ಆ್ಯಪ್ನಗರ

ಪೊಲೀಸ್‌ ಜೀಪು ಹತ್ತಲು ನಾನು ಕಳ್ಳಿಯಲ್ಲ: ಶಶಿಕಲಾ

ವಿ ಕೆ ಶಶಿಕಲಾ, ಪೊಲೀಸ್‌ ಜೀಪ್‌ ಹತ್ತಿ ಪರಪ್ಪನ ಅಗ್ರಹಾರಕ್ಕೆ ತೆರಳಲು ನಿರಾಕರಿಸಿದ್ದ ಘಟನೆ ಬೆಳಕಿಗೆ ಬಂದಿದೆ.

Bangalore Mirror Bureau 17 Feb 2017, 3:23 pm
ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ಆಕಾಂಕ್ಷಿಯಾಗಿ ಕೊನೆಗೆ ಪರಪ್ಪನ ಅಗ್ರಹಾರದ ಜೈಲು ಸೇರಿರುವ ಎಐಡಿಎಂಕೆ ನಾಯಕಿ ವಿ ಕೆ ಶಶಿಕಲಾ, ಪೊಲೀಸ್‌ ಜೀಪ್‌ ಹತ್ತಿ ಪರಪ್ಪನ ಅಗ್ರಹಾರಕ್ಕೆ ತೆರಳಲು ನಿರಾಕರಿಸಿದ್ದ ಘಟನೆ ಬೆಳಕಿಗೆ ಬಂದಿದೆ.
Vijaya Karnataka Web i am not a petty thief sasikala tells cops
ಪೊಲೀಸ್‌ ಜೀಪು ಹತ್ತಲು ನಾನು ಕಳ್ಳಿಯಲ್ಲ: ಶಶಿಕಲಾ


ಬುಧವಾರ ಶಶಿಕಲಾ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದಾಗ ಜೈಲಿಗೆ ತೆರಳಲು ಪೊಲೀಸ್ ಜೀಪನ್ನೇರಲು ಒಪ್ಪಲಿಲ್ಲ. ಎಷ್ಟೇ ದೂರವಾದರೂ ನಡೆದೇ ಹೋಗುವುದಾಗಿ ಹೇಳಿದರು. 'ನಾನೇನು ಕಳ್ಳಿಯಲ್ಲ, ಪೊಲೀಸ್‌ ಜೀಪಿನಲ್ಲಿ ಕುಳಿತು ತೆರಳುವ ಅಪರಾಧವನ್ನು ನಾನು ಮಾಡಿಲ್ಲ, ನಾನು ಜೈಲಿನ ಸೆಲ್ಲಿನಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ತೆರೆದ ಜೀಪಿನಲ್ಲಿ ಅಪರಾಧಿಯಂತೆ ಕುಳಿತುಕೊಳ್ಳುವುದಿಲ್ಲ. ಎಷ್ಟೇ ದೂರವಿದ್ದರೂ ನಡೆದೇ ಹೋಗುತ್ತೇನೆ' ಎಂದು ಶಶಿಕಲಾ ಪೊಲೀಸರಿಗೆ ಹೇಳಿದ್ದಾಗಿ ಮೂಲಗಳು ಹೇಳಿವೆ.

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಪರಪ್ಪನ ಅಗ್ರಹಾರದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ನೀಡಲಾಗಿದ್ದ ವಿಐಪಿ ಸೌಕರ್ಯಗಳಂತೆ, ಶಶಿಕಲಾಗೂ ಆ ಸೌಕರ್ಯಗಳನ್ನು ನೀಡಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಮಾತ್ರ ಇವರ ಮನವಿಗೆ ಸೊಪ್ಪು ಹಾಕಲಿಲ್ಲ. ಹೀಗಾಗಿ ಕೋರ್ಟ್‌ನ ಈ ಮಾತೂ ಶಶಿಕಲಾಗೆ ಪೊಲೀಸ್‌ ಜೀಪ್‌ ಏರಿ ಜೈಲಿಗೆ ತೆರಳದಂತೆ ಮಾಡಿರಬಹುದು. ಆದರೆ ಪೊಲೀಸರು ಶಶಿಕಲಾಗೆ ಜೀಪು ಹತ್ತುವಂತೆ ಹೇಳಿದಾಗ ಶಶಿಕಲಾ ಮೊಗ ನೋಡಿದವರಿಗೆ ಅಲ್ಲಿ ಸಿಟ್ಟು ಹಾಗೂ ಸಿಡಿಮಿಡಿಯಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಶಶಿಕಲಾರ ಜೈಲಿನ ಮೊದಲ ದಿನ

ಜೈಲು ಪಾಲಾದ ಮೊದಲ ದಿನ ಶಶಿಕಲಾ ನಿದ್ರಿಸಿಲ್ಲವೆಂದು ಜೈಲಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಯ ಜತೆ ಆಕೆಯ ನಾದಿನಿ ಇಳವರಸಿಯನ್ನೂ ಇರಿಸಲಾಗಿದೆ. ಅಪರೂಪಕ್ಕೊಮ್ಮೆ ಇಳವರಸಿಯೊಡನೆ ಮಾತನಾಡುವ ಶಶಿಕಲಾ ಬೇರೆಯವರೊಂದಿಗೆ ಹೆಚ್ಚಾಗಿ ಬೆರೆಯುತ್ತಿಲ್ಲವಂತೆ. ಆಕೆಗೆ ಒಂದು ಸಣ್ಣ ಮಂಚ ಒದಗಿಸಲಾಗಿದೆ. ಮುಂಜಾನೆ ವೇಳೆ ತಿಂಡಿ ಹಾಗೂ ಕಾಫಿ ಕುಡಿದರೂ, ಜೈಲಿನ ಕೋಣೆಯಿಂದ ಹೊರ ಬರಲಿಲ್ಲ. ಪಕ್ಷದ ಮುಖಂಡರು ಮಾತನಾಡಲು ಯತ್ನಿಸಿದರೂ ಆಕೆ ಮಾತನಾಡಲಿಲ್ಲ.

ಬಿಳಿ ಸೀರೆ ಉಡಲು ನಿರಾಕರಿಸಿದ ಶಶಿಕಲಾ

ಜೈಲು ನಿಯಮದ ಪ್ರಕಾರ ಮಹಿಳಾ ಖೈದಿಗಳು ಬಿಳಿ ಸೀರೆ ಹಾಗೂ ಅದೇ ಬಣ್ಣದ ರವಿಕೆ ಉಡಬೇಕು. ಶಶಿಕಲಾಗೆ ಬಿಳಿ ಸೀರೆಯನ್ನು ನೀಡಲಾಗಿತ್ತಾದರೂ ಆಕೆಯ ಬಳಿಕ ಅದೇ ಬಣ್ಣದ ರವಿಕೆ ಇಲ್ಲದ ಕಾರಣ ಸೀರೆ ಉಟ್ಟಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ