ಪುಲ್ವಾಮಾದಲ್ಲಿ ಉಗ್ರರ ದಾಳಿಗೊಳಗಾಗಿ ಹುತಾತ್ಮರಾದ ಸೈನಿಕರ ಕುಟುಂಬಕ್ಕಾದ ನಷ್ಟವನ್ನು ತುಂಬಿಕೊಡಲಾಗದು. ಆದರೆ ಈ ಶೋಚನೀಯ ಸಮಯದಲ್ಲಿ ಸಂಪೂರ್ಣ ದೇಶ ಅವರ ಪರ ನಿಂತಿದ್ದು, ಅವರಿಗೆ ತಮ್ಮಿಂದಾದಷ್ಟು ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಸೆಲೆಬ್ರಿಟಿಗಳು, ಉದ್ಯಮಿಗಳಿಂದ ಹಿಡಿದು ಸಾಮಾನ್ಯ ಜನರು ಸಹ ಉದಾರತೆಯನ್ನು ತೋರುತ್ತಿದ್ದಾರೆ.
ಮತ್ತೀಗ, ಬಿಹಾರದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಹುತಾತ್ಮ ಯೋಧರ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
ಬಿಹಾರದ ಶೇಖ್ಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಇನ್ಯಾತ್ ಖಾನ್, ತಮ್ಮ ರಾಜ್ಯದ ಹುತಾತ್ಮ ಸೈನಿಕನ ಮಕ್ಕಳನ್ನು ದತ್ತು ಪಡೆಯಲು ಬಯಸಿರುವುದಾಗಿ ಘೋಷಿಸಿದ್ದಾರೆ. ಹುತಾತ್ಮ ಯೋಧರಾದ ರತನ್ ಕುಮಾರ್ ಠಾಕೂರ್ ಮತ್ತು ಸಂಜಯ್ ಕುಮಾರ್ ಸಿನ್ಹಾ ಅವರ ಶೈಕ್ಷಣಿಕ ವೆಚ್ಚ ಮತ್ತು ಇತರ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಅವರು ಹೇಳಿದ್ದಾರೆ.
ಈ ಇಬ್ಬರು ಸೈನಿಕರ ಕುಟುಂಬದವಿಗಾಗಿ ನಿಧಿ ಸಂಗ್ರಹಿಸಲು ಬ್ಯಾಂಕ್ ಖಾತೆ ತೆರೆಯುವಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾರ್ಚ್ 10ರೊಳಗೆ ಎಷ್ಟು ಹಣ ಸಂಗ್ರಹವಾಗುತ್ತದೆಯೋ ಅದನ್ನು ವಿಭಾಗಿಸಿ ಎರಡು ಕುಟುಂಬದವರಿಗೆ ನೀಡಲಾಗುವುದು. ನಿಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡಿ ಎಂದು ಜನರಲ್ಲಿ ವಿನಂತಿಸಿಕೊಳ್ಳಲು ಬಯಸುತ್ತೇನೆ. ಈ ಮೂಲಕ ನಮ್ಮ ಬೆಂಬಲದ ಅಗತ್ಯವಿರುವ ಸಮಯದಲ್ಲಿ ಅವರಿಗೆ ಆಧಾರವಾಗಿ ನಿಲ್ಲೋಣ ಎಂದು ಅವರು ಹೇಳಿದ್ದಾರೆ.
ಇನ್ಯಾತ್ ಖಾನ್ ಬಿಹಾರ್ ಕೆಡೆರ್ನ 2012ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ತಮ್ಮ ಎರಡು ದಿನದ ಸಂಬಳವನ್ನು ಸಹ ಹುತಾತ್ಮರ ಕುಟುಂಬದವರಿಗೆ ನೀಡಲು ಅವರು ಬಯಸಿದ್ದಾರೆ.
ಮತ್ತೀಗ, ಬಿಹಾರದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಹುತಾತ್ಮ ಯೋಧರ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
ಬಿಹಾರದ ಶೇಖ್ಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಇನ್ಯಾತ್ ಖಾನ್, ತಮ್ಮ ರಾಜ್ಯದ ಹುತಾತ್ಮ ಸೈನಿಕನ ಮಕ್ಕಳನ್ನು ದತ್ತು ಪಡೆಯಲು ಬಯಸಿರುವುದಾಗಿ ಘೋಷಿಸಿದ್ದಾರೆ. ಹುತಾತ್ಮ ಯೋಧರಾದ ರತನ್ ಕುಮಾರ್ ಠಾಕೂರ್ ಮತ್ತು ಸಂಜಯ್ ಕುಮಾರ್ ಸಿನ್ಹಾ ಅವರ ಶೈಕ್ಷಣಿಕ ವೆಚ್ಚ ಮತ್ತು ಇತರ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಅವರು ಹೇಳಿದ್ದಾರೆ.
ಈ ಇಬ್ಬರು ಸೈನಿಕರ ಕುಟುಂಬದವಿಗಾಗಿ ನಿಧಿ ಸಂಗ್ರಹಿಸಲು ಬ್ಯಾಂಕ್ ಖಾತೆ ತೆರೆಯುವಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾರ್ಚ್ 10ರೊಳಗೆ ಎಷ್ಟು ಹಣ ಸಂಗ್ರಹವಾಗುತ್ತದೆಯೋ ಅದನ್ನು ವಿಭಾಗಿಸಿ ಎರಡು ಕುಟುಂಬದವರಿಗೆ ನೀಡಲಾಗುವುದು. ನಿಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡಿ ಎಂದು ಜನರಲ್ಲಿ ವಿನಂತಿಸಿಕೊಳ್ಳಲು ಬಯಸುತ್ತೇನೆ. ಈ ಮೂಲಕ ನಮ್ಮ ಬೆಂಬಲದ ಅಗತ್ಯವಿರುವ ಸಮಯದಲ್ಲಿ ಅವರಿಗೆ ಆಧಾರವಾಗಿ ನಿಲ್ಲೋಣ ಎಂದು ಅವರು ಹೇಳಿದ್ದಾರೆ.
ಇನ್ಯಾತ್ ಖಾನ್ ಬಿಹಾರ್ ಕೆಡೆರ್ನ 2012ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ತಮ್ಮ ಎರಡು ದಿನದ ಸಂಬಳವನ್ನು ಸಹ ಹುತಾತ್ಮರ ಕುಟುಂಬದವರಿಗೆ ನೀಡಲು ಅವರು ಬಯಸಿದ್ದಾರೆ.