ಹೊಸದಿಲ್ಲಿ: ಭಾನುವಾರ ಅಯೋಧ್ಯೆಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಮತ್ತು ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ರಾಮ ಮಂದಿರ ನಿರ್ಮಾಣ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಶನಿವಾರ ಮತ್ತು ಭಾನುವಾರ ಅಯೋಧ್ಯೆಯಲ್ಲಿ ಶಿವಸೇನೆ ಬೃಹತ್ ಕಾರ್ಯಕ್ರಮ ಸಂಘಟಿಸುತ್ತಿದೆ. ಇದರ ಬೆನ್ನಲ್ಲೇ ಬಾಬ್ರಿ ಮಸೀದಿ ಧ್ವಂಸ ಮಾಡಲು ನಮಗೆ ಕೇವಲ 17 ನಿಮಿಷ ಸಾಕಾಯ್ತು. ಇದೀಗ ರಾಮ ಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸೂಕ್ತ ಕಾನೂನು ತರಲು ಎಷ್ಟು ಸಮಯ ಬೇಕು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರೀವಾಜ್ಞೆ ತರಬೇಕೆಂದು ಶಿವಸೇನೆ ಒತ್ತಾಯಿಸುತ್ತಿದೆ. ಜತೆಗೆ ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿದ್ದು, ಮಂದಿರ ನಿರ್ಮಾಣ ಕುರಿತು ಬಿಜೆಪಿಗೆ ಒತ್ತಡವೂ ಇದೆ.
ರಾಷ್ಟ್ರಪತಿ ಭವನದಿಂದ ಉತ್ತರ ಪ್ರದೇಶದವರೆಗೂ ಬಿಜೆಪಿ ಹಾದಿ ಸುಗಮವಿದೆ. ಬಿಜೆಪಿಯದ್ದೇ ಆಡಳಿತವಿದ್ದರೂ, ಸುಗ್ರೀವಾಜ್ಞೆ ತರಲು ಏಕೆ ತಡಮಾಡಲಾಗುತ್ತಿದೆ? ಮಂದಿರ ನಿರ್ಮಾಣವಾಗುವವರೆಗೂ ನಾವು ಯಾರನ್ನೂ ಸುಮ್ಮನಿರಲು ಬಿಡುವುದಿಲ್ಲ. ಬಿಜೆಪಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಾವತ್ ಒತ್ತಾಯಿಸಿದ್ದಾರೆ.
ಭಾನುವಾರ ಅಯೋಧ್ಯೆಯಲ್ಲಿ ಆರ್ಎಸ್ಎಸ್, ವಿಶ್ವ ಹಿಂದು ಪರಿಷತ್ ಕೂಡ ಕಾರ್ಯಕ್ರಮ ಆಯೋಜಿಸಿದ್ದು, ಸಾವಿರಾರು ಸಂತರು ಪಾಲ್ಗೊಳ್ಳುವರು.
ಶನಿವಾರ ಮತ್ತು ಭಾನುವಾರ ಅಯೋಧ್ಯೆಯಲ್ಲಿ ಶಿವಸೇನೆ ಬೃಹತ್ ಕಾರ್ಯಕ್ರಮ ಸಂಘಟಿಸುತ್ತಿದೆ. ಇದರ ಬೆನ್ನಲ್ಲೇ ಬಾಬ್ರಿ ಮಸೀದಿ ಧ್ವಂಸ ಮಾಡಲು ನಮಗೆ ಕೇವಲ 17 ನಿಮಿಷ ಸಾಕಾಯ್ತು. ಇದೀಗ ರಾಮ ಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸೂಕ್ತ ಕಾನೂನು ತರಲು ಎಷ್ಟು ಸಮಯ ಬೇಕು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರೀವಾಜ್ಞೆ ತರಬೇಕೆಂದು ಶಿವಸೇನೆ ಒತ್ತಾಯಿಸುತ್ತಿದೆ. ಜತೆಗೆ ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿದ್ದು, ಮಂದಿರ ನಿರ್ಮಾಣ ಕುರಿತು ಬಿಜೆಪಿಗೆ ಒತ್ತಡವೂ ಇದೆ.
ರಾಷ್ಟ್ರಪತಿ ಭವನದಿಂದ ಉತ್ತರ ಪ್ರದೇಶದವರೆಗೂ ಬಿಜೆಪಿ ಹಾದಿ ಸುಗಮವಿದೆ. ಬಿಜೆಪಿಯದ್ದೇ ಆಡಳಿತವಿದ್ದರೂ, ಸುಗ್ರೀವಾಜ್ಞೆ ತರಲು ಏಕೆ ತಡಮಾಡಲಾಗುತ್ತಿದೆ? ಮಂದಿರ ನಿರ್ಮಾಣವಾಗುವವರೆಗೂ ನಾವು ಯಾರನ್ನೂ ಸುಮ್ಮನಿರಲು ಬಿಡುವುದಿಲ್ಲ. ಬಿಜೆಪಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಾವತ್ ಒತ್ತಾಯಿಸಿದ್ದಾರೆ.
ಭಾನುವಾರ ಅಯೋಧ್ಯೆಯಲ್ಲಿ ಆರ್ಎಸ್ಎಸ್, ವಿಶ್ವ ಹಿಂದು ಪರಿಷತ್ ಕೂಡ ಕಾರ್ಯಕ್ರಮ ಆಯೋಜಿಸಿದ್ದು, ಸಾವಿರಾರು ಸಂತರು ಪಾಲ್ಗೊಳ್ಳುವರು.