ಆ್ಯಪ್ನಗರ

ಅಯೋಧ್ಯೆ ಅಭಿವೃದ್ಧಿಗೆ 350 ಕೋಟಿ ರೂ: ಸಿಎಂ ಯೋಗಿ

ಹಿಂದು, ಮುಸ್ಲಿಮರು ವಿವಾದ ಬಗೆಹರಿಸಲು ಒಪ್ಪಿದರೆ ಯೋಗಿ ಆದಿತ್ಯನಾಥ್ ಸಹಾಯ

ಏಜೆನ್ಸೀಸ್ 31 May 2017, 10:26 pm
ಲಖನೌ: ಒಂದು ವೇಳೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಆಯೋಧ್ಯೆಯ ರಾಮ ಮಂದಿರ ವಿವಾದವನ್ನು ಬಗೆಹರಿಸಲು ಸಮ್ಮತಿಸಿದರೆ, ರಾಜ್ಯ ಸರಕಾರ ಸಂಪೂರ್ಣ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
Vijaya Karnataka Web hindu muslim agree to resolve ayodhya issue
ಅಯೋಧ್ಯೆ ಅಭಿವೃದ್ಧಿಗೆ 350 ಕೋಟಿ ರೂ: ಸಿಎಂ ಯೋಗಿ


ಮಹಾಂತ ನೃತ್ಯ ಗೋಪಾಲ ದಾಸ್ ಅವರ 79ನೇ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಹಿಂದು ಮತ್ತು ಮುಸ್ಲಿಂ ಸುಮುದಾಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಮುಂದಾದರೆ ನಮ್ಮ ಸರಕಾರ ಸಂಪೂರ್ಣ ಬೆಂಬಲ ನೀಡುತ್ತದೆ. ಲಖನೌನಲ್ಲಿ ಹಲವು ಮುಸ್ಲಿಂ ಸಮುದಾಯದವರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

ಆಯೋಧ್ಯೆಯ ಎಲ್ಲ ಬೀದಿಗಳಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಹಾಕುವುದಾಗಿ ತಿಳಿಸಿದ ಆದಿತ್ಯನಾಥ್, ಅಯೋಧ್ಯೆಯ ಅಭಿವೃದ್ಧಿ 350 ಕೋಟಿ ರೂ. ವಿನಿಯೋಗಿಸುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ