ಆ್ಯಪ್ನಗರ

ಕ್ಯಾನ್ಸರ್‌ ರೋಗಿಗಳಿಗೆ ವೈದ್ಯರಿಂದ ನಿಷೇಧಿತ ಔಷಧ

ಹೈದರಾಬಾದ್‌ನ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕ್ಯಾನ್ಸರ್‌ ರೋಗಿಗಳಿಗೆ ಬ್ಯಾನ್‌ ಆಗಿರುವ ಔಷಧಿಗಳನ್ನು ಅಕ್ರಮವಾಗಿ ಮಾರುತ್ತಾರೆ.

TNN 21 Oct 2017, 11:11 am
ಹೈದರಾಬಾದ್‌: ಇಲ್ಲಿನ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕ್ಯಾನ್ಸರ್‌ ರೋಗಿಗಳಿಗೆ ಬ್ಯಾನ್‌ ಆಗಿರುವ ಔಷಧಿಗಳನ್ನು ಅಕ್ರಮವಾಗಿ ಮಾರುತ್ತಾರೆ.
Vijaya Karnataka Web hyderabad doctors prescribe banned cancer drug
ಕ್ಯಾನ್ಸರ್‌ ರೋಗಿಗಳಿಗೆ ವೈದ್ಯರಿಂದ ನಿಷೇಧಿತ ಔಷಧ


ಭಾರತೀಯ ಔಷಧ ನಿಯಂತ್ರಣ ಮಂಡಳಿ ನಿಷೇಧಿಸಿರುವ ಟ್ಯಾಬ್ಲೆಟ್‌ಗಳು ಆನ್‌ಲೈನ್‌ನಲ್ಲೂ ನಿರಾಯಾಸವಾಗಿ ದೊರೆಯುತ್ತಿವೆ. ಔ‍ಷಧ ಮಳಿಗೆಗಳಲ್ಲೂ ಬೇರೆ ದೇಶಗಳ ನಾನಾ ಬ್ರ್ಯಾಂಡ್‌ಗಳ ನಿಷೇಧಿತ ಔಷಧಗಳು ಸಿಗುತ್ತಿವೆ. ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್‌ ರೋಗಿಗಳಿಗೆ ಒಸಿಮೆರ್ಟಿನಿಬ್‌ (Osimertinib)ಎಂಬ ಬಾಂಗ್ಲಾದೇಶದಿಂದ ಆಮದಾದ ಟ್ಯಾಬ್ಲೆಟ್‌ ನೀಡಲಾಗುತ್ತಿದೆ.

ಒಸಿಮೆರ್ಟಿನಿಬ್‌ ಬಳಕೆಗೆ ಭಾರತದಲ್ಲಿ ಇನ್ನೂ ಅಂಗೀಕಾರ ನೀಡಿಲ್ಲ. ಅದರ ಗುಣಮಟ್ಟ, ಸುರಕ್ಷೆ ಮತ್ತು ಪರಿಣಾಮಗಳ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದೆ. ,ಇನ್‌ಸೆಪ್ಟಾ ಎಂಬ ಔಷಧವನ್ನೂ ಬಾಂಗ್ಲಾದಿಂದ ಆಮದು ಮಾಡಿ ಮಾರಲಾಗುತ್ತಿದೆ ಎಂದು ಔಷಧ ನಿಯಂತ್ರಣ ಮಂಡಳಿಯ ಡಾ. ಜಿ.ಎನ್‌. ಸಿಂಗ್‌ ಹೇಳಿದ್ದಾರೆ.

ಇದರ ಬಗ್ಗೆ ಇನ್ನೂ ಏನೂ ಖಚಿತವಾಗದ ಕಾರಣ ಬಳಕೆಯಿಂದ ರೋಗಿಗೆ ಹಾನಿಯಾಗಬಹುದು. ಹೀಗಾಗಿ ಔಷಧಗಳ ಅಕ್ರಮ ಮಾರಾಟದ ಮೇಲೆ ತೀವ್ರ ನಿಗಾ ವಹಿಸಬೇಕಾಗಿದೆ. ವಿಮಾನ ನಿಲ್ದಾಣ ಮತ್ತು ಹಡಗುಗಳ ಮೂಲಕ ಇವುಗಳು ಆಮದಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ರೋಗಿಗಳು ಮತ್ತು ವೈದ್ಯರ ಕೋರಿಕೆ ಪರಿಗಣಿಸಿ ಈ ಟ್ಯಾಬ್ಲೆಟ್‌ ಆಮದು ಮಾಡಿಕೊಂಡು ಮೂವತ್ತು ಟ್ಯಾಬ್ಲೆಟ್‌ ಅನ್ನು ಇಲ್ಲಿ 1.1 ಲಕ್ಷ ರೂ.ಗೆ ರೋಗಿಗಳಿಗೆ ಮಾರಲಾಗುತ್ತಿದೆ ಎಂದು ಮೆಡಿಕಲ್‌ ಮಾಲೀಕರೊಬ್ಬರು ಹೇಳುತ್ತಾರೆ.

ನಾವು ಈ ಮಾತ್ರೆಯನ್ನು ನಿರಂತರ ಬಳಸುತ್ತಿಲ್ಲ. ವಿಶೇಷ ಪ್ರಕರಣಗಳಲ್ಲಿ ಬೇರೆ ಔಷಧ ಕೆಲಸ ಮಾಡದಿದ್ದಲ್ಲಿ ಅಗತ್ಯವಾದರೆ ವಿಶೇಷ ಆರ್ಡರ್‌ ಮೂಲಕ ತರಿಸುತ್ತೇವೆ. ಶ್ವಾಸಕೋಶ ಮಾತ್ರವಲ್ಲದೆ ಇತರ ಕ್ಯಾನ್ಸರ್‌ ರೋಗದಲ್ಲೂ ಬಳಸುತ್ತೇವೆ ಎಂದು ಎಂಎನ್‌ಜೆ ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.
cancer drug , illegal sold drug ,DCGI , hyderabad, ಕ್ಯಾನ್ಸರ್‌ ಔಷಧ, ಹೈದರಾಬಾದ್‌


Hyderabad doctors: A cancer drug is being sold illegally in the city by private and government hospitals despite a ban by the Drug Controller General of India (DCGI).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ