ಆ್ಯಪ್ನಗರ

ರಾಮ್ ರಹೀಂ-ಹನಿಪ್ರೀತ್ ತಂದೆ-ಮಗಳಲ್ಲ, ಅಕ್ರಮ ಸಂಬಂಧಿಗಳು!

ಜೈಲು ಸೇರಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ನ 'ದತ್ತುಪುತ್ರಿ' ...

Agencies 23 Sep 2017, 9:35 am

ಚಂಡೀಗಢ/ಹೊಸದಿಲ್ಲಿ: ಜೈಲು ಸೇರಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ನ 'ದತ್ತುಪುತ್ರಿ' ಹನಿಪ್ರೀತ್‌ ಇನ್ಸಾನ್‌ಗೆ ಪೊಲೀಸರು ಶೋಧ ನಡೆಸುತ್ತಿರುವ ಹೊತ್ತಿನಲ್ಲಿಯೇ ಆಕೆಯ ಮಾಜಿ ಪತಿ ವಿಶ್ವಾಸ್‌ ಗುಪ್ತಾ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಬಾಬಾ ರಾಮ್‌ ರಹೀಂ ಸಿಂಗ್‌, ಹನಿಪ್ರೀತ್‌ ತನ್ನ ಸಾಕು ಮಗಳು ಎಂದು ಹೇಳುತ್ತಿದ್ದರೂ ಅವರಿಬ್ಬರ ನಡುವೆ ತಂದೆ-ಮಗಳ ಸಂಬಂಧವಿರಲಿಲ್ಲ. ಬದಲಿಗೆ ಅಕ್ರಮ ಸಂಬಂಧವಿತ್ತು ಎಂದು ಆರೋಪಿಸಿದ್ದಾರೆ.

ಚಂಡೀಗಢದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಶ್ವಾಸ್‌ ಗುಪ್ತಾ, ''ಬಾಬಾ ಒಬ್ಬ ಕಾಮುಕ. ಆತ ಮತ್ತು ಹನಿಪ್ರೀತ್‌ ಇಬ್ಬರೂ ಬೆಡ್‌ರೂಂನಲ್ಲಿ ಒಟ್ಟಿಗೆ ಇರುತ್ತಿದ್ದರು. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಹನಿಪ್ರೀತ್‌ ತನ್ನ ಮಗಳೆಂದು ಆತ ಹೇಳುತ್ತಿದ್ದನಾದರೂ ಇಬ್ಬರ ನಡುವೆ ತಂದೆ-ಮಗಳ ಸಂಬಂಧ ಇರಲಿಲ್ಲ. ಬದಲಿಗೆ ಅಕ್ರಮ ಸಂಬಂಧವಿತ್ತು. ಇದನ್ನು ಬಯಲು ಮಾಡುತ್ತೇನೆಂದಾಗ ನನಗೆ ಜೀವ ಬೆದರಿಕೆ ಹಾಕಿದ್ದ,'' ಎಂದು ದೂರಿದ್ದಾರೆ.

ಬಿಗ್‌ಬಾಸ್‌ ಸೆಟ್‌ ನಿರ್ಮಾಣ: ''ಹನಿಪ್ರೀತ್‌ಳನ್ನು ನಾನು 1999ರಲ್ಲಿ ಮದುವೆಯಾಗಿದ್ದೆ. ನಮ್ಮಂತಹ ಆರು ದಂಪತಿಯನ್ನು ಕರೆಸಿ, ಡೇರಾ ಸಚ್ಚಾ ಸೌಧಾದ ಆಶ್ರಮದಲ್ಲಿ ಬಿಗ್‌ಬಾಸ್‌ ರೀತಿಯ ಸೆಟ್‌ ಹಾಕಿಸಿ 28 ದಿನಗಳ ಕಾಲ ಆಟವಾಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸೋತವರು ರಾಮ್‌ ರಹೀಂನ ಗುಹೆಯಲ್ಲಿ (ಗುಫಾ) ಆತನೊಂದಿಗೆ ಕಾಲ ಕಳೆಯಬೇಕಿತ್ತು. ಹನಿಪ್ರೀತ್‌ ಬೇಕೆಂದಲೇ ಸೋತು ಸೇವೆಯ ನೆಪದಲ್ಲಿ ಬಾಬಾನ ಕೊಠಡಿ ಸೇರುತ್ತಿದ್ದಳು. ನನಗೆ ಒಳಗೆ ಬಿಡುತ್ತಿರಲಿಲ್ಲ. ಪ್ರತಿಭಟಿಸಿದರೆ ಬಾಬಾನ ಬೆಂಬಲಿಗರು ಹುಷಾರ್‌ ಎಂದು ಧಮಕಿ ಹಾಕುತ್ತಿದ್ದರು,'' ಎಂದು ಅವರು ಆಪಾದಿಸಿದ್ದಾರೆ. ಅಲ್ಲದೇ ಇವರಿಬ್ಬರೂ ಹೊರಗಡೆ ಸುತ್ತಾಡುವಾಗ ನನಗೆ ಕಾರು ಡ್ರೈವ್‌ ಮಾಡಲು ಹೇಳಿ, ತಾವಿಬ್ಬರೂ ಹಿಂಬದಿಯ ಸೀಟಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು ಎಂದೂ ವಿಶ್ವಾಸ ಹೇಳಿದ್ದಾರೆ.

ನಿಜನಾಮ ಪ್ರಿಯಾಂಕಾ ತನೇಜಾ

''ಹನಿಪ್ರೀತ್‌ಳ ನಿಜವಾದ ಹೆಸರು ಪ್ರಿಯಾಂಕಾ ತನೇಜಾ. 2009ರಲ್ಲಿ ಆಕೆ ಡೇರಾ ಆಶ್ರಮ ಸೇರಿದ ಬಳಿಕ ವರ್ತನೆ ಬದಲಾಯಿತು. ಕ್ರಮೇಣ ಗುರ್ಮಿತ್‌ ಜತೆ ಸಲುಗೆ ಬೆಳೆಸಿ ಆಶ್ರಮದ ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿಕೊಂಡಳು. ಇಬ್ಬರೂ ಆತ್ಮಿಯರಾದರು. ಅದು ಎಲ್ಲೆಮೀರಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ನಿನ್ನ ಪತ್ನಿಗೆ ವಿಚ್ಛೇದನ ಕೊಡುವಂತೆ ಬಾಬಾ ನನ್ನ ಮೇಲೆ ಒತ್ತಡ ಹಾಕಿದ್ದ. ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಮುಂದಿಟ್ಟುಕೊಂಡು ವರದಕ್ಷಿಣೆ ಕೇಸ್‌ ಹಾಕಿಸಿದ. ಕೊನೆಗೆ ಬೇಸತ್ತು 2011ರಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದೆ,'' ಎಂದೂ ವಿಶ್ವಾಸ್‌ ಗುಪ್ತಾ ಹೇಳಿದ್ದಾರೆ.

''ನನಗೀಗಲೂ ಜೀವ ಬೆದರಿಕೆ ಇದೆ. ಈ ಪತ್ರಿಕಾಗೋಷ್ಠಿ ಬಳಿಕ ನಾನು ಬದುಕುಳಿವುದೇ ಗ್ಯಾರೆಂಟಿ ಇಲ್ಲ.''

Vijaya Karnataka Web honeypreets adoption is a sham says ex husband
ರಾಮ್ ರಹೀಂ-ಹನಿಪ್ರೀತ್ ತಂದೆ-ಮಗಳಲ್ಲ, ಅಕ್ರಮ ಸಂಬಂಧಿಗಳು!

-ವಿಶ್ವಾಸ್‌ ಗುಪ್ತಾ, ಹನಿಪ್ರೀತ್‌ ಮಾಜಿ ಪತಿ

--------
ಹನಿ ಶೋಧಕ್ಕೆ ಇನಾಮು

ತಲೆಮರೆಸಿಕೊಂಡಿರುವ ಹನಿಪ್ರೀತ್‌ ಇನ್ಸಾನ್‌ಳನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಇನಾಮು ನೀಡುವುದಾಗಿ ಉತ್ತರ ಪ್ರದೇಶದ ಶಹಾಜನ್‌ಪುರದ ಸಾಮಾಜಿಕ ಕಾರ‍್ಯಕರ್ತ ಫಕೀರೆಲಾಲ್‌ ಭೋಜ್‌ಬಾಲ್‌ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ