ಹೊಸದಿಲ್ಲಿ: ಮಾನಸ ಸರೋವರದಲ್ಲಿ ಪವಿತ್ರ ಸ್ನಾನಕ್ಕೆ ಚೀನಾ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಮಾನಸ ಸರೋವರ ಯಾತ್ರಿಗಳು ಆರೋಪಿಸಿದ್ದಾರೆ.
ಡೋಕ್ಲಾಂ ವಿವಾದದ ಬಳಿಕ, ಕಳೆದ 72 ದಿನಗಳಿಂದ ಮಾನಸ ಸರೋವರ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. 20 ದಿನಗಳ ಹಿಂದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾನಸ ಸರೋವರ ಯಾತ್ರೆಗೆ ಅನುಮತಿ ನೀಡಿದ್ದರು.
ಒಟ್ಟಾರೆ 1580 ಯಾತ್ರಿಕರನ್ನು ಮಾಸನ ಸರೋವರಕ್ಕೆ ಕಳುಹಿಸಲಾಗುವುದು. ಬ್ಯಾಚ್ಗಳ ಆಧಾರದಲ್ಲಿ ಯಾತ್ರಿಕರನ್ನು ಕಳುಹಿಸಲು ನಿಶ್ಚಯಿಸಲಾಗಿದ್ದು, ಪ್ರತಿ ಬ್ಯಾಚ್ನಲ್ಲಿ 60 ಮಂದಿ ಇರಲಿದ್ದಾರೆ. ಇಂತಹ 18 ಬ್ಯಾಚ್ಗಳಲ್ಲಿ ಲಿಪುಲೇಖ್ ಪಾಸ್ ಮೂಲಕ ಹಾಗೂ 10 ಬ್ಯಾಚ್ನಲ್ಲಿ ನಾತು ಲಾ ಪಾಸ್ ಮೂಲಕ ಕಳುಹಿಸಲಾಗುತ್ತದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ನಾತು ಲಾ ಪಾಸ್ನ ಜನರಲ್ಲಿ ಪರಸ್ಪರ ಸ್ನೇಹ ಸಂಬಂಧ ಬೆಳೆಯೇ ಇದ್ದಲ್ಲಿ, ಸರಕಾರಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯುವುದು ಕಷ್ಟ ಎಂದು ಚೀನಾಗೆ ತಿಳಿಸಿರುವುದಾಗಿಯೂ ಸುಷ್ಮಾ ತಿಳಿಸಿದ್ದಾರೆ.
ಜೂನ್ ನಿಂದ 4 ತಿಂಗಳ ಕಾಲ ಮಾನಸ ಸರೋವರ ಯಾತ್ರೆಗೆ ಅನುಮತಿ ನೀಡಲಾಗುತ್ತಿದ್ದು, ಭಾರತದ ಸಾವಿರಾರು ಯಾತ್ರಿಗಳು ಪಾಲ್ಗೊಳ್ಳುತ್ತಾರೆ.
ಡೋಕ್ಲಾಂ ವಿವಾದದ ಬಳಿಕ, ಕಳೆದ 72 ದಿನಗಳಿಂದ ಮಾನಸ ಸರೋವರ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. 20 ದಿನಗಳ ಹಿಂದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾನಸ ಸರೋವರ ಯಾತ್ರೆಗೆ ಅನುಮತಿ ನೀಡಿದ್ದರು.
ಒಟ್ಟಾರೆ 1580 ಯಾತ್ರಿಕರನ್ನು ಮಾಸನ ಸರೋವರಕ್ಕೆ ಕಳುಹಿಸಲಾಗುವುದು. ಬ್ಯಾಚ್ಗಳ ಆಧಾರದಲ್ಲಿ ಯಾತ್ರಿಕರನ್ನು ಕಳುಹಿಸಲು ನಿಶ್ಚಯಿಸಲಾಗಿದ್ದು, ಪ್ರತಿ ಬ್ಯಾಚ್ನಲ್ಲಿ 60 ಮಂದಿ ಇರಲಿದ್ದಾರೆ. ಇಂತಹ 18 ಬ್ಯಾಚ್ಗಳಲ್ಲಿ ಲಿಪುಲೇಖ್ ಪಾಸ್ ಮೂಲಕ ಹಾಗೂ 10 ಬ್ಯಾಚ್ನಲ್ಲಿ ನಾತು ಲಾ ಪಾಸ್ ಮೂಲಕ ಕಳುಹಿಸಲಾಗುತ್ತದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ನಾತು ಲಾ ಪಾಸ್ನ ಜನರಲ್ಲಿ ಪರಸ್ಪರ ಸ್ನೇಹ ಸಂಬಂಧ ಬೆಳೆಯೇ ಇದ್ದಲ್ಲಿ, ಸರಕಾರಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯುವುದು ಕಷ್ಟ ಎಂದು ಚೀನಾಗೆ ತಿಳಿಸಿರುವುದಾಗಿಯೂ ಸುಷ್ಮಾ ತಿಳಿಸಿದ್ದಾರೆ.
ಜೂನ್ ನಿಂದ 4 ತಿಂಗಳ ಕಾಲ ಮಾನಸ ಸರೋವರ ಯಾತ್ರೆಗೆ ಅನುಮತಿ ನೀಡಲಾಗುತ್ತಿದ್ದು, ಭಾರತದ ಸಾವಿರಾರು ಯಾತ್ರಿಗಳು ಪಾಲ್ಗೊಳ್ಳುತ್ತಾರೆ.