ಆ್ಯಪ್ನಗರ

ಚಂದ್ರಯಾನ 2: ಅಕಸ್ಮಾತ್‌ ಯಶಸ್ವಿಯಾದರೆ ಚೆನ್ನೈಯ ನೀರಿನ ಸಮಸ್ಯೆಗೆ ಉತ್ತರ?

ಚಂದ್ರಯಾನ 2 ಕೊನೆಯ ಕ್ಷಣಗಳಲ್ಲಿ ಹಿನ್ನಡೆ ಅನುಭವಿಸಿದ್ದು, ಅಕಸ್ಮಾತ್‌ ವಿಕ್ರಮ್‌ನ ಒಡಲಲ್ಲಿರುವ ಪ್ರಜ್ಞಾನ್‌ ರೋವರ್‌ಗೆ ಜೀವ ಬಂದು ಚಂದ್ರನ ಮೇಲೆಲ್ಲಾ ಓಡಾಡಿದರೆ ಭಾರತದ ಕುಡಿಯುವ ನೀರಿನ ಸಮಸ್ಯೆಗೆ ಹೇಗೆ ಪರಿಹಾರ ಸಿಗುತ್ತದೆ? ಇಲ್ಲಿದೆ ವಿವರ.

Vijaya Karnataka Web 7 Sep 2019, 9:42 am
ಲ್ಯಾಂಡರ್‌ ವಿಕ್ರಮ್‌ ತಿಂಗಳ ಅಂಗಳದಲ್ಲಿ ಇಳಿಯಲು ಇನ್ನೇನು ಕೇವಲ 2.1 ಕಿ.ಮೀ ಅಂತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿದ್ದು, ಅಕಸ್ಮಾತ್‌ ಪ್ರಜ್ಞಾನ್‌ ರೋವರ್‌ಗೆ ಜೀವ ಬಂದು ಚಂದ್ರನ ಮೇಲೆ ಓಡಾಡಲು ಆರಂಭಿಸಿದರೆ ಚೆನ್ನೈ ಸೇರಿದಂತೆ ರಾಷ್ಟ್ರದ ಹಲವು ನಗರಗಳು ಎದುರಿಸುತ್ತಿರುವ ಕುಡಿಯುನ ನೀರಿನ ಸಮಸ್ಯೆಗೆ ದಾರಿ ಸಿಕ್ಕಿದಂತಾಗುತ್ತದೆ. ಹಾಗಿದ್ದರೆ ಚಂದ್ರನ ಅಂಗಳದಲ್ಲಿ ನೀರಿದೆಯಾ?
Vijaya Karnataka Web Chandrayaan 2 Mission


ಚಂದ್ರನ ನೆಲದ ಮೇಲೆ ಹೀಲಿಯಂ-3 ಧಾತು ಇದೆಯೇ ಎಂದು ಪರೀಕ್ಷಿಸುವುದು ಕೂಡ ಚಂದ್ರಯಾನ-2ದ ಉದ್ದೇಶಗಳಲ್ಲೊಂದಾಗಿದೆ. ಹೀಲಿಯಂ-3 ಧಾತು ಚಂದ್ರನ ಮೇಲೆ ವಿಪುಲ ಪ್ರಮಾಣದಲ್ಲಿ ಪತ್ತೆಯಾದರೆ, ಚೆನ್ನೈ ನಗರವೂ ಸೇರಿದಂತೆ ಹಲವು ಸಮುದ್ರ ತೀರದ ನಗರಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಒಂದು ದಾರಿ ಸಿಕ್ಕಿದಂತಾಗುತ್ತದೆ.

ಚಂದ್ರಯಾನ 2: ಪ್ರಜ್ಞಾನ್‌ ರೋವರ್‌ಗೆ ಜೀವ ಬಂದು ಓಡಾಡಲು ಆರಂಭಿಸಿದರೆ ಮುಂದೇನು?

ಚೆನ್ನೈ ಸಮುದ್ರ ತೀರದಲ್ಲಿದ್ದರೂ ಕುಡಿಯುವ ನೀರಿನ ಭಾರಿ ಕೊರತೆ ಎದುರಿಸುತ್ತಿದೆ. ಸಮುದ್ರದ ನೀರನ್ನು ನಿರ್ಲವಣೀಕರಣಗೊಳಿಸಿ, ಕುಡಿಯುವ ಉದ್ದೇಶಕ್ಕೆ ಬಳಸಬಹುದು. ಆದರೆ ಇದಕ್ಕೆ ತುಂಬಾ ವಿದ್ಯುಚ್ಛಕ್ತಿ ಬೇಕು. ಈ ಅಪರಿಮಿತ ವಿದ್ಯುತ್ತನ್ನು ಪಡೆಯುವಲ್ಲಿ ಹೀಲಿಯಂ ಧಾತು ಮಹತ್ವದ್ದು. ವಿಕಿರಣಶೀಲವಲ್ಲದ ಹೀಲಿಯಂ-3 ಧಾತುವಿನಿಂದ ಸಂಯೋಜಿತ ಪರಮಾಣು ಪ್ರಕ್ರಿಯೆಯ ಮೂಲಕ ಶತಮಾನಗಳ ಕಾಲ ಧಾರಾಳ ವಿದ್ಯುತ್ತನ್ನ ಪಡೆಯಬಹುದು. ಇದರಿಂದ ನೀರಿನ ಕೊರತೆ ನೀಗಿಸಬಹುದು.

ವಿಜ್ಞಾನದಲ್ಲಿ ವೈಫಲ್ಯವೆಂಬುದಿಲ್ಲ; ಎಲ್ಲವೂ ಪ್ರಯೋಗ: ವಿಜ್ಞಾನಿಗಳಿಗೆ ಸ್ಪೂರ್ತಿ ತುಂಬಿದ ಪಿಎಂ ಮೋದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ