ಹೊಸ ದಿಲ್ಲಿ: ಕಾಶ್ಮೀರ ಕುರಿತಾಗಿ ಪಾಕಿಸ್ತಾನದ ಘಟಕವು ಮಾಡಿದ ಭಾರತ ವಿರೋಧಿ ಟ್ವೀಟ್ ಬಗ್ಗೆ ದಕ್ಷಿಣ ಕೊರಿಯಾ ಮೂಲದ ಆಟೊಮೊಬೈಲ್ ಸಂಸ್ಥೆ 'ಹ್ಯುಂಡೈ ಮೋಟರ್ಸ್' ಮಂಗಳವಾರ ಕ್ಷಮೆ ಯಾಚಿಸಿದೆ. 'ಹ್ಯುಂಡೈ ಪಾಕಿಸ್ತಾನ ಘಟಕವು ಪ್ರತ್ಯೇಕ ಕಾಶ್ಮೀರವನ್ನು ಬೆಂಬಲಿಸಿ ಮಾಡಿರುವ 'ಅನಧಿಕೃತ' ಟ್ವೀಟ್ ಬಗ್ಗೆ ಸಂಸ್ಥೆಯು ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಈ ಅನಧಿಕೃತ ಟ್ವೀಟ್ನಿಂದ ಭಾರತೀಯರ ಮನಸ್ಸಿಗೆ ಆಗಿರುವ ನೋವಿಗಾಗಿ ಕ್ಷಮೆ ಯಾಚಿಸುತ್ತೇವೆ. ಸಂಸ್ಥೆಯು ಯಾವುದೇ ರಾಜಕೀಯ ಅಥವಾ ಧಾರ್ಮಿಕ ಅಥವಾ ನಿರ್ದಿಷ್ಟ ಸ್ಥಳಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿ ಪಾಲುದಾರರಾಗಿರುವ ಸಂಸ್ಥೆಯು ಹ್ಯುಂಡೈನ ನೀತಿಗಳಿಗೆ ವಿರುದ್ಧವಾಗಿ ಕಾಶ್ಮೀರ ಕುರಿತಾಗಿ 'ಅನಧಿಕೃತ' ಹೇಳಿಕೆ ನೀಡಿದೆ. ಈಗಾಗಲೇ ಅಂತಹ ಟ್ವೀಟ್ಗಳನ್ನು ಅಳಿಸಿ ಹಾಕಲಾಗಿದೆ. ಮುಂದೆ ಇಂತಹ ಪ್ರಮಾದಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ' ಎಂದು ಉತ್ತರ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆ ಹೇಳಿದೆ.
ಬಿಸಿಗೆ ಮಣಿದ ಸಂಸ್ಥೆ: ಭಾರತದ ಸಾಮಾಜಿಕ ಜಾಲತಾಣಗಳಲ್ಲಿ 'ಬಾಯ್ಕಾಟ್ ಹ್ಯುಂಡೈ' ಆನ್ಲೈನ್ ಅಭಿಯಾನ ಬಿರುಸುಗೊಂಡ ಬೆನ್ನಲ್ಲೇ, ಮಂಗಳವಾರ ರಾಜ್ಯಸಭೆಯಲ್ಲೂ ವಿಷಯ ಪ್ರತಿಧ್ವನಿಸಿತು. ಪ್ರತಿಪಕ್ಷಗಳು ಇಂತಹ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿವೆ ಎಂದು ದನಿ ಎತ್ತಿದವು. ಇದರ ನಡುವೆ ವಾಣಿಜ್ಯ ವ್ಯವಹಾರಗಳ ಸಚಿವ ಪಿಯೂಶ್ ಗೋಯಲ್ ಅವರು ಸಹ ವಿವಾದದ ಬಗ್ಗೆ ಸಂಸ್ಥೆಯ ಭಾರತದ ಘಟಕವು (ಹ್ಯುಂಡೈ ಇಂಡಿಯಾ) ಭಾನುವಾರ ನೀಡಿದ ಹಾರಿಕೆಯ ಪ್ರತ್ಯುತ್ತರದ ಬಗ್ಗೆ ಕಿಡಿಕಾರಿದರು. ಮತ್ತಷ್ಟು ಗಂಭೀರವಾಗಿ ಕಂಪನಿಯು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಇತ್ತ ವಿದೇಶಾಂಗ ವ್ಯವಹಾರಗಳ ಸಚಿವಾಲಯು ದಕ್ಷಿಣ ಕೊರಿಯಾದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿ, ಪ್ರತಿಭಟನೆ ದಾಖಲಿಸಿತು. ಈ ಬೆಳವಣಿಗೆಗಳ ನಡುವೆಯೇ ಭಾರತದಲ್ಲಿ ಎರಡನೇ ಅತಿ ದೊಡ್ಡ ಕಾರು ಮಾರಾಟ ಸಂಸ್ಥೆಯಾಗಿರುವ ಹ್ಯುಂಡೈ ಕ್ಷಮೆ ಯಾಚನೆ ಮಾಡಿ ಸುದೀರ್ಘ ಪತ್ರ ಪ್ರಕಟಿಸಿದೆ.
ಕರೆ ಮಾಡಿ ವಿಷಾದಿಸಿದ ಸಚಿವರು
ವಿವಾದ ತೀವ್ರಗೊಂಡ ಬೆನ್ನಲ್ಲೇ, ದಕ್ಷಿಣ ಕೊರಿಯಾ ವಿದೇಶಾಂಗ ಸಚಿವರಾದ ಚುಂಗ್ ಯುಯಿ ಯಂಗ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಿಂದ ಭಾರತದ ಜನರು ಮತ್ತು ಸರಕಾರಕ್ಕೆ ಆದ ನೋವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ?
ಫೆಬ್ರುವರಿ 5ರಂದು ಹ್ಯುಂಡೈನ ಪಾಕಿಸ್ತಾನ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದ ಕಾಶ್ಮೀರಕ್ಕೆ ಸಂಬಂಧಿಸಿದ ಪೋಸ್ಟ್ ಪ್ರಕಟಿಸಲಾಗಿತ್ತು. 'ನಮ್ಮ ಕಾಶ್ಮೀರಿ ಸಹೋದರರ ತ್ಯಾಗವನ್ನು ನಾವು ಸ್ಮರಿಸೋಣ ಮತ್ತು ಅವರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ನಿಲ್ಲೋಣ' ಎಂದು ಟ್ವೀಟ್ ಮಾಡಲಾಗಿತ್ತು.
ಪಾಕಿಸ್ತಾನವು ಕಾಶ್ಮೀರದಲ್ಲಿ 'ಪ್ರತ್ಯೇಕತಾವಾದಿ' ಆಂದೋಲನಕ್ಕೆ ಬೆಂಬಲವಾಗಿ ಫೆಬ್ರುವರಿ 5 ಅನ್ನು 'ಕಾಶ್ಮೀರ ಐಕ್ಯತೆ ದಿನ'ವಾಗಿ ಆಚರಿಸುತ್ತದೆ. ಇದಕ್ಕೆ ಬೆಂಬಲಿಸಿ ಈ ಟ್ವೀಟ್ ಮಾಡಲಾಗಿತ್ತು. ಈ ಟ್ವೀಟ್ ಭಾರತದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಹ್ಯುಂಡೈನ ವಾಹನಗಳನ್ನು ಭಾರತದಲ್ಲಿ ಬಹಿಷ್ಕರಿಸುವುದಾಗಿ ಸಾಮಾಜಿಕ ತಾಣಗಳಲ್ಲಿ ಅಭಿಯಾನ ಆರಂಭವಾಯಿತು. ಈ ವಿವಾದದ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ್ದ ಭಾರತದ ಹ್ಯುಂಡೈ ಘಟಕವು ಹಾರಿಕೆಯ ಉತ್ತರ ನೀಡಿತ್ತು. 'ಭಾರತದಲ್ಲಿ ಹ್ಯುಂಡೈ ಸಂಸ್ಥೆ ಹಲವು ದಶಕಗಳಿಂದಲೂ ಭಾರಿ ಹೂಡಿಕೆ ಮಾಡಿದೆ. ಭಾರತೀಯ ಗ್ರಾಹಕರಿಗೆ ಬದ್ಧವಾಗಿದೆ. ಇಂತಹ ಸಂವೇದನಾ ರಹಿತ ಹೇಳಿಕೆಗಳನ್ನು ಖಂಡಿಸುತ್ತೇವೆ. ಇದನ್ನು ಸಂಸ್ಥೆ ಸಹಿಸುವುದಿಲ್ಲ' ಎಂದಷ್ಟೇ ಹೇಳಿತ್ತು.
ಇದರಲ್ಲಿ ಕ್ಷಮೆ, ವಿಷಾದದ ಬಗ್ಗೆ ಪ್ರಸ್ತಾಪವೇ ಇರಲಿಲ್ಲ. ಈ ಹಾರಿಕೆ ಪ್ರತಿಕ್ರಿಯೆಯ ಬಳಿಕ 'ಬಾಯ್ಕಾಟ್ ಹ್ಯುಂಡೈ' ಆಂದೋಲನ ಮತ್ತಷ್ಟು ತೀವ್ರಗೊಂಡಿತ್ತು.
ಬಿಸಿಗೆ ಮಣಿದ ಸಂಸ್ಥೆ: ಭಾರತದ ಸಾಮಾಜಿಕ ಜಾಲತಾಣಗಳಲ್ಲಿ 'ಬಾಯ್ಕಾಟ್ ಹ್ಯುಂಡೈ' ಆನ್ಲೈನ್ ಅಭಿಯಾನ ಬಿರುಸುಗೊಂಡ ಬೆನ್ನಲ್ಲೇ, ಮಂಗಳವಾರ ರಾಜ್ಯಸಭೆಯಲ್ಲೂ ವಿಷಯ ಪ್ರತಿಧ್ವನಿಸಿತು. ಪ್ರತಿಪಕ್ಷಗಳು ಇಂತಹ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿವೆ ಎಂದು ದನಿ ಎತ್ತಿದವು. ಇದರ ನಡುವೆ ವಾಣಿಜ್ಯ ವ್ಯವಹಾರಗಳ ಸಚಿವ ಪಿಯೂಶ್ ಗೋಯಲ್ ಅವರು ಸಹ ವಿವಾದದ ಬಗ್ಗೆ ಸಂಸ್ಥೆಯ ಭಾರತದ ಘಟಕವು (ಹ್ಯುಂಡೈ ಇಂಡಿಯಾ) ಭಾನುವಾರ ನೀಡಿದ ಹಾರಿಕೆಯ ಪ್ರತ್ಯುತ್ತರದ ಬಗ್ಗೆ ಕಿಡಿಕಾರಿದರು. ಮತ್ತಷ್ಟು ಗಂಭೀರವಾಗಿ ಕಂಪನಿಯು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಇತ್ತ ವಿದೇಶಾಂಗ ವ್ಯವಹಾರಗಳ ಸಚಿವಾಲಯು ದಕ್ಷಿಣ ಕೊರಿಯಾದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿ, ಪ್ರತಿಭಟನೆ ದಾಖಲಿಸಿತು. ಈ ಬೆಳವಣಿಗೆಗಳ ನಡುವೆಯೇ ಭಾರತದಲ್ಲಿ ಎರಡನೇ ಅತಿ ದೊಡ್ಡ ಕಾರು ಮಾರಾಟ ಸಂಸ್ಥೆಯಾಗಿರುವ ಹ್ಯುಂಡೈ ಕ್ಷಮೆ ಯಾಚನೆ ಮಾಡಿ ಸುದೀರ್ಘ ಪತ್ರ ಪ್ರಕಟಿಸಿದೆ.
ಕರೆ ಮಾಡಿ ವಿಷಾದಿಸಿದ ಸಚಿವರು
ವಿವಾದ ತೀವ್ರಗೊಂಡ ಬೆನ್ನಲ್ಲೇ, ದಕ್ಷಿಣ ಕೊರಿಯಾ ವಿದೇಶಾಂಗ ಸಚಿವರಾದ ಚುಂಗ್ ಯುಯಿ ಯಂಗ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಿಂದ ಭಾರತದ ಜನರು ಮತ್ತು ಸರಕಾರಕ್ಕೆ ಆದ ನೋವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ?
ಫೆಬ್ರುವರಿ 5ರಂದು ಹ್ಯುಂಡೈನ ಪಾಕಿಸ್ತಾನ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದ ಕಾಶ್ಮೀರಕ್ಕೆ ಸಂಬಂಧಿಸಿದ ಪೋಸ್ಟ್ ಪ್ರಕಟಿಸಲಾಗಿತ್ತು. 'ನಮ್ಮ ಕಾಶ್ಮೀರಿ ಸಹೋದರರ ತ್ಯಾಗವನ್ನು ನಾವು ಸ್ಮರಿಸೋಣ ಮತ್ತು ಅವರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ನಿಲ್ಲೋಣ' ಎಂದು ಟ್ವೀಟ್ ಮಾಡಲಾಗಿತ್ತು.
ಪಾಕಿಸ್ತಾನವು ಕಾಶ್ಮೀರದಲ್ಲಿ 'ಪ್ರತ್ಯೇಕತಾವಾದಿ' ಆಂದೋಲನಕ್ಕೆ ಬೆಂಬಲವಾಗಿ ಫೆಬ್ರುವರಿ 5 ಅನ್ನು 'ಕಾಶ್ಮೀರ ಐಕ್ಯತೆ ದಿನ'ವಾಗಿ ಆಚರಿಸುತ್ತದೆ. ಇದಕ್ಕೆ ಬೆಂಬಲಿಸಿ ಈ ಟ್ವೀಟ್ ಮಾಡಲಾಗಿತ್ತು. ಈ ಟ್ವೀಟ್ ಭಾರತದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಹ್ಯುಂಡೈನ ವಾಹನಗಳನ್ನು ಭಾರತದಲ್ಲಿ ಬಹಿಷ್ಕರಿಸುವುದಾಗಿ ಸಾಮಾಜಿಕ ತಾಣಗಳಲ್ಲಿ ಅಭಿಯಾನ ಆರಂಭವಾಯಿತು. ಈ ವಿವಾದದ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ್ದ ಭಾರತದ ಹ್ಯುಂಡೈ ಘಟಕವು ಹಾರಿಕೆಯ ಉತ್ತರ ನೀಡಿತ್ತು. 'ಭಾರತದಲ್ಲಿ ಹ್ಯುಂಡೈ ಸಂಸ್ಥೆ ಹಲವು ದಶಕಗಳಿಂದಲೂ ಭಾರಿ ಹೂಡಿಕೆ ಮಾಡಿದೆ. ಭಾರತೀಯ ಗ್ರಾಹಕರಿಗೆ ಬದ್ಧವಾಗಿದೆ. ಇಂತಹ ಸಂವೇದನಾ ರಹಿತ ಹೇಳಿಕೆಗಳನ್ನು ಖಂಡಿಸುತ್ತೇವೆ. ಇದನ್ನು ಸಂಸ್ಥೆ ಸಹಿಸುವುದಿಲ್ಲ' ಎಂದಷ್ಟೇ ಹೇಳಿತ್ತು.
ಇದರಲ್ಲಿ ಕ್ಷಮೆ, ವಿಷಾದದ ಬಗ್ಗೆ ಪ್ರಸ್ತಾಪವೇ ಇರಲಿಲ್ಲ. ಈ ಹಾರಿಕೆ ಪ್ರತಿಕ್ರಿಯೆಯ ಬಳಿಕ 'ಬಾಯ್ಕಾಟ್ ಹ್ಯುಂಡೈ' ಆಂದೋಲನ ಮತ್ತಷ್ಟು ತೀವ್ರಗೊಂಡಿತ್ತು.