ಆ್ಯಪ್ನಗರ

10 ದಿನಗಳಿಂದ ಕೊರೊನಾ ಸಕ್ರಿಯ ಪ್ರಕರಣ ಕ್ಷೀಣ..! 12 ದಿನಗಳಲ್ಲಿ 10 ಲಕ್ಷಕ್ಕೂ ಅಧಿಕ ಸೋಂಕಿತರು ಚೇತರಿಕೆ

ಭಾರತದಲ್ಲಿ ಕಳೆದ 10 ದಿನಗಳಿಂದ ಸಕ್ರಿಯ ಸೋಂಕಿತರ ಒಟ್ಟು ಪ್ರಕರಣಗಳು 10 ಲಕ್ಷಕ್ಕಿಂತ ಕಡಿಮೆ ಇದೆ. ಜತೆಗೆ ನಿತ್ಯ ದಾಖಲಾಗುವ ಸೋಂಕಿತರ ಹೊಸ ಪ್ರಕರಣಗಳೂ ತೀವ್ರ ಏರಿಕೆ ಕಂಡಿಲ್ಲ ಈ ಕಾರಣದಿಂದ ದೇಶದಲ್ಲಿ ಕೊರೊನಾ ಸೋಂಕಿನ ಆರ್ಭಟ ಕಡಿಮೆಯಾಗಿರುವುದರ ಬಗ್ಗೆ ಸ್ಪಷ್ಟ ಸೂಚನೆಗಳು ಇವೆ.

Agencies 1 Oct 2020, 10:32 pm
ಹೊಸದಿಲ್ಲಿ: ದೇಶದಲ್ಲಿ ಕಳೆದ 10 ದಿನಗಳಿಂದ ಸಕ್ರಿಯ ಸೋಂಕಿತರ ಒಟ್ಟು ಪ್ರಕರಣಗಳು 10 ಲಕ್ಷಕ್ಕಿಂತ ಕಡಿಮೆ ಇದೆ. ಜತೆಗೆ ನಿತ್ಯ ದಾಖಲಾಗುವ ಸೋಂಕಿತರ ಹೊಸ ಪ್ರಕರಣಗಳೂ ತೀವ್ರ ಏರಿಕೆ ಕಂಡಿಲ್ಲ.
Vijaya Karnataka Web huge decrease in number of active coronavirus cases
10 ದಿನಗಳಿಂದ ಕೊರೊನಾ ಸಕ್ರಿಯ ಪ್ರಕರಣ ಕ್ಷೀಣ..! 12 ದಿನಗಳಲ್ಲಿ 10 ಲಕ್ಷಕ್ಕೂ ಅಧಿಕ ಸೋಂಕಿತರು ಚೇತರಿಕೆ


ಕೇಂದ್ರ ಆರೋಗ್ಯ ಸಚಿವಾಲಯವು ಈ ವಿಷಯ ತಿಳಿಸಿದ್ದು, ಕಳೆದ 12 ದಿನಗಳಲ್ಲಿ 10 ಲಕ್ಷಕ್ಕೂ ಅಧಿಕ ಸೋಂಕಿತರು ಚೇತರಿಕೆ ಕಂಡು ಆಸ್ಪತ್ರೆಗಳಿಂದ ಮತ್ತು ಹೋಮ್‌ ಐಸೊಲೇಷನ್‌ನಿಂದ ಬಿಡುಗಡೆಯಾಗಿದ್ದಾರೆ. ದೇಶಾದ್ಯಂತ ಗುಣಮುಖರ ಪ್ರಮಾಣ ಶೇ.83.53ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಸಕ್ರಿಯ ಸೋಂಕಿತರ ಪೈಕಿ ಶೇ.76ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಕರ್ನಾಟಕ ಸೇರಿ 10 ರಾಜ್ಯಗಳಲ್ಲಿವೆ.

ಸರಾಸರಿ ಗುಣಮುಖರ ಪ್ರಮಾಣವೂ ಈ 10 ರಾಜ್ಯಗಳಲ್ಲಿಯೇ ಶೇ.77ರಷ್ಟು ದಾಖಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ದಿಲ್ಲಿ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಮತ್ತು ತೆಲಂಗಾಣದಲ್ಲಿ ದೇಶದಲ್ಲೇ ಅತಿಹೆಚ್ಚು ಸೋಂಕಿತರು ವರದಿಯಾಗಿರುವ ನಡುವೆಯೇ ಗುಣಮುಖರು ಕೂಡ ಹೆಚ್ಚುತ್ತಿರುವುದು ಸಮಾಧಾನದ ಸಂಗತಿಯಾಗಿದೆ. ಮಹಾರಾಷ್ಟ್ರವೊಂದರಲ್ಲೇ ಇದುವರೆಗೂ ಒಟ್ಟಾರೆ 13.84 ಲಕ್ಷ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು ಆ ಪೈಕಿ 10.88 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಎಚ್ಚರ! ಬೆಂಗಳೂರಲ್ಲಿ ಮಾಸ್ಕ್‌ ಧರಿಸದೆ ಹೊರಬಂದರೆ ಕ್ರಿಮಿನಲ್‌ ಕೇಸ್‌!

ಕೆಲವರಿಂದಲೇ ತೀವ್ರ ಪ್ರಸರಣ
ದೇಶದಲ್ಲಿ ಕೇವಲ ಶೇ.8ರಷ್ಟು ಸೋಂಕಿತರಿಂದಲೇ ಕೊರೊನಾ ತೀವ್ರ ಪ್ರಸರಣಗೊಂಡಿದೆ ಎನ್ನುವುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ದೇಶದಲ್ಲಿ ಈಗ ಇರುವ ಶೇ.71ರಷ್ಟು ಪ್ರಕರಣಗಳ ಮೂಲ ಈ ಅತ್ಯಲ್ಪ ಸಂಖ್ಯೆಯ 'ಸೂಪರ್‌ ಸ್ಪ್ರೆಡರ್‌'ಗಳು ಎನ್ನುವುದು ರೋಗತೀವ್ರತೆ, ಆರ್ಥಿಕತೆ ಮತ್ತು ನೀತಿ ಅಧ್ಯಯನ ಕೇಂದ್ರದ ರಮಣನ್‌ ಲಕ್ಷ್ಮೇನಾರಾಯಣನ್‌ ನೇತೃತ್ವದ ತಂಡ ನಡೆಸಿದ ಅಧ್ಯಯನದ ವೇಳೆ ಬಯಲಾಗಿದೆ.

ರಾಜ್ಯದಲ್ಲಿ ಮತ್ತೆ 10 ಸಾವಿರ ದಾಟಿದ ಕೊರೊನಾ..! ಬೆಂಗಳೂರಿನಲ್ಲಿ ದಾಖಲೆ ನಿರ್ಮಿಸಿದ ಸೋಂಕು

ಸೆಪ್ಟೆಂಬರ್‌ನಲ್ಲಿ 24.33 ಲಕ್ಷ ಮಂದಿಗೆ ಕೊರೊನಾಹಂತ ಹಂತವಾಗಿ ದೇಶಾದ್ಯಂತ ಅನ್‌ಲಾಕ್‌ ಜಾರಿಗೊಳ್ಳುತ್ತಿರುವ ಬೆನ್ನಿಗೇ ಜನಸಂಚಾರ ಹೆಚ್ಚುತ್ತಿರುವ ಕಾರಣ ಸೆಪ್ಟೆಂಬರ್‌ವೊಂದರಲ್ಲೇ ದೇಶದಲ್ಲಿ ಒಟ್ಟು 26,21,418 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಅಂದರೆ ಇದುವರೆಗೂ ದೇಶಾದ್ಯಂತ ಕೊರೊನಾಗೆ ತುತ್ತಾಗಿರುವ ಒಟ್ಟು 63 ಲಕ್ಷ ಮಂದಿಯ ಪೈಕಿ ಶೇ.41.53ರಷ್ಟು ಮಂದಿಗೆ ಒಂದೇ ತಿಂಗಳಲ್ಲಿ ಸೋಂಕು ತಗುಲಿದೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಕೂಡ ಕಳೆದ ತಿಂಗಳು 33,390 ದಾಖಲಾಗಿದ್ದು , ಇದು ಒಟ್ಟು ಸಾವಿನ ಸಂಖ್ಯೆಯ ಶೇ.33.84ರಷ್ಟಾಗಿದೆ. 2020ರ ಜ.30ರಂದು ದೇಶದಲ್ಲೇ ಮೊದಲ ಕೊರೊನಾ ಸೋಂಕಿನ ಪ್ರಕರಣ ಕೇರಳ ರಾಜ್ಯದಲ್ಲಿ ವರದಿಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ