ಆ್ಯಪ್ನಗರ

ಅರಾವಳಿ ಪರ್ವತವನ್ನು ಕೊಲ್ಲುತ್ತಿದೆ ಗಣಿಗಾರಿಕೆ

ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಸಹ ಗಣಿಗಾರಿಕೆ ಮುಂದುವರೆದಿದ್ದು, ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಪ್ರದೇಶವೀಗ ಕಲ್ಲುಬಂಡೆಗಳ ಅವಶೇಷವಾಗಿ ಮಾರ್ಪಟ್ಟಿದೆ.

TIMESOFINDIA.COM 28 Oct 2018, 1:29 pm
ಗುರುಗ್ರಾಮ: ಹರಿಯಾಣಾ- ರಾಜಸ್ಥಾನ ಗಡಿಯಲ್ಲಿರುವ ಅರಾವಳಿ ಪರ್ವತಾವಳಿ ಗಣಿಗಾರಿಕೆಯಿಂದಾಗಿ ವೇಗವಾಗಿ ಕಣ್ಮರೆಯಾಗುತ್ತಿದೆ. 31 ಪರ್ವತಗಳು ಈಗಾಗಲೇ ಕಣ್ಮರೆಯಾಗಿದ್ದು, ಇದಕ್ಕೆ ಆಘಾತ ವ್ಯಕ್ತಪಡಿಸಿರುವ ಸುಪ್ರೀಂ 41 ಗಂಟೆಯೊಳಗೆ ಗಣಿಗಾರಿಕೆ ನಿಲ್ಲಿಸುವಂತೆ ಅಕ್ಟೋಬರ್ 23ರಂದು ಖಡಕ್ ಆಗಿ ಆದೇಶಿಸಿದೆ.
Vijaya Karnataka Web Aravali


ಆದರೆ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಸಹ ಗಣಿಗಾರಿಕೆ ಮುಂದುವರೆದಿದ್ದು, ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಪ್ರದೇಶವೀಗ ಕಲ್ಲುಬಂಡೆಗಳ ಅವಶೇಷವಾಗಿ ಮಾರ್ಪಟ್ಟಿದೆ.

ಗುರುಗ್ರಾಮದಿಂದ 25ಕಿ ಮೀ ದೂರದಲ್ಲಿರುವ ಭಂಗೋದಲ್ಲಿ ಸಂಪೂರ್ಣ ಬೆಟ್ಟವನ್ನು ವಿರೂಪಗೊಳಿಸಲಾಗಿದೆ. ಬೆಟ್ಟಗಳೆಲ್ಲ ಪಿರಾಮಿಡ್ ಆಕಾರಗಳಂತೆ ಬದಲಾಗಿವೆ. ದಶಕಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಗಣಿಗಾರಿಕೆಯಿಂದ ಪರ್ವತ ಬೋಳಾಗಿ ಹೋಗಿದೆ. ನಿಷೇಧ, ನಿಯಮ, ನ್ಯಾಯಾಲಯಗಳ ಆದೇಶದ ಹೊರತಾಗಿ ಈ ರೀತಿಯಲ್ಲಿ ಪ್ರಕೃತಿಯನ್ನು ಶೋಷಿಸಲಾಗಿದೆ.

ಗುರುಗ್ರಾಮ, ಫರಿದಾಬಾದ್, ಮೇವಾಡದಲ್ಲಿ ಹಾದು ಹೋಗಿರುವ ಅರಾವಳಿ ಪರ್ವತಗಳಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ 2002ರಿಂದ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ರಾಜಸ್ಥಾನದ 128 ಗುಡ್ಡಗಳಲ್ಲಿ 31 ಗುಡ್ಡಗಳನ್ನು ನೆಲಸಮಗೊಂಡಿವೆ. ಭಂಗೋದಲ್ಲಿ ಗಣಿಗಾರಿಕೆಗೆ ಕಡಿವಾಣವೇ ಬಿದ್ದಿಲ್ಲ. ಪ್ರತಿವಾರ ಟನ್‌ಗಟ್ಟಲೆ ಕಲ್ಲುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು. ಕತ್ತಲಾದ ಬಳಿಕ ಡೈನಮೈಟ್‌ಗಳ ಸ್ಪೋಟ ನಮ್ಮನ್ನು ಭಯಪಡಿಸುತ್ತದೆ. ಕತ್ತಲಿನಲ್ಲಿಯೇ ನೂರಾರು ಟ್ರಕ್‌ಗಳು ಇಲ್ಲಿ ಓಡಾಡುತ್ತವೆ. ನಮಗೆ ಸುರಕ್ಷತೆಯ ಭಯ ಕಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು.

ದಶಕಗಳಿಂದ ಶೋಷಣೆಗೊಳ್ಳುತ್ತಿರುವ ಭೂಮಿಯಲ್ಲಿ 200ರಿಂದ 300 ಮೀಟರ್ ಹೊಂಡಗಳಾಗಿದ್ದು, ಅವು ಮಳೆಗಾಲದಲ್ಲಿ ಸರೋವರಗಳಾಗಿ ಪರಿವರ್ತನೆಯಾಗುತ್ತವೆ. ಅಕ್ರಮ ಗಣಿಗಾರಿಕೆ ಮಾತ್ರ ಸಮಸ್ಯೆ ಅಲ್ಲ. ಮನೆ ಮತ್ತು ಗಡಿ ಗೋಡೆಗಳನ್ನು ಕಟ್ಟಲು ಅರಾವಳಿ ಕಲ್ಲಿಗೆ ಹೆಚ್ಚು ಬೇಡಿಕೆಯಿದೆ. ಕೇಂದ್ರೀಯ ಸಬಲೀಕರಣ ಸಮಿತಿಯು ಈ ವರ್ಷ ಜುಲೈನಲ್ಲಿ ದಕ್ಷಿಣ ಹರಿಯಾಣದಲ್ಲಿನ ಬೆಟ್ಟಗಳನ್ನು ಪರಿಶೀಲಿಸಿದ್ದು ಗ್ರಾಮಸ್ಥರು ವೈಯಕ್ತಿಕ ಬಳಕೆಗಾಗಿ ಕಲ್ಲುಗಳನ್ನು ಬಳಕೆ ಮಾಡುತ್ತಿರುವುದು ಕೂಡ ಪರ್ವತಗಳು ನಾಶವಾಗಲು ಕಾರಣವಾಗಿದೆ ಎಂದು ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ