ಆ್ಯಪ್ನಗರ

ವಾಯುಪಡೆ ವಿಮಾನ ನಾಪತ್ತೆ: ಸುಳಿವು ನೀಡಿದರೆ 5 ಲಕ್ಷ ರೂ.

ವಿಮಾನದ ಪತ್ತೆಗಾಗಿ ಈಗಾಗಲೇ ಐಎಎಫ್ ಮತ್ತು ಸರಕಾರ ವಿವಿಧ ಆಯಾಮದ ಮೂಲಕ ಲಭ್ಯ ಎಲ್ಲ ಮಾರ್ಗ ಬಳಸಿ ಯತ್ನಿಸುತ್ತಿದೆ.

Agencies 9 Jun 2019, 6:34 pm
ಹೊಸದಿಲ್ಲಿ: ಭಾರತೀಯ ವಾಯುಪಡೆಯ ಎಎನ್‌-32 ವಿಮಾನ ನಾಪತ್ತೆಯಾಗಿ ವಾರ ಕಳೆದರೂ ಯಾವುದೇ ಸುಳಿವು ಲಭಿಸಿಲ್ಲ. ಹೀಗಾಗಿ ವಿಮಾನದ ಕುರಿತು ಸುಳಿವು ನೀಡಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಭಾರತೀಯ ವಾಯುಪಡೆ ಹೇಳಿದೆ.
Vijaya Karnataka Web aircraft


ವಿಮಾನದ ಪತ್ತೆಗಾಗಿ ಈಗಾಗಲೇ ಐಎಎಫ್ ಮತ್ತು ಸರಕಾರ ವಿವಿಧ ಆಯಾಮದ ಮೂಲಕ ಲಭ್ಯ ಎಲ್ಲ ಮಾರ್ಗ ಬಳಸಿ ಯತ್ನಿಸುತ್ತಿದೆ. ಪ್ರತಿಕೂಲ ಹವಾಮಾನವೂ ವಾಯುಪಡೆ ವಿಮಾನದ ಹುಡುಕಾಟಕ್ಕೆ ಹಿನ್ನಡೆ ತಂದಿದೆ.

ಅಸ್ಸಾಂನಿಂದ ಜೋರಾಹ್ಟ್ ವಾಯುನೆಲೆಯಿಂದ ಕಳೆದ ಸೋಮವಾರ ಟೇಕಾಫ್ ಆಗಿದ್ದ ವಿಮಾನ, ಭಾರತ-ಚೀನಾ ಗಡಿ ಪ್ರದೇಶದಲ್ಲಿ ಹಾರಾಟ ನಡೆಸುತ್ತಿರುವಾಗ ರಡಾರ್ ಸಂಪರ್ಕ ಕಡಿದುಕೊಂಡಿತ್ತು. ಅದಾದ ಬಳಿಕ ವಿಮಾನದ ಕುರಿತು ಯಾವುದೇ ಸುಳಿವು ಲಭಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ