ಆ್ಯಪ್ನಗರ

ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಬಗ್ಗೆ ದೇಶ ವ್ಯಾಪಿ ಸಮೀಕ್ಷೆಗೆ ಮುಂದಾದ ಐಸಿಎಂಆರ್‌!

ಕೊರೊನಾ ವಿರುದ್ಧ ಹೋರಾಡಲು ಇರುವ ರೋಗ ನಿರೋಧಕ ಶಕ್ತಿಯ ಬಗ್ಗೆ ತಿಳಿಯುವ ಉದ್ದೇಶ ಹಾಗೂ ಮುಂದಿನ ದಿನಗಳಲ್ಲಿ ದೇಶದ ಎಷ್ಟು ಜನರು ಕೊರೊನಾಗ ತುತ್ತಾಗಬಹುದು ಎನ್ನುವುದನ್ನ ತಿಳಿದುಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸರ್ವೇ ನಡೆಸಲಿದೆ.

Vijaya Karnataka Web 11 Jul 2020, 7:53 am
ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಸಮುದಾಯದ ಹರಡುವಿಕೆ ಹಂತಕ್ಕೆ ತಲುಪಿದೆಯೇ ಎಂಬುದನ್ನು ಪರಿಶೀಲಿಸಲು ರಾಷ್ಟ್ರ ವ್ಯಾಪಿ ಸೆರೊಲಾಜಿಕಲ್‌ ಸಮೀಕ್ಷೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ತಿಳಿಸಿದೆ.
Vijaya Karnataka Web 75053773


ಅಲ್ಲದೆ ದೇಶದ ಜನರಲ್ಲಿ ಕೊರೊನಾ ವಿರುದ್ಧ ಹೋರಾಡಲು ಇರುವ ರೋಗ ನಿರೋಧಕ ಶಕ್ತಿಯ ಬಗ್ಗೆ ತಿಳಿಯುವುದು ಸಹ ಈ ಸಮೀಕ್ಷೆಯ ಉದ್ದೇಶವಾಗಿದೆ. ಇದಕ್ಕಾಗಿ ಐಸಿಎಂಆರ್‌ ವ್ಯಕ್ತಿಗಳ ರಕ್ತದಲ್ಲಿರುವ ಸೆರಂ ಅನ್ನು ಪಡೆದು ಪರೀಕ್ಷೆ ನಡೆಸಲಿದೆ. ಇದಕ್ಕೂ ಮುನ್ನ ಕಳೆದ ಏಪ್ರಿಲ್‌-ಮೇ ತಿಂಗಳಲ್ಲೂ ಐಸಿಎಂಆರ್‌ ಇಂಥದ್ದೇ ಸೆರೊಲಾಜಿಕಲ್‌ ಸಮೀಕ್ಷೆ ನಡೆಸಿತ್ತು.

ಅದರ ಫಲಿತಾಂಶಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಮುನ್ನ ನಡೆಸಿದ ಸಮೀಕ್ಷೆಯಲ್ಲಿ 83 ಜಿಲ್ಲೆಗಳ ಪೈಕಿ 65 ಜಿಲ್ಲೆಗಳಲ್ಲಿನ 0.73% ಜನರು 'ಸಾರ್ಸ್‌-ಕೋವ್‌-2' ವೈರಸ್‌ ಸೋಂಕಿಗೆ ಗುರಿಯಾಗಿರುವುದು ಪತ್ತೆಯಾಗಿದೆ. ಆದರೆ ದಿಲ್ಲಿ ಸೇರಿದಂತೆ ಇನ್ನೂ ಹಲವು ನಗರಗಳ ದತ್ತಾಂಶ ಸಂಯೋಜನೆ ಕಾರ್ಯ ಮುಂದುವರಿದಿದ್ದು, ಆ ಬಳಿಕ ಹಳೆ ಸಮೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಏನಿದು ಸೇರಂ ಸಮೀಕ್ಷೆ? ಮನುಷ್ಯನ ದೇಹದಲ್ಲಿ ರಕ್ತದಲ್ಲಿರುವ ಸೇರಂನ್ನ ವೈದ್ಯಕೀಯ ಅಥವಾ ವೈಜ್ಞಾನಿಕ ಅಧ್ಯಯನ ನಡೆಸುವ ಮೂಲಕ ಮನುಷ್ಯನ ದೇಹದಲ್ಲಿರುವ ರೋಗ ಪತ್ತೆ ಮಾಡಬಹುದು. ಅಲ್ಲದೇ ಅಧ್ಯಯನದ ಮೂಲಕ ಮನುಷ್ಯನ ದೇಹದಲ್ಲಿ ಯಾವ ರೀತಿ ರೋಗ ನಿರೋಧಕ ಶಕ್ತಿ ಇದೆ ಎಂಬುವುದನ್ನ ತಿಳಿದುಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ