ಆ್ಯಪ್ನಗರ

ವೀರಚಕ್ರ ಪ್ರಶಸ್ತಿಗೆ ಅಭಿನಂದನ್‌ ಹೆಸರು ಶಿಫಾರಸು; ಜಮ್ಮು ಕಾಶ್ಮೀರದಿಂದ ವರ್ಗಾವಣೆ

ಬೆಂಗಳೂರಿನಲ್ಲಿರುವ ಇನ್ಸ್‌ಟಿಟ್ಯೂಟ್‌ ಆಫ್‌ ಏರೋಸ್ಪೇಸ್‌ ಮೆಡಿಸಿನ್‌(ಐಎಎಂ)ನಲ್ಲಿ ಅವರು ಮುಂದಿನ ವಾರ ಅಂತಿಮ ಹಂತದ ಸರಣಿ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ನಂತರ ಶೀಘ್ರದಲ್ಲೇ ಕರ್ತವ್ಯಕ್ಕೆ ಮರಳಲಿದ್ದಾರೆ.

Vijaya Karnataka Web 20 Apr 2019, 10:26 pm
ಹೊಸದಿಲ್ಲಿ: ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಪುನಃ ಯುದ್ಧ ವಿಮಾನ ಏರಲು ಸಿದ್ಧರಾಗಿದ್ದಾರೆ. ಈ ನಡುವೆ ಅವರನ್ನು ಜಮ್ಮು ಕಾಶ್ಮೀರದಿಂದ ವರ್ಗಾವಣೆ ಮಾಡಲಾಗಿದೆ. ಜತೆಗೆ ವೀರಚಕ್ರ ಪ್ರಶಸ್ತಿಗೆ ಅಭಿನಂದನ್‌ ಹೆಸರನ್ನು ಭಾರತೀಯ ವಾಯುಪಡೆ ಶಿಫಾರಸು ಮಾಡಿದೆ.
Vijaya Karnataka Web ಅಭಿನಂದನ್‌
ಅಭಿನಂದನ್‌




ಕಳೆದ ವಾರ ದಿಲ್ಲಿಯ ಏರ್‌ಫೋರ್ಸ್‌ ಸೆಂಟ್ರಲ್‌ ಮೆಡಿಕಲ್‌ ಎಸ್ಟಾಬ್ಲಿಷ್ಮೆಂಟ್‌ನಿಂದ ವೈದ್ಯಕೀಯ ತಪಾಸಣೆಗೆ ಅಭಿನಂದನ್‌ ಒಳಗಾಗಿದ್ದರು. ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ದು, ಕರ್ತವ್ಯಕ್ಕೆ ಹಾಜರಾಗಬಹುದು ಎಂದು ವೈದ್ಯರು ಶಿಫಾರಸು ಮಾಡಿದ್ದಾರೆ.

ಬೆಂಗಳೂರಿನಲ್ಲಿರುವ ಇನ್ಸ್‌ಟಿಟ್ಯೂಟ್‌ ಆಫ್‌ ಏರೋಸ್ಪೇಸ್‌ ಮೆಡಿಸಿನ್‌(ಐಎಎಂ)ನಲ್ಲಿ ಅವರು ಮುಂದಿನ ವಾರ ಅಂತಿಮ ಹಂತದ ಸರಣಿ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ನಂತರ ಶೀಘ್ರದಲ್ಲೇ ಕರ್ತವ್ಯಕ್ಕೆ ಮರಳಲಿದ್ದಾರೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.


ಫೆಬ್ರವರಿ 27ರಂದು ಪಾಕಿಸ್ತಾನ ವಾಯುಪಡೆಯ ಎಫ್‌-16 ಅನ್ನು ಹೊಡೆದುರುಳಿಸಿ ಅಭಿನಂದನ್‌ ಸಾಹಸ ಮೆರೆದಿದ್ದರು. ಪಾಕ್‌ ಕ್ಷಿಪಣಿ ದಾಳಿಯಿಂದ ತಮ್ಮ ಮಿಗ್‌-21 ವಿಮಾನ ಪತನವಾಗುವ ಮೊದಲು ಕೆಳಕ್ಕೆ ಹಾರಿ ಪಾಕ್‌ ಸೈನಿಕರಿಗೆ ಸಿಕ್ಕಿಬಿದ್ದು, ಸುಮಾರು 60 ಗಂಟೆ ಕಾಲ ಅವರ ವಶದಲ್ಲಿದ್ದರು. ನಂತರ ಮಾರ್ಚ್‌ 1ರಂದು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು. ನಾಲ್ಕು ವಾರ ರಜೆಯಲ್ಲಿದ್ದರು.

ಭದ್ರತೆ ದೃಷ್ಟಿಯಿಂದ ಅಭಿನಂದನ್‌ ಅವರನ್ನು ಶ್ರೀನಗರದ ವಾಯುನೆಲೆಯಿಂದ ಪಾಕಿಸ್ತಾನದ ಗಡಿಯಲ್ಲಿರುವ ಪಶ್ಚಿಮ ವಿಭಾಗದ ವಾಯುನೆಲೆಗೆ ಶನಿವಾರ ವರ್ಗಾಯಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ