ಆ್ಯಪ್ನಗರ

ತೆಲಂಗಾಣದಲ್ಲಿ ಕೋತಿ ಹಾವಳಿ ತಡೆಗೆ 30 ಕೋಟಿ ರೂ.

ಮಿತಿ ಮೀರಿದ ಕೋತಿಗಳ ಹಾವಳಿ ತಡೆಯಲುತೆಲಂಗಾಣ ಅರಣ್ಯ ಇಲಾಖೆಯು 30 ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ಧಗೊಳಿಸಿದೆ.

TIMESOFINDIA.COM 3 Apr 2018, 5:50 pm
ಹೈದರಾಬಾದ್: ಮಿತಿ ಮೀರಿದ ಕೋತಿಗಳ ಹಾವಳಿ ತಡೆಯಲುತೆಲಂಗಾಣ ಅರಣ್ಯ ಇಲಾಖೆಯು 30 ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ಧಗೊಳಿಸಿದೆ.
Vijaya Karnataka Web monkey-01


ಅರಣ್ಯ ಸಚಿವ ಜೋಗು ರಾಮಣ್ಣ ಶಿಫಾರಸಿನ ಮೆರೆಗೆ ಸರಕಾರವು ತಜ್ಞರ ಸಮಿತಿಯನ್ನು ರಚಿಸಿದೆ. ಇದರಂತೆ ಮೊದಲ ಸಭೆಯು ಸೋಮವಾರದಂದು ಅರಣ್ಯ ಭವನದಲ್ಲಿ ಸಭೆ ಸೇರಿತ್ತು. ಅಲ್ಲದೆ ರಾಜ್ಯಾದ್ಯಂತ ರೈತರಿಗೆ ಆಗುವ ತೊಂದರೆಯನ್ನು ಪರಿಗಣಿಸಿ ಮಂಗಗಳ ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗಿದೆ.


ಗ್ರಾಮೀಣ ಹಾಗೂ ನಗರದ ಜನರು ಏಕ ರೂಪದಲ್ಲಿ ಮಂಗಳ ಹಾವಳಿಯಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ದೀರ್ಘಾವಾಧಿಯ ಪರಿಹಾರದಿಂದ ಮಾತ್ರ ನಿಯಂತ್ರಿಸಲು ಸಾಧ್ಯ ಎಂಬುದನ್ನು ಸರಕಾರ ಮನಗಂಡಿದೆ. ಸದನದ ಶೈತ್ಯ ಸಭೆಯಲ್ಲೂ ಇದು ಪ್ರತಿಧ್ವನಿಸಿತ್ತು. ಅಲ್ಲದೆ ಬೇಗನೇ ಪರಿಹಾರ ಸೂಚಿಸುವಂತೆ ಇಲಾಖೆಗೆ ಸೂಚನೆ ನೀಡಲಾಗಿತ್ತು.

ಮಾನವ ವಾಸ ಪ್ರವೇಶದಲ್ಲೂ ಮಂಗಗಳ ಅತಿಯಾದ ಸಾನಿಧ್ಯವು ಹೈದರಾಬಾದ್ ಸೇರಿದಂತೆ ಅನೇಕ ತೆಲಂಗಾಣ ಜಿಲ್ಲೆಗಳಲ್ಲಿ ಸಮಸ್ಯೆಯಾಗಿಬಿಟ್ಟಿದೆ. ಅದಿಲಬಾದ್, ನಿರ್ಮಲ್, ಮಂಚೇರಿಯಲ್, ಕುಮ್ರಮ್ ಹಾಗೂ ಬೀಮ್ ಆಸಿಫಾಬಾದ್‌ ಜಿಲ್ಲೆಗಳಂತೂ ಮಂಗಗಳ ಹಾವಳಿ ಮಿತಿ ಮೀರಿದೆ.


ಆಹಾರದ ಹುಡುಕಾಟದಲ್ಲಿ ಬರುವ ಮಂಗಳು ಕೃಷಿ ಕ್ಷೇತ್ರಗಳನ್ನು ಹಾಳು ಮಾಡುತ್ತಿವೆ. ಅಷ್ಟೇ ಯಾಕೆ ರೈತರಿಗೆ ದೈಹಿಕ ಗಾಯಗಳನ್ನುಂಟು ಮಾಡುತ್ತಿದೆ. ಅತ್ತ ಕೋತಿಯ ಹಾವಳಿಗಳನ್ನು ತಡೆಗಟ್ಟಲು ಅನೇಕ ವಿಧಾನಗಳನ್ನು ಅನುಸರಿಸಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ