ಆ್ಯಪ್ನಗರ

ಆಧಾರ್‌ ಇಲ್ಲವೆಂದು ರೇಷನ್‌ ನಿರಾಕರಣೆ ಮಾಡುವಂತಿಲ್ಲ: ಯುಐಡಿಎಐ ಎಚ್ಚರಿಕೆ

ಆಧಾರ್‌ ಇಲ್ಲವೆಂಬ ಕಾರಣಕ್ಕೆ ಅರ್ಹ ಕುಟುಂಬಕ್ಕೆ ಪಡಿತರ ಸಾಮಗ್ರಿ ನಿರಾಕರಿಸುವಂತಿಲ್ಲ ಎಂದು ಯುಐಡಿಎಐ ಹೇಳಿದೆ.

TNN 19 Oct 2017, 8:01 am
ಹೊಸದಿಲ್ಲಿ: ಆಧಾರ್‌ ಇಲ್ಲವೆಂಬ ಕಾರಣಕ್ಕೆ ಅರ್ಹ ಕುಟುಂಬಕ್ಕೆ ಪಡಿತರ ಸಾಮಗ್ರಿ ನಿರಾಕರಿಸುವಂತಿಲ್ಲ ಎಂದು ಯುಐಡಿಎಐ ಹೇಳಿದೆ. ಜಾರ್ಖಂಡ್‌ನಲ್ಲಿ ಇತ್ತೀಚೆಗೆ ಹನ್ನೊಂದು ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರ ಈ ಕಟ್ಟುನಿಟ್ಟಿನ ಸೂಚನೆ ನೀಡಿದೆ.
Vijaya Karnataka Web idai no one can be denied rations for lack of aadhaar
ಆಧಾರ್‌ ಇಲ್ಲವೆಂದು ರೇಷನ್‌ ನಿರಾಕರಣೆ ಮಾಡುವಂತಿಲ್ಲ: ಯುಐಡಿಎಐ ಎಚ್ಚರಿಕೆ


ಆರು ಸದಸ್ಯರಿದ್ದ ಬಾಲಕಿಯ ಕುಟುಂಬಕ್ಕೆ ಆಧಾರ್‌ ಇಲ್ಲವೆಂದು ಪಡಿತರ ಸಾಮಗ್ರಿ ವಿತರಿಸಿರಲಿಲ್ಲ. ಈ ಕುಟುಂಬಕ್ಕೆ ಪಡಿತರ ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮಕ್ಕೂ ಪ್ರಾಧಿಕಾರ ಮುಂದಾಗಿದೆ.

ಕುಟುಂಬಗಳು ಆಧಾರ್‌ ನಂಬರ್‌ ಪಡೆಯವವರೆಗೆ ಪಡಿತರ ಸೇರಿದಂತೆ ಯೋಜನೆಗಳ ಲಾಭ ಪಡೆಯಲು ಇತರ ಗುರುತು ಪತ್ರ ಬಳಸಿಕೊಳ್ಳಲು ಅವಕಾಶವಿದೆ ಎಂದು ಪಾಂಡೆ ಸ್ಪಷ್ಟಪಡಿಸಿದ್ದಾರೆ.

ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಜಾರ್ಖಂಡ್‌ ಸರಕಾರ ತನಿಖೆಗೆ ಆದೇಶಿಸಿದೆ. ತಪ್ಪಿತಸ್ಥರ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತ ತಪ್ಪುಗಳು ನಡೆಯದಂತೆ ಸರಕಾರ ನೋಡಿಕೊಳ್ಳಲಿದೆ ಎಂದು ಪಾಂಡೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ