ಆ್ಯಪ್ನಗರ

ನಾಯಿಗಳನ್ನೇ ನಿಯಂತ್ರಿಸಲಾಗದ ನೀವು ಭಯೋತ್ಪಾದಕರನ್ನು ಹೇಗೆ ನಿಭಾಯಿಸುತ್ತೀರಿ?: ಗುಜರಾತ್ ಹೈಕೋರ್ಟ್

ಬೀದಿ ನಾಯಿಗಳನ್ನು ನಿಯಂತ್ರಿಸಲು ಆಗದ ನಿಮಗೆ ಭಯೋತ್ಪಾದಕರನ್ನು ನಿಭಾಯಿಸಲು ಹೇಗೆ ಸಾಧ್ಯ ಎಂದು ಗುಜರಾತ್ ಹೈಕೋರ್ಟ್ ಎಎಐ ಅನ್ನು ತರಾಟೆಗೆ ತೆಗೆದುಕೊಂಡಿದೆ. ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕೆಂದು ಅಹಮದಾಬಾದ್‌ ನಗರಸಭೆಗೆ ಸೂಚನೆ ನೀಡಲು ಎಎಐ ಮನವಿ ಮಾಡಿಕೊಂಡಿತ್ತು.

TIMESOFINDIA.COM 29 Nov 2018, 6:56 pm
ಅಹಮದಾಬಾದ್: ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕೆಂದು ಅಹಮದಾಬಾದ್‌ ನಗರಸಭೆಗೆ ಸೂಚನೆ ನೀಡಲು ಒಪ್ಪದ ಗುಜರಾತ್ ಹೈಕೋರ್ಟ್ ಪೀಠ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ( ಎಎಐ) ವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್‌ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಬಳಿ ಬೀದಿ ನಾಯಿಗಳು ಸುಳಿಯದಂತೆ ನಿರ್ದೇಶಿಸಬೇಕೆಂದು ಎಎಐ ಗುಜರಾತ್‌ ಹೈಕೋರ್ಟ್‌ಗೆ ಮನವಿ ಮಾಡಿತ್ತು.
Vijaya Karnataka Web gujarat high court


ಪ್ರತಿ ದಿನ ನಾಯಿ ಹೊತ್ತೊಯ್ಯುವ ವಾಹನವನ್ನು ಕಳಿಸಬೇಕು ಅಥವಾ ನಾಯಿಗಳನ್ನು ಕೊಲ್ಲಲು ಅನುಮತಿ ನೀಡಬೇಕೆಂದು ಸ್ಥಳೀಯ ಪೌರಾಡಳಿತಕ್ಕೆ ನಿರ್ದೇಶಿಸಲು ಒಪ್ಪದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅನಂತ್ ಡೇವ್ '' ನಿಮಗೆ ಬೀದಿ ನಾಯಿಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಏರ್‌ಪೋರ್ಟ್ ಆವರಣಕ್ಕೆ ಭಯೋತ್ಪಾದಕರು ನುಗ್ಗಿದಾಗ ಏನು ಮಾಡುತ್ತೀರಿ'' ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಇನ್ನು, ಈ ಹಿಂದೆ ಗುಜರಾತ್‌ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಎಎಐ ಅರ್ಜಿ ಹಾಕಿತ್ತು. ಆದರೆ, ಏಕಸದಸ್ಯ ಪೀಠದಲ್ಲಿ ಅರ್ಜಿ ತಿರಸ್ಕೃತಗೊಂಡ ಬಳಿಕ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಮಾನ ಹಾರಾಟಕ್ಕೆ ತೊಂದರೆಯಾಗುವುದರಿಂದ ಏರ್‌ಸ್ಟ್ರಿಪ್‌ ಬಳಿ ಬೀದಿ ನಾಯಿಗಳು ಸುಳಿಯದಂತೆ ತಡೆಯಲು ಅಹಮದಾಬಾದ್ ನಗರಸಭೆ (ಎಎಂಸಿ), ಜಾನುವಾರು ಉಪದ್ರವ ನಿಯಂತ್ರಣ ಇಲಾಖೆ, ಭಾರತೀಯ ಪ್ರಾಣಿ ಸಂರಕ್ಷಣಾ ಸಮಿತಿ ಹಾಗೂ ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕೆಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಗುಜರಾತ್ ಹೈಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಮನವಿ ಮಾಡಿತ್ತು.

ಅಲ್ಲದೆ, ಬೀದಿ ನಾಯಿಗಳ ಹಾವಳಿಯಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯಗೊಂಡಿದೆ ಎಂಬ ಕಾರಣಗಳನ್ನು ನೀಡಿತ್ತು. ಜತೆಗೆ, ನಾಯಿಗಳನ್ನು ಕೊಲ್ಲುವುದಾಗಿಯೂ ಪ್ರಸ್ತಾಪ ಮಾಡಿತ್ತು. ಆದರೆ, ಇದಕ್ಕೆ ಒಪ್ಪಿಗೆ ಕೊಡಿಸಲು ಕೋರ್ಟ್ ಒಲವು ತೋರಲಿಲ್ಲ.

ಕಳೆದ ವರ್ಷ ಡಿಸೆಂಬರ್‌ನಲ್ಲೇ ಎಎಐ ಗುಜರಾತ್ ಹೈಕೋರ್ಟ್ ಏಕಸದಸ್ಯ ಪೀಠದ ಮನವಿ ಮಾಡಿದ್ದು, ಪ್ರತಿ ದಿನ ಬೀದಿ ನಾಯಿ ಹೊತ್ತೊಯ್ಯುವ ವಾಹನವನ್ನು ಕಳಿಸಬೇಕು ಅಥವಾ ನಾವು ಕರೆ ಮಾಡಿದಾಗ ಕರೆಸಬೇಕು ಎಂದು ನಗರಸಭೆಗೆ ಸೂಚಿಸುವಂತೆ ಕೋರ್ಟ್‌ಗೆ ತಿಳಿಸಿತ್ತು. ಅಲ್ಲದೆ, ಏರ್‌ಪೋರ್ಟ್‌ನ 40 - 50 ಕಿ.ಮೀ ಸುತ್ತಮುತ್ತ ನಾಯಿಗಳು ಸುಳಿಯದಂತೆ ಮಾಡಬೇಕೆಂದು ತಿಳಿಸಿತ್ತು. ಆದರೆ, 2017 ರಲ್ಲಿ ನಾಯಿ ಕಾರಣದಿಂದಾಗಿ ಕೇವಲ 3 ಬಾರಿ ವಿಮಾನ ವ್ಯತ್ಯಯಗೊಂಡಿರುವುದರಿಂದ ಪ್ರತಿ ದಿನ ವಾಹನ ಕಳಿಸಿಕೊಡಲು ನಿರ್ದೇಶಿಸುವುದು ಕಾರ್ಯಸಾಧುವಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಎಎಐ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೆ, ಈ ಸಂಬಂಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಕರ್ತವ್ಯ ಎಎಐ ಮೇಲಿದೆ'' ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ