ಹೊಸದಿಲ್ಲಿ: ಒಂದು ಹುಡುಗಿ ಹಿಜಾಬ್ (Hijab) ಧರಿಸಿದ್ದಾಳೆ ಎಂದರೆ ಅದು ಅವಳ ಆಯ್ಕೆ. ಅವಳಿಗೆ ಬೇಕಾದ ರೀತಿಯಲ್ಲಿ ಬದುಕಲು ಬಿಡಿ ಎಂದು 2021ರ ವಿಶ್ವ ಸುಂದರಿ ಹರ್ನಾಜ್ ಕೌರ್ ಸಂಧು (Harnaaz Kaur Sandhu) ಹೇಳಿದ್ದಾರೆ. ಈ ಮೂಲಕ ಹಿಜಾಬ್ ಪರ ಹರ್ನಾಜ್ ಕೌರ್ ಬ್ಯಾಟ್ ಬೀಸಿದ್ದು, ನಾವು ವಿಭಿನ್ನ ಸಂಸ್ಕೃತಿಯ ಮಹಿಳೆಯರು, ಒಬ್ಬರಿಗೊಬ್ಬರು ಗೌರವ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಿಜಾಬ್ ವಿವಾದದ (Hijab Row) ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆ ನಡೆಯುತ್ತಿರುವಾಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ 2021ರ ವಿಶ್ವ ಸುಂದರಿ ಹರ್ನಾಜ್ ಕೌರ್ ಸಂಧು, ಒಂದು ಹುಡುಗಿ ಹಿಜಾಬ್ ಧರಿಸುತ್ತಾಳೆ ಎಂದರೆ ಅದು ಅವಳ ಆಯ್ಕೆ. ಅವಳ ಮೇಲೆ ಯಾರಾದರೂ ದಬ್ಬಾಳಿಕೆ ನಡೆಸಿದರೂ ಅವಳು ಮುಂದೆ ಬಂದು ಮಾತನಾಡುವ ಅಗತ್ಯವಿದೆ. ಅವಳಿಗೆ ಬೇಕಾದ ರೀತಿಯಲ್ಲಿ ಬದುಕಲು ಬಿಡಿ ಎಂದು ಹರ್ನಾಜ್ ಕೌರ್ ಸಿಂಧು ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯೂ ಹಿಜಾಬ್ ಪರ ಮಾತನಾಡಿದ್ದ ಹರ್ನಾಜ್ ಕೌರ್, ಕೇವಲ ಹಿಜಾಬ್ ಅಷ್ಟೇ ಅಲ್ಲ. ಎಲ್ಲ ವಿಚಾರದಲ್ಲೂ ಮಹಿಳೆಯರನ್ನೇ ಯಾಕೆ ಗುರಿಯಾಗಿಸಿಕೊಂಡಿದ್ದೀರಿ. ಅವಳು ತನ್ನ ಜೀವನವನ್ನು ಬಯಸಿದಂತೆ ಬದುಕಲು ಬಿಡಿ. ಅವಳನ್ನು ಹಾರಾಡಲು ಬಿಡಿ. ಅವಳ ರೆಕ್ಕೆಗಳನ್ನು ಕತ್ತರಿಸಬೇಡಿ. ಎಲ್ಲ ವಿಚಾರದಲ್ಲೂ ಮಹಿಳೆಯರನ್ನು ಗುರಿ ಮಾಡುವುದನ್ನು ನಿಲ್ಲಿಸಿ. ಈಗ ನನ್ನ ಮಿಸ್ ಯುನಿವರ್ಸ್ ಸ್ಪರ್ಧೆ ಬಗ್ಗೆ ಮಾತ್ರ ಪ್ರಶ್ನೆ ಕೇಳಿ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದರು.
ಹಿಜಾಬ್ ವಿವಾದ ಏನು?
ಕರ್ನಾಟಕದ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು, ಉಡುಪಿಯ ಕಾಲೇಜಿನಿಂದ ಶುರುವಾದ ವಿವಾದ ಇಡೀ ರಾಜ್ಯಕ್ಕೆ ವಿಸ್ತರಿಸಿ ಹಿಜಾಬ್ VS ಕೇಸರಿ ಶಾಲಿನ ವಿವಾದವೂ ಕೂಡ ಶುರುವಾಗಿತ್ತು. ಅದಾದ ಬಳಿಕ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ (Karnataka High Court) ಹಿಜಾಬ್ ಮುಸ್ಲಿಂ ಧರ್ಮದ ಕಡ್ಡಾಯ ಆಚರಣೆಯಲ್ಲ ಎನ್ನುವ ಮೂಲಕ ತರಗತಿಗಳಲ್ಲಿ ಏಕರೂಪ ಸಮವಸ್ತ್ರ ನೀತಿ ತಂದಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಮೂಲಕ ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ತೀರ್ಪನ್ನು ನೀಡಿತ್ತು.
ಆದರೆ, ಹೈಕೋರ್ಟ್ ತೀರ್ಪಿಗೆ ಬೇಸರಗೊಂಡ ಮುಸ್ಲಿಂ ವಿದ್ಯಾರ್ಥಿನಿಯರು ಸುಪ್ರಿಂ ಕೋರ್ಟ್ಗೆ (Supreme Court) ಮೇಲ್ಮನವಿ ಸಲ್ಲಿಸಿದ್ದಾರೆ. ಹಿಜಾಬ್ ಬಗ್ಗೆ ಕುರಾನ್ನಲ್ಲಿ ಉಲ್ಲೇಖವಿದೆ ಎಂದಿರುವ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಲ್ಲದೇ ಮುಸ್ಲಿಂ ವ್ಯಾಪಾರಿಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದರು. ಈಗ ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ನಡೆಯುತ್ತಿರುವ ಹಲವು ಪರೀಕ್ಷಗಳಿಗೆ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿರುವುದು ಕಂಡುಬಂದಿದೆ.
ಕೆಲ ದಿನಗಳ ಹಿಂದೆಯೂ ಹಿಜಾಬ್ ಪರ ಮಾತನಾಡಿದ್ದ ಹರ್ನಾಜ್ ಕೌರ್, ಕೇವಲ ಹಿಜಾಬ್ ಅಷ್ಟೇ ಅಲ್ಲ. ಎಲ್ಲ ವಿಚಾರದಲ್ಲೂ ಮಹಿಳೆಯರನ್ನೇ ಯಾಕೆ ಗುರಿಯಾಗಿಸಿಕೊಂಡಿದ್ದೀರಿ. ಅವಳು ತನ್ನ ಜೀವನವನ್ನು ಬಯಸಿದಂತೆ ಬದುಕಲು ಬಿಡಿ. ಅವಳನ್ನು ಹಾರಾಡಲು ಬಿಡಿ. ಅವಳ ರೆಕ್ಕೆಗಳನ್ನು ಕತ್ತರಿಸಬೇಡಿ. ಎಲ್ಲ ವಿಚಾರದಲ್ಲೂ ಮಹಿಳೆಯರನ್ನು ಗುರಿ ಮಾಡುವುದನ್ನು ನಿಲ್ಲಿಸಿ. ಈಗ ನನ್ನ ಮಿಸ್ ಯುನಿವರ್ಸ್ ಸ್ಪರ್ಧೆ ಬಗ್ಗೆ ಮಾತ್ರ ಪ್ರಶ್ನೆ ಕೇಳಿ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದರು.
ಹಿಜಾಬ್ ವಿವಾದ ಏನು?
ಕರ್ನಾಟಕದ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು, ಉಡುಪಿಯ ಕಾಲೇಜಿನಿಂದ ಶುರುವಾದ ವಿವಾದ ಇಡೀ ರಾಜ್ಯಕ್ಕೆ ವಿಸ್ತರಿಸಿ ಹಿಜಾಬ್ VS ಕೇಸರಿ ಶಾಲಿನ ವಿವಾದವೂ ಕೂಡ ಶುರುವಾಗಿತ್ತು. ಅದಾದ ಬಳಿಕ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ (Karnataka High Court) ಹಿಜಾಬ್ ಮುಸ್ಲಿಂ ಧರ್ಮದ ಕಡ್ಡಾಯ ಆಚರಣೆಯಲ್ಲ ಎನ್ನುವ ಮೂಲಕ ತರಗತಿಗಳಲ್ಲಿ ಏಕರೂಪ ಸಮವಸ್ತ್ರ ನೀತಿ ತಂದಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಮೂಲಕ ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ತೀರ್ಪನ್ನು ನೀಡಿತ್ತು.
ಆದರೆ, ಹೈಕೋರ್ಟ್ ತೀರ್ಪಿಗೆ ಬೇಸರಗೊಂಡ ಮುಸ್ಲಿಂ ವಿದ್ಯಾರ್ಥಿನಿಯರು ಸುಪ್ರಿಂ ಕೋರ್ಟ್ಗೆ (Supreme Court) ಮೇಲ್ಮನವಿ ಸಲ್ಲಿಸಿದ್ದಾರೆ. ಹಿಜಾಬ್ ಬಗ್ಗೆ ಕುರಾನ್ನಲ್ಲಿ ಉಲ್ಲೇಖವಿದೆ ಎಂದಿರುವ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಲ್ಲದೇ ಮುಸ್ಲಿಂ ವ್ಯಾಪಾರಿಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದರು. ಈಗ ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ನಡೆಯುತ್ತಿರುವ ಹಲವು ಪರೀಕ್ಷಗಳಿಗೆ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿರುವುದು ಕಂಡುಬಂದಿದೆ.