ಆ್ಯಪ್ನಗರ

ಪಿಎಂ, ಸಿಎಂ ಎಲ್ಲ ಗೊತ್ತು; ಜಾಮೀನು ನೀಡಿ ಎಂದ ಕೌನ್ಸಿಲರ್!

ನನಗೆ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಜತೆ ಉತ್ತಮ ಸಂಬಂಧ ಇದೆ. ನನಗೆ ಜಾಮೀನು ಮಂಜೂರು ಮಾಡಿ ಎಂದು ವಡೋದರ ಕ್ಷೇತ್ರದ ಬಿಜೆಪಿ ಶಾಸಕ ಹಶಿತ್ ತಲಾಟಿ ಉದ್ಧಟತನ ಮೆರೆದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 22 Mar 2017, 7:04 pm
ಅಹ್ಮದಾಬಾದ್: ನನಗೆ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಜತೆ ಉತ್ತಮ ಸಂಬಂಧ ಇದೆ. ನನಗೆ ಜಾಮೀನು ಮಂಜೂರು ಮಾಡಿ ಎಂದು ವಡೋದರದ ಬಿಜೆಪಿ ಕೌನ್ಸಿಲರ್ ರ್ ಹಶಿತ್ ತಲಾಟಿ ಉದ್ಧಟತನ ಮೆರೆದಿದ್ದಾರೆ.
Vijaya Karnataka Web i have good relations with pm and cm grant me bail
ಪಿಎಂ, ಸಿಎಂ ಎಲ್ಲ ಗೊತ್ತು; ಜಾಮೀನು ನೀಡಿ ಎಂದ ಕೌನ್ಸಿಲರ್!


ಹಶಿತ್ ತಲಾಟಿ ವಡೋದರದ ಗಾಯತ್ರಿ ಸೊಸೈಟ್‌ನಲ್ಲಿ ನಡೆದ ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪಿಯಾಗಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಹಶಿತ್ ತಲಾಟಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಆಸಾಮಿ ಜಾಮೀನು ಮಂಜೂರು ಮಾಡುವಂತೆ ಕೋರಿ ಸಲ್ಲಿಸಿದ ಮನವಿಯಲ್ಲಿ ತನ್ನ ರಾಜಕೀಯ ಹಿನ್ನೆಲೆಯನ್ನು ಪಟ್ಟಿಮಾಡಿ ನಮೂದಿಸಿದ್ದ ಎನ್ನಲಾಗಿದೆ.

'ನಾನೊಬ್ಬ ಉದ್ಯಮಿ. ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಬಿಜೆಪಿಯಿಂದಲೇ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದೇನೆ. ತಾನು ಪ್ರಧಾನಿ ಮೋದಿ ಸೇರಿದಂತೆ ಉನ್ನತ ಮಟ್ಟದ ಬಿಜೆಪಿ ನಾಯಕರ ಹಾಗೂ ಮುಖ್ಯಂತ್ರಿಯೊಂದಿಗೆ ಉತ್ತಮ ಸ್ನೇಹ ಹೊಂದಿದ್ದೇನೆ. ನಾನು ತಲೆಮರಿಸಿಕೊಳ್ಳುವ ವ್ಯಕ್ತಿ ಅಲ್ಲ. ನನಗೆ ಜಾಮೀನು ಮಂಜೂರು ಮಾಡಬೇಕು' ಎಂದು ಕೋರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ