ಆ್ಯಪ್ನಗರ

ಐಸಿಐಸಿಐ ಎಂಡಿ ಚಂದಾ ಕೊಚ್ಚಾರ್‌ ವಿರುದ್ಧ ತನಿಖೆಗೆ ಆದೇಶ

ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ಚಂದಾ ಕೊಚ್ಚಾರ್‌ ವಿಚಾರಣೆಗಾಗಿ ಸ್ವತಂತ್ರ ಸಂಸ್ಥೆಯೊಂದನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.

TIMESOFINDIA.COM 30 May 2018, 6:10 pm
ಮುಂಬಯಿ: ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ಚಂದಾ ಕೊಚ್ಚಾರ್‌ ವಿಚಾರಣೆಗಾಗಿ ಸ್ವತಂತ್ರ ಸಂಸ್ಥೆಯೊಂದನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.
Vijaya Karnataka Web chanda


ಸಂಸ್ಥೆಯ ಉದ್ಯೋಗಿಯೋರ್ವ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ, ವಿಶೇಷ ವ್ಯಕ್ತಿಯೊಬ್ಬರು ಸಂಸ್ಥೆಗೆ ಮುಖ್ಯಸ್ಥರಾಗಿರಲಿದ್ದಾರೆ. ಬ್ಯಾಂಕ್‌ನ ಲೆಕ್ಕಾಚಾರ ವಿಭಾಗವು ಈ ವಿಚಾರದಲ್ಲಿ ಮುಂದಿನ ಹೆಜ್ಜೆ ತೆಗೆದುಕೊಳ್ಳಲಿದ್ದು, ಮುಖ್ಯಸ್ಥರ ನೇಮಕ, ತನಿಖೆ ಅವಧಿ ಇತ್ಯಾದಿ ಎಲ್ಲ ವಿಚಾರಗಳನ್ನು ವಿಭಾಗವೇ ನೋಡಿಕೊಳ್ಳಲಿದೆ.

ತನಿಖೆ ವೇಳೆ ಎಲ್ಲ ಅಗತ್ಯವಾಗುವ ಎಲ್ಲ ಸೌಲಭ್ಯಗಳನ್ನೂ ನೀಡಲಾಗುತ್ತದೆ. ದಾಖಲೆ ಪತ್ರಗಳ ಪರಿಶೀಲನೆಗೆ ಅಗತ್ಯವಾದ ತಂತ್ರಜ್ಞಾನ, ಕಾನೂನಾತ್ಮಕ ಸಹಾಯಗಳನ್ನೂ ಒದಗಿಸಲಾಗುತ್ತದೆ. ಕೆಲವೊಂದು ಸಾಲಗಾರೊಂದಿಗಿನ ವ್ಯವಹಾರ ಹಾಗೂ ಚಂದಾ ಕೊಚ್ಚಾರ್‌ ಬಗ್ಗೆ ದೂರುಗಳು ಬಂದಿದೆ ಎಂದು ಬ್ಯಾಂಕ್‌ ಉನ್ನತ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ