ಆ್ಯಪ್ನಗರ

ಪಶ್ಚಿಮ ಬಂಗಾಳದ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ಪ್ರಕರಣ ಸಂಬಂಧ ಆರು ಮಂದಿ ಐಪಿಎಸ್ ಹಿರಿಯ ಪೊಲೀಸ್ ಅಧಿಕಾರಿಗಳ ಪದಕ ಹಿಂಪಡೆತ, ಸೀನಿಯಾರಿಟಿ ಪಟ್ಟಿಯಿಂದ ಹೆಸರು ತೆಗೆಯುವುದು ಸಹಿತ ವಿವಿಧ ಶಿಸ್ತುಕ್ರಮಕ್ಕೆ ಮುಂದಾಗಲಿದೆ.

Vijaya Karnataka Web 8 Feb 2019, 10:25 am
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಸಿಬಿಐ ಮತ್ತು ಪೊಲೀಸ್ ಇಲಾಖೆ ನಡುವೆ ಉಂಟಾದ ಸಂಘರ್ಷಕ್ಕೆ ಕಾರಣವಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಶಿಸ್ತು ಕ್ರಮ ಕೈಗೊಳ್ಳಲಿದೆ.
Vijaya Karnataka Web Rajeev Kumar


ಪ್ರಕರಣ ಸಂಬಂಧ ಆರು ಮಂದಿ ಐಪಿಎಸ್ ಹಿರಿಯ ಪೊಲೀಸ್ ಅಧಿಕಾರಿಗಳ ಪದಕ ಹಿಂಪಡೆತ, ಸೀನಿಯಾರಿಟಿ ಪಟ್ಟಿಯಿಂದ ಹೆಸರು ತೆಗೆಯುವುದು ಸಹಿತ ವಿವಿಧ ಶಿಸ್ತುಕ್ರಮಕ್ಕೆ ಮುಂದಾಗಲಿದೆ.

ಸಿಎಂ ಮಮತಾ ಬ್ಯಾನರ್ಜಿ ಅವರ ಧರಣಿಗೆ ಸಂಬಂಧಿಸಿ, ಡಿಜಿಪಿ ವಿರೇಂದ್ರ, ಎಡಿಜಿ (ಭದ್ರತೆ) ವಿನೀತ್ ಕುಮಾರ್ ಗೋಯಲ್, ಎಡಿಜಿ (ಕಾನೂನು ಮತ್ತು ಆದೇಶ) ಅನುಜ್ ಶರ್ಮಾ, ಬಿಧಾನಗರ್ ಪೊಲೀಸ್ ಆಯುಕ್ತ ಜ್ಞಾನವಂತ್ ಸಿಂಗ್ ಮತ್ತು ಕೋಲ್ಕತಾ ಹೆಚ್ಚುವರಿ ಆಯುಕ್ತ ಸುಪ್ರಟಿಮ್ ಸರ್ಕಾರ್ ವಿರುದ್ಧ ಶಿಸ್ತುಕ್ರಮಕ್ಕಾಗಿ ಗೃಹ ಸಚಿವಾಲಯ ಸಿದ್ಧತೆ ನಡೆಸಿದೆ.

ಉಳಿದಂತೆ ಪ್ರಕರಣದ ಕೇಂದ್ರಬಿಂದು ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ಶಿಸ್ತುಕ್ರಮಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.

ಅಖಿಲ ಭಾರತೀಯ ಸೇವಾ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದು ಮತ್ತು ಕೇಂದ್ರ ಇಲಾಖೆಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸಹಿತ ವಿವಿಧ ಪ್ರಕರಣದಲ್ಲಿ ಶಿಸ್ತುಕ್ರಮಕ್ಕೆ ಗೃಹ ಇಲಾಖೆ ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ