ಆ್ಯಪ್ನಗರ

ಅಮಿತ್‌ ಶಾ ಅದ್ಹೇಗೆ ಮಹಾರಾಷ್ಟ್ರದಲ್ಲಿ ಸರಕಾರ ರಚಿಸ್ತಾರಂತ ನೋಡ್ಬೇಕು: ಶರದ್‌ ಪವಾರ್‌

ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಬಿಜೆಪಿ - ಶಿವಸೇನೆ ಮೈತ್ರಿಕೂಟಕ್ಕೆ ಜನತೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆ ಅವರೇ ಸರಕಾರ ಸ್ಥಾಪಿಸಬೇಕು. ನಾವು ವಿರೋಧ ಪಕ್ಷದಲ್ಲೇ ಕೂರುತ್ತೇವೆ ಎಂದು ಶರದ್‌ ಪವಾರ್ ಮತ್ತೆ ಸ್ಪಷ್ಟಪಡಿಸಿದ್ದಾರೆ.

TIMESOFINDIA.COM 7 Nov 2019, 1:16 pm
ಮುಂಬಯಿ: ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಬಿಕ್ಕಟ್ಟು ಇನ್ನೂ ಮುಂದುವರಿದಿದೆ. ಈ ಹಿನ್ನೆಲೆ ಬಿಜೆಪಿಯ ಚಾಣಕ್ಯ ಅಮಿತ್‌ ಶಾ ಹೇಗೆ ಸರಕಾರ ರಚನೆ ಮಾಡ್ತಾರೆಂದು ನೋಡಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ವ್ಯಂಗ್ಯ ಮಾಡಿದ್ದಾರೆ.
Vijaya Karnataka Web sharad pawar


ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಫಿಕ್ಸ್: ಗುರುವಾರವೇ ಹಕ್ಕು ಮಂಡನೆ

ಅಮಿತ್‌ ಶಾ ಟ್ರಬಲ್‌ ಶೂಟರ್‌ ಆಗಿದ್ದು, ಈ ಹಿಂದೆ ಸರಕಾರ ರಚನೆ ವೇಳೆಯಲ್ಲಿ ಬಿಜೆಪಿ ಅಧ್ಯಕ್ಷ ಕೆಲ ರಾಜ್ಯಗಳಿಗೆ ಭೇಟಿ ನೀಡಿದ್ದರು. ಆದರೆ, ಮಹಾರಾಷ್ಟ್ರಕ್ಕೆ ಅವರಿನ್ನೂ ಭೇಟಿ ನೀಡಿಲ್ಲ''. ಬಿಜೆಪಿಯ ಚಾಣಕ್ಯ ಅಮಿತ್‌ ಶಾ ಹೇಗೆ ಸರಕಾರ ರಚನೆ ಮಾಡ್ತಾರೆಂದು ನೋಡಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ, ಶಿವಸೇನಾ ಆಸೆಗೆ ಪಿನ್ ಚುಚ್ಚಿದ ಶರದ್ ಪವಾರ್ !

ಅಲ್ಲದೆ, ನಾವು ವಿರೋಧ ಪಕ್ಷದಲ್ಲೇ ಕೆಲಸ ಮಾಡುತ್ತೇವೆ. ಅದಕ್ಕೆಂದೇ ಮತದಾರರು ತೀರ್ಪು ನೀಡಿದ್ದಾರೆ. ಅಲ್ಲದೆ, ಸಾಂವಿಧಾನಿಕ ಬಿಕ್ಕಟ್ಟಿನಿಂದ ಪಾರಾಗಲು ಬಿಜೆಪಿ - ಶಿವಸೇನಾ ಮೈತ್ರಿಕೂಟ ಶೀಘ್ರದಲ್ಲಿ ಸರಕಾರ ರಚಿಸಬೇಕು ಎಂದು ಶರದ್‌ ಪವಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರ ಬಿಕ್ಕಟ್ಟಿಗೆ ಹೊಸ ಟ್ಟಿಸ್ಟ್‌, ಪವಾರ್‌ ಭೇಟಿಯಾದ ಸಂಜಯ್‌ ರಾವತ್‌

ಜತೆಗೆ 'ಬಿಜೆಪಿ ಮತ್ತು ಶಿವಸೇನೆ 25 ವರ್ಷಗಳಿಂದಲೂ ಜತೆಯಾಗಿವೆ. ಮುಂದೆಯೂ ಅವು ಒಟ್ಟಿಗೇ ಸಾಗುತ್ತವೆ. ಆದರೆ ಶಿವಸೇನೆ ತಮಗೆ 170 ಸದಸ್ಯರ ಬೆಂಬಲ ಇರುವುದಾಗಿ ಹೇಳಿಕೊಂಡಿರುವುದು ಅಚ್ಚರಿ ಮೂಡಿಸಿದೆ' ಎಂದೂ ಪವಾರ್ ಮಾಧ್ಯಮಗಳ ಜತೆ ಮಾತನಾಡುವಾಗ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ