ಆ್ಯಪ್ನಗರ

ಕೊರೊನಾ ಸಮುದಾಯ ಪ್ರಸರಣ ಗೊಂದಲ ನಿವಾರಣೆಗೆ ದೇಶಾದ್ಯಂತ ಸೆರೊಲಾಜಿಕಲ್‌ ಸಮೀಕ್ಷೆ

ಕಳೆದ ಏಪ್ರಿಲ್ ‌- ಮೇ ತಿಂಗಳಲ್ಲೂ ಇಂಥಹದ್ದೇ ಸೆರೊಲಾಜಿಕಲ್‌ ಸಮೀಕ್ಷೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೇಶಾದ್ಯಂತ ನಡೆಸಿತ್ತು. ಅದರ ಫಲಿತಾಂಶಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

Agencies 11 Jul 2020, 12:31 am

ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಸಮುದಾಯದೊಳಗೆ ಹರಡುವಿಕೆ ಹಂತಕ್ಕೆ ತಲುಪಿದೆಯೇ ಎಂಬುದನ್ನು ಪರಿಶೀಲಿಸಲು ರಾಷ್ಟ್ರವ್ಯಾಪಿ ಸೆರೊಲಾಜಿಕಲ್‌ ಸಮೀಕ್ಷೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತಿಳಿಸಿದೆ.
Vijaya Karnataka Web coronavirus
ಸಾಂದರ್ಭಿಕ ಚಿತ್ರ


ಅಲ್ಲದೆ ದೇಶದ ಜನರಲ್ಲಿ ಕೊರೊನಾ ವೈರಾಣು ವಿರುದ್ಧ ಹೋರಾಡಲು ಇರುವ ರೋಗ ನಿರೋಧಕ ಶಕ್ತಿಯ ಬಗ್ಗೆ ತಿಳಿಯುವುದು ಸಹ ಈ ಸಮೀಕ್ಷೆಯ ಉದ್ದೇಶವಾಗಿದೆ. ಇದಕ್ಕಾಗಿ ಐಸಿಎಂಆರ್‌ ವ್ಯಕ್ತಿಗಳ ರಕ್ತದಲ್ಲಿರುವ ಸೆರಂ ಅನ್ನು ಪಡೆದು ಪರೀಕ್ಷೆ ನಡೆಸಲಿದೆ.

ಇದಕ್ಕೂ ಮುನ್ನ ಕಳೆದ ಏಪ್ರಿಲ್ ‌- ಮೇ ತಿಂಗಳಲ್ಲೂ ಐಸಿಎಂಆರ್‌ ಇಂಥದ್ದೇ ಸೆರೊಲಾಜಿಕಲ್‌ ಸಮೀಕ್ಷೆ ನಡೆಸಿತ್ತು. ಅದರ ಫಲಿತಾಂಶಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.
ಕೊರೊನಾ ಸಮುದಾಯಕ್ಕೆ ಹರಡಿಲ್ಲ ಎನ್ನುವುದು ಆತ್ಮವಂಚನೆ : ಡಾ. ಶ್ರೀನಿವಾಸ‌ ಕಕ್ಕಿಲಾಯ

ಈ ಮುನ್ನ ನಡೆಸಿದ ಸಮೀಕ್ಷೆಯಲ್ಲಿ 83 ಜಿಲ್ಲೆಗಳ ಪೈಕಿ 65 ಜಿಲ್ಲೆಗಳಲ್ಲಿನ 0.73% ಜನರು 'ಸಾರ್ಸ್‌-ಕೋವ್‌-2' ವೈರಸ್‌ ಸೋಂಕಿಗೆ ಗುರಿಯಾಗಿರುವುದು ಪತ್ತೆಯಾಗಿದೆ. ಆದರೆ ದಿಲ್ಲಿ ಸೇರಿದಂತೆ ಇನ್ನೂ ಹಲವು ನಗರಗಳ ದತ್ತಾಂಶ ಸಂಯೋಜನೆ ಕಾರ್ಯ ಮುಂದುವರಿದಿದ್ದು, ಆ ಬಳಿಕ ಹಳೆ ಸಮೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಐಸಿಎಂಆರ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ