ಆ್ಯಪ್ನಗರ

ಕರ್ವಾ ಚೌತ್ ವ್ರತ ಮಾಡಿದಾಕೆ ಪತಿಯನ್ನು ಕೊಂದಿದ್ದೇಕೆ?

45 ವರ್ಷದ ಕವಿತಾ ಸೈನಿ ತನ್ನ ಮಗ ಕುಲದೀಪ್ ಮತ್ತು ಮನೆಗೆಲಸದವಳಾದ ಶಾದ್ರಿ ಸಹಾಯದೊಂದಿಗೆ ಶನಿವಾರ ರಾತ್ರಿ ಪತಿ ಸುಂದರ ಪಾಲ್ ಸೈನಿಯ ತಲೆಯ ಮೇಲೆ ರಾಡ್‌ನಿಂದ ಹೊಡೆದು ಕೊಂದಳು.

TIMESOFINDIA.COM 30 Oct 2018, 4:13 pm
ಮೀರತ್: ಉತ್ತರ ಭಾರತದ ಇತರ ಸ್ತ್ರೀಯರಂತೆ ಆಕೆ ಕೂಡ ಕರ್ವಾ ಚೌತ್ ಉಪವಾಸವನ್ನು ಕಟ್ಟುನಿಟ್ಟಾಗಿ ಆಚರಿಸಿದ್ದಳು. ಪತಿಯ ಆರೋಗ್ಯ ಮತ್ತು ಆಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದಳು. ವಧುವಿನ ಅಲಂಕಾರ ಮಾಡಿಕೊಂಡು, ನಾಚಿಕೆಯ ನಗುವನ್ನು ಹೊತ್ತು ಚಂದ್ರನಿಗಾಗಿ ಕಾದು, ಬಳಿಕ ಪತಿಯ ಜತೆಯಲ್ಲಿಯೇ ಆಹಾರವನ್ನು ಸೇವಿಸಿದ್ದಳು. ಆದರೆ ಚಂದ್ರ ಆಗಸದಿಂದ ಮರೆಯಾಗುತ್ತಿದ್ದಂತೆ ಅವಳ ನಕಲಿ ನಗು ಮರೆಯಾಗುತ್ತ ಬಂತು. ನಿರುಮ್ಮಳವಾಗಿ ನಿದ್ರಿಸುತ್ತಿದ್ದ ಪತಿಯ ಮುಖವನ್ನು ಕೊನೆಯ ಬಾರಿ ನೋಡಿದ ಆಕೆ ಆತನ ಆಯುಷ್ಯವನ್ನು ತಾನೇ ಕೊನೆಗೊಳಿಸಿದ್ದಳು. ತನ್ನ ಮಗಳ ಹತ್ಯೆಯ ಸೇಡು ತೀರಿಸಿಕೊಳ್ಳಲು ಅವನನ್ನು ಬರ್ಬರವಾಗಿ ಹತ್ಯೆಗೈದಿದ್ದಳು.
Vijaya Karnataka Web Karwa


ಮಿರತ್ ನಿವಾಸಿ 45 ವರ್ಷದ ಕವಿತಾ ಸೈನಿ ತನ್ನ ಮಗ ಕುಲದೀಪ್ ಮತ್ತು ಮನೆಗೆಲಸದವಳಾದ ಶಾದ್ರಿ ಸಹಾಯದೊಂದಿಗೆ ಶನಿವಾರ ರಾತ್ರಿ ಪತಿ ಸುಂದರ ಪಾಲ್ ಸೈನಿಯ ತಲೆಯ ಮೇಲೆ ರಾಡ್‌ನಿಂದ ಹೊಡೆದು ಕೊಂದಳು. ಹಲವು ದಿನಗಳಿಂದ ಪತಿಯ ಹತ್ಯೆ ಸಂಚು ರೂಪಿಸಿದ್ದ ಆಕೆ ಅದಕ್ಕಾಗಿ ಕರ್ವಾ ಚೌತ್ ಹಬ್ಬದ ದಿನವನ್ನೇ ಆರಿಸಿಕೊಂಡಿದ್ದಳು. ಪೊಲೀಸರಿಗೆ ಹತ್ಯೆ ಸಂಚು ಬರಬಾರದೆಂದು ಆಕೆ ಈ ಪ್ಲ್ಯಾನ್ ಮಾಡಿದ್ದಳು.

ಕೇವಲ ಎರಡು ದಿನಗಳಲ್ಲಿ ಈ ಹತ್ಯೆಯ ರಹಸ್ಯ ಭೇದಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಆಕೆ 8 ವರ್ಷದ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ಪತಿ 14 ವರ್ಷದ ಮಗಳನ್ನು ಕೊಂದಿದ್ದ ಮತ್ತು ಬಳಿಕ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸುಳ್ಳು ಕಥೆ ಸೃಷ್ಟಿಸಿದ್ದ. ಆತನ ಭಯಕ್ಕೆ ನಾವು ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ಸಲ್ಲಿಸಿರಲಿಲ್ಲ . ಇದು ಕೌಟುಂಬಿಕ ರಹಸ್ಯವಾಗಿಯೇ ಉಳಿಯಿತು. ಅದರ ಜತೆಗೆ ಪತಿ ನನಗೆ ಮತ್ತು ಮಗನಿಗೆ ಸದಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಮಗಳ ಸಾವಿನ ಸೇಡು ತೀರಿಸಿಕೊಳ್ಳಲು ಮತ್ತು ಮಗನ ಭವಿಷ್ಯದ ದೃಷ್ಟಿಯಿಂದ ನಾನು ಈ ನಿರ್ಧಾರವನ್ನು ಮಾಡಿದೆ ಎಂದು ಹೇಳಿದ್ದಾಳೆ.

ಏನಿದು ಕರ್ವಾ ಚೌತ್ ?

ಕರ್ವಾ ಚೌತ್ ಎನ್ನುವುದು ಹಿಂದೂ ಹಾಗೂ ಸಿಕ್ ಧರ್ಮದ ವಿವಾಹಿತ ಸ್ತ್ರೀಯರು ವಿಶೇಷವಾಗಿ ಉತ್ತರ ಭಾರತದಲ್ಲಿ ಆಚರಿಸುವ ಹಬ್ಬ. ಈ ದಿನದಂದು ತಮ್ಮ ಪತಿಯ ಒಳಿತಿಗಾಗಿ ವಿವಾಹಿತ ಸ್ತ್ರೀಯರು ಇಡೀ ದಿನ ಆಹಾರ, ನೀರು ಏನನ್ನೂ ಸೇವಿಸದೇ, ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಪತಿಯ ಮೇಲಿನ ವಿಶೇಷ ಪ್ರೀತಿ ಹಾಗೂ ಭಕ್ತಿಯ ಸಂಕೇತವಿದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ