ಆ್ಯಪ್ನಗರ

ಮೂತ್ರ ಪಿಂಡ ಕೊಡುವೆ, ನೂರ್ಕಾಲ ಬಾಳಲಿ: ಸುಷ್ಮಾ ಕಷ್ಟಕ್ಕೆ ಸ್ಪಂದಿಸಲು ಸಾಲುಗಟ್ಟಿದ್ದರು ಜನರು

ಜನಪ್ರಿಯ ನಾಯಕಿ ಸುಷ್ಮಾ ಸ್ವರಾಜ್ ಮಂಗಳವಾರ ರಾತ್ರಿ ನಮ್ಮನ್ನು ಅಗಲಿದ್ದಾರೆ.

Agencies 7 Aug 2019, 1:56 pm
ಭೋಪಾಲ್‌: ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಕಷ್ಟಕ್ಕೆ ಸ್ಪಂದಿಸಲು ಜನರೂ ಹಾತೊರೆಯುತ್ತಿದ್ದರು. 2016ರಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಸುಷ್ಮಾ ಸ್ವರಾಜ್‌ ಅವರಿಗೆ ತಮ್ಮ ಮೂತ್ರಪಿಂಡವನ್ನು ದಾನ ಮಾಡಲು ಹತ್ತಾರು ಮಂದಿ ಮುಂದೆ ಬಂದಿದ್ದರು.
Vijaya Karnataka Web Sushma Swaraj


ತಮ್ಮ ಅನಾರೋಗ್ಯದ ಬಗ್ಗೆ ಸುಷ್ಮಾ ಟ್ವೀಟ್‌ ಮಾಡುತ್ತಿದ್ದಂತೆ ರಾಹುಲ್‌ ವರ್ಮಾ ಎಂಬವರು ತಮ್ಮ ಮೂತ್ರಪಿಂಡ ದಾನ ಮಾಡಲು ಮುಂದೆ ಬಂದಿದ್ದರು. ಈಗ ಈ ಸಾಲಿಗೆ ಭೋಪಾಲನ್‌ ಟ್ರಾಫಿಕ್‌ ಪೊಲೀಸ್‌ ಗೌರವ್‌ ಸಿಂಗ್‌ ಡಾಂಗಿ ತಮ್ಮ ಒಂದು ಮೂತ್ರಪಿಂಡ ದಾನ ಮಾಡುವುದಾಗಿ ಘೋಷಿಸಿದ್ದರು. ಮಧ್ಯಪ್ರದೇಶದ ಭೋಪಾಲ್ನಲ್ಲಿ ಟ್ರಾಫಿಕ್‌ ಪೊಲೀಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 26 ವರ್ಷದ ಗೌರವ್‌ ಸಿಂಗ್‌ ಡಾಂಗಿ ಎಂಬವರು ಸಚಿವೆಗೆ ತಮ್ಮ ಒಂದು ಮೂತ್ರಪಿಂಡ ದಾನ ಮಾಡುವುದಾಗಿ ಹೇಳಿದ್ದರು.

'' ವಿದೇಶಾಂಗ ಸಚಿವೆಯಾಗಿ ಸುಷ್ಮಾಜಿ ಮಾಡುತ್ತಿರುವ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ. ಅಂತಹ ನಾಯಕರು ನೂರ್ಕಾಲ ಬಾಳಬೇಕು ಎಂಬುದು ನನ್ನ ಇಚ್ಛೆ ,'' ಎಂದು ಡಾಂಗಿ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ