ಆ್ಯಪ್ನಗರ

December 6: ಗಲಾಟೆಯಲ್ಲೂ ಮುಸ್ಲಿಮರನ್ನು ರಕ್ಷಿಸಿದ ಹಿಂದುಗಳು

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸವಾಗಿ ಗಲಭೆ ಸಂಭವಿಸಿದ ಬಳಿಕ ಅಲ್ಲಿದ್ದ ಮುಸ್ಲಿಮರಿಗೆ ಜೀವಭಯವಿತ್ತು. ಆದರೆ ಅವರನ್ನು ಅಯೋಧ್ಯೆಯ ಹಿಂದುಗಳು ಆಶ್ರಯ ನೀಡಿ ರಕ್ಷಿಸಿದ್ದರು. ಉದ್ರಿಕ್ತ ಕರಸೇವಕರನ್ನು ಸಮಾಧಾನಿಸಿ ವಾಪಸ್ ಕಳುಹಿಸಿ, ಮುಸ್ಲಿಮರ ಜೀವ ಉಳಿಸಿದ್ದರು.

Vijaya Karnataka Web 6 Dec 2018, 1:17 pm
ಅಯೋಧ್ಯೆ: 1992ರ ಡಿ. 6ರಂದು ಅಯೋಧ್ಯೆಯಲ್ಲಿ ಸೇರಿದ್ದ ಭಾರಿ ಸಂಖ್ಯೆಯ ಕರಸೇವಕರು ಬಾಬ್ರಿ ಮಸೀದಿ ಧ್ವಂಸಗೊಳಿಸುವ ಜತೆಗೆ ಅಲ್ಲಿದ್ದ ಮುಸ್ಲಿಮರ ಮೇಲೂ ದಾಳಿ ನಡೆಸಿದ್ದರು. ಆದರೆ ಆಯೋಧ್ಯೆಯ ಹಿಂದುಗಳು ಅಲ್ಲಿನ ಮುಸ್ಲಿಮರನ್ನು ರಕ್ಷಿಸಿದ್ದರು.
Vijaya Karnataka Web ayodhya2


ಬಾಬ್ರಿ ಮಸೀದಿ ಧ್ವಂಸಕ್ಕೆ ಗುರುವಾರ 26 ವರ್ಷವಾಗುತ್ತಿದ್ದು, ಅಂದಿನ ದಿನ ನಡೆದ ಗಲಭೆಯ ಕುರಿತು ಅಯೋಧ್ಯೆಯ ಜನತೆ ನೆನಪು ಮಾಡಿಕೊಂಡಿದ್ದಾರೆ. ಅಂದು ಸುಮಾರು 50-60 ಮುಸ್ಲಿಮರ ಮನೆಗಳು ಅಯೋಧ್ಯೆಯಲ್ಲಿದ್ದವು. ಜತೆಗೆ ಅಯೋಧ್ಯೆಯಲ್ಲಿ ಸುಮಾರು 4,500 ಮುಸ್ಲಿಮರು ವಾಸವಾಗಿದ್ದರು.

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸವಾಗಿ ಗಲಭೆ ಸಂಭವಿಸಿದ ಬಳಿಕ ಅಲ್ಲಿದ್ದ ಮುಸ್ಲಿಮರಿಗೆ ಜೀವಭಯವಿತ್ತು. ಆದರೆ ಅವರನ್ನು ಅಯೋಧ್ಯೆಯ ಹಿಂದುಗಳು ಆಶ್ರಯ ನೀಡಿ ರಕ್ಷಿಸಿದ್ದರು. ಉದ್ರಿಕ್ತ ಕರಸೇವಕರನ್ನು ಸಮಾಧಾನಿಸಿ ವಾಪಸ್ ಕಳುಹಿಸಿ, ಮುಸ್ಲಿಮರ ಜೀವ ಉಳಿಸಿದ್ದರು.

ಜತೆಗೆ ಜೀವದ ಹಂಗು ತೊರೆದು ಹಲವು ಪುರೋಹಿತರು ದೇಗುಲದಲ್ಲಿ ಮುಸ್ಲಿಮರನ್ನು ಇರಿಸಿ ಅವರು ಹಲ್ಲೆಗೊಳಗಾಗುವುದನ್ನು ತಪ್ಪಿಸಿದರು ಎಂದು ಲೇಖಕ ಅನುರಾಗ್ ಶುಕ್ಲಾ ಹೇಳಿದ್ದಾರೆ.

ಅಯೋಧ್ಯಾ ಮುಸ್ಲಿಂ ಕಲ್ಯಾಣ ಸಮಿತಿಯ ಸಾದಿಕ್ ಅಲಿ ಕೂಡ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದು, ಸಾಧು ಸಂತರು, ಅಯೋಧ್ಯೆಯ ಹಿಂದುಗಳು ನಮ್ಮವರನ್ನು ಅಂದು ರಕ್ಷಿಸಿದ್ದರು. ಪರಿಸ್ಥಿತಿ ಶಾಂತವಾದ ಬಳಿಕವಷ್ಟೇ ನಮ್ಮನ್ನು ಹೊರಹೋಗಲು ಬಿಟ್ಟಿದ್ದರು, ಅಲ್ಲಿಯವರೆಗೆ ಆಶ್ರಯ ನೀಡಿ ಕಾಪಾಡಿದ್ದರು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ