್ರಿ ಮೇಘಾ ಅವರ ಮದುವೆ ತಿರುವನಂತಪುರದಲ್ಲಿ ಅದ್ಧೂರಿಯಾಗಿ ನಡೆದಿದೆ.

ಮಲಯಾಳಂ ಸಮಯಂ 5 Dec 2016, 3:46 pm
ತಿರುವನಂತಪುರ: ದೇಶದಲ್ಲಿ ನಡೆದ ಅದ್ಧೂರಿ ಮದುವೆಗಳ ಪಟ್ಟಿಯಲ್ಲಿ ನಿನ್ನೆ ತಿರುವನಂತಪುರದಲ್ಲಿ ನಡೆದ ಮದುವೆಯೊಂದು ಸ್ಥಾನ ಪಡೆದುಕೊಂಡಿದೆ. ಮಾಜಿ ರೆವಿನ್ಯೂ ಸಚಿವ ಅಡೂರ್‌ ಪ್ರಕಾಶ್‌ ಅವರ ಪುತ್ರ ಅಜಯ್‌ ಮತ್ತು ಬಾರ್‌ ಬ್ರೈಬ್‌ ಪ್ರಕರಣವನ್ನು ಬಯಲಿಗೆಳೆದ ಬಿಜು ರಮೇಶ್‌ ಅವರ ಪುತ್ರಿ ಮೇಘಾ ಅವರ ಮದುವೆ ಅದ್ಧೂರಿಯಾಗಿ ನಡೆಯುವ ಮೂಲಕ ಎಲ್ಲರ ಗಮನ ಸೆಳೆದಿದೆ.
Vijaya Karnataka Web high profile wedding in trivandrum
ತಿರುವನಂತಪುರದಲ್ಲೊಂದು ಅದ್ಧೂರಿ ಮದುವೆ


ಈ ಮದುವೆಯ ಪೆಂಡಾಲ್‌ ಮತ್ತು ಮಂಟಪ ಸಿದ್ಧಪಡಿಸಲು ಒಂದೂವರೆ ತಿಂಗಳು ಹಿಡಿದಿದೆ. ಇಡೀ ಪೆಂಡಾಲ್‌ ದಿಲ್ಲಿ ಅಕ್ಷರಧಾಮ ದೇಗುಲದ ಸ್ವರೂಪದಲ್ಲಿತ್ತು. ಎಂಟು ಎಕರೆ ಪ್ರದೇಶದಲ್ಲಿ ಮದುವೆ ಸೆಟ್‌ ನಿರ್ಮಿಸಲಾಗಿತ್ತು. ಅತಿಥಿಗಳ ಭೇಟಿ, ಶುಭಾಶಯ ವಿನಿಮಯಕ್ಕಾಗಿ ನಿಗದಿಪಡಿಸಿರುವ ಪ್ರದೇಶವನ್ನು ಮೈಸೂರು ಅರಮನೆ ರೂಪದಲ್ಲಿ ನಿರ್ಮಿಸಲಾಗಿತ್ತು.

ಮದುವೆಗೆ ಇಪ್ಪತ್ತು ಸಾವಿರ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಹೆಚ್ಚಿನವರು ಬಂದಿಲ್ಲ. ಕೇರಳದ ಮಾಜಿ ಮುಖ್ಯಮಂತ್ರಿ ಉಮನ್‌ ಚಾಂಡಿ ಮತ್ತು ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಅವರು ಈ ಜೋಡಿಯ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು. ಇದಕ್ಕೆ ಕೆಇಸಿಸಿ ಅಧ್ಯಕ್ಷ ವಿ.ಎಂ. ಸುಧೀರ್‌ ಅವರಿಂದ ಟೀಕೆ ವ್ಯಕ್ತವಾಗಿತ್ತು. ಈಗ ನೋಟ್‌ ಬ್ಯಾನ್‌ ಬ್ಯಾನ್ ಹಿನ್ನೆಲೆಯಲ್ಲಿ ಈ ಅದ್ಧೂರಿ ಮದುವೆ ಬಿರುಸಿನ ಚರ್ಚೆಯನ್ನು ಹುಟ್ಟು ಹಾಕಿದ್ದ ಕಾರಣ ಗಣ್ಯರು ಇದರಿಂದ ದೂರವುಳಿದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ