ಆ್ಯಪ್ನಗರ

ಹನಿಪ್ರೀತ್‌ ಸಿಂಗ್‌ ನೇಪಾಳಕ್ಕೆ ಪರಾರಿ?

ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರುಮಿತ್ ರಾಮ್ ರಹೀಂನ ಪರಮಾಪ್ತೆ ಹನಿಪ್ರೀತ್ ಸಿಂಗ್‌ ನೇಪಾಳಕ್ಕೆ ಪರಾರಿಯಾಗಿರಬಹುದು ಎನ್ನಲಾಗಿದೆ.

TNN 17 Sep 2017, 6:21 pm
ರಾಜಸ್ಥಾನ: ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮಿತ್‌ ರಾಮ್ ರಹೀಂನ ಪರಮಾಪ್ತೆ ಹನಿಪ್ರೀತ್ ಸಿಂಗ್‌ ನೇಪಾಳಕ್ಕೆ ಪರಾರಿಯಾಗಿರಬಹುದು ಎನ್ನಲಾಗಿದೆ.
Vijaya Karnataka Web honeypreet fled to nepal says arrested dera official
ಹನಿಪ್ರೀತ್‌ ಸಿಂಗ್‌ ನೇಪಾಳಕ್ಕೆ ಪರಾರಿ?


ಅತ್ಯಾಚಾರ ಪ್ರಕರಣದಲ್ಲಿ ಬಾಬಾ ರಾಮ್​ ರಹೀಂಗೆ ಸುಪ್ರೀಂ ಕೋರ್ಟ್‌ 20 ವರ್ಷ ಜೈಲು ಶಿಕ್ಷೆ ಪ್ರಕಟಗೊಳಿಸಿತ್ತು. ಆದರೆ ಇದಕ್ಕೂ ಮುನ್ನ ತನ್ನ ಮಲ ತಂದೆ ಗುರ್ಮಿತ್ ನನ್ನು ಪರಾರಿ ಮಾಡಲು ಹನಿಪ್ರಿತ್ ಸಂಚು ರೂಪಿಸಿದ್ದಳು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಹನಿಪ್ರೀತ್'ಗಾಗಿ ಹರಿಯಾಣ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಹರಿಯಾಣ ಪೊಲೀಸ್‌ ಮೂಲಗಳ ಪ್ರಕಾರ ಹನಿಪ್ರೀತ್‌ಳ ಮೊಬೈಲ್‌ ಸಿಗ್ನಲ್‌ ಉದಯ ಪುರ್‌ದಲ್ಲಿ ಕೊನೆಯದಾಗಿ ಸಿಕ್ಕಿತ್ತು. ಹೀಗಾಗಿ ಹರಿಯಾಣ ಪೊಲೀಸರು ಉದಯಪುರ್‌ನ ಹಲವಾರು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಡೇರಾದ ಉದಯಪುರದ ಮೇಲ್ವಿಚಾರಕ ಪ್ರದೀಪ್‌ ಗೋಯಲ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಈತ ನೇಪಾಳಕ್ಕೆ ಹೋಗಿರುವ ಮಾಹಿತಿಯನ್ನು ಪ್ರದೀಪ್‌ ಪೊಲೀಸರೊಂದಿಗೆ ಹಂಚಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಸದ್ಯ ಪೊಲೀಸರ ಒಂದು ತಂಡ ಹನಿಪ್ರೀತ್‌ಗಾಗಿ ನೇಪಾಳದಲ್ಲಿ ಶೋಧ ಕಾರ್ಯ ಮುಂದುವರೆಸುತ್ತಿದೆ ಎನ್ನಲಾಗಿದೆ.

honeypreet fled to nepal, says arrested dera official

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ