ಹೊಸದಿಲ್ಲಿ: ಸಂಪೂರ್ಣ ದೇಶ ವಿಂಗ್ ಕಮಾಂಡರ್ ಅಭಿನಂದನ್ ಅವರ ಶೌರ್ಯವನ್ನು ಹೊಗಳುತ್ತಿದೆ. ಭಾರತೀಯ ವಾಯುಸೇನೆ ಕೂಡ ತನ್ನ ಭಾಗವಾಗಿರುವ ಅಭಿನಂದನ್ ಅವರ ಧೈರ್ಯ- ಶೌರ್ಯವನ್ನು ಶ್ಲಾಘಿಸುವಲ್ಲಿ ಹಿಂದೆ ಬಿದ್ದಿಲ್ಲ. ನೀ ಮಾಡಿದ್ದನ್ನು ಎಲ್ಲರಿಂದಲೂ ಮಾಡಲಾಗದು , ಜನನಿ ಜನ್ಮಭೂಮಿಯ ಗೌರವ ನೀನು ಎಂಬ ಸಾಲುಗಳುಳ್ಳ ಕವನವನ್ನು ವಾಯುಸೇನೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಅದೀಗ ವೈರಲ್ ಆಗಿದೆ.
ಹೀಗಿದೆ ಸಾಗುತ್ತದೆ ಕವನದ ಸಾಲು: ನೀನು ಮಾಡಿರುವ ಕೆಲಸ ಎಲ್ಲರಿಂದಲೂ ಮಾಡಲಾಗದು ಅಭಿನಂದನ್, ಜನನಿ, ಜನ್ಮಭೂಮಿಯ ಗೌರವ ನೀನು..... ಫೆಬ್ರವರಿ 27ರಂದು ಪಾಕ್ ವಾಯುಪಡೆ ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಬಂದಾಗ ಮಿಗ್-21 ಬೈಸನ್ ವಿಮಾನದಲ್ಲಿ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು. ಬಳಿಕ ಅವರ ವಿಮಾನವನ್ನು ಪಾಕ್ ಹೊಡೆದುರುಳಿಸಿತ್ತು ಈ ವೇಳೆ ಕೆಳಕ್ಕೆ ಜಿಗಿದ ಅವರು ಪಾಕ್ ಪಡೆಗಳ ಕೈಗೆ ಸಿಕ್ಕಿಬಿದ್ದಿದ್ದರು.
ಶತ್ರು ದೇಶದಲ್ಲಿ ಸಿಲುಕಿದರೂ ಸಿಂಹದಂತೆ ವೀರತ್ವವನ್ನು ಮೆರೆದ ಧೀರ ಯೋಧನೀಗ ದೇಶವಾಸಿಗಳ ಕಣ್ಮಣಿಯಾಗಿದ್ದಾನೆ.
ಭಾರತದ ರಾಜತಾಂತ್ರಿಕ ಹಾಗೂ ರಣತಾಂತ್ರಿಕ ಒತ್ತಡಗಳಿಗೆ ಮಣಿದು ಎರಡೇ ದಿನಗಳಲ್ಲಿ ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ವಾಪಸ್ ಕಳುಹಿಸಿತ್ತು.
ಹೀಗಿದೆ ಸಾಗುತ್ತದೆ ಕವನದ ಸಾಲು: ನೀನು ಮಾಡಿರುವ ಕೆಲಸ ಎಲ್ಲರಿಂದಲೂ ಮಾಡಲಾಗದು ಅಭಿನಂದನ್, ಜನನಿ, ಜನ್ಮಭೂಮಿಯ ಗೌರವ ನೀನು.....
ಶತ್ರು ದೇಶದಲ್ಲಿ ಸಿಲುಕಿದರೂ ಸಿಂಹದಂತೆ ವೀರತ್ವವನ್ನು ಮೆರೆದ ಧೀರ ಯೋಧನೀಗ ದೇಶವಾಸಿಗಳ ಕಣ್ಮಣಿಯಾಗಿದ್ದಾನೆ.
ಭಾರತದ ರಾಜತಾಂತ್ರಿಕ ಹಾಗೂ ರಣತಾಂತ್ರಿಕ ಒತ್ತಡಗಳಿಗೆ ಮಣಿದು ಎರಡೇ ದಿನಗಳಲ್ಲಿ ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ವಾಪಸ್ ಕಳುಹಿಸಿತ್ತು.