ಆ್ಯಪ್ನಗರ

ಇ.ಡಿಯಿಂದ ನಾಳೆ ರಾಜ್‌ ಠಾಕ್ರೆ ವಿಚಾರಣೆ

ಮುಂಬಯಿ ಹೊರವಲಯದ ಠಾಣೆ ಜಿಲ್ಲೆಯ ಬಂದ್‌ಗೆ ನೀಡಿದ್ದ ಕರೆಯನ್ನು ಎಂಎನ್‌ಎಸ್‌ ವಾಪಸ್‌ ಪಡೆದಿದೆ. ಮುಂಬಯಿನ ದಾದರ್‌ ಪ್ರದೇಶದಲ್ಲಿ 'ಕೊಹಿನೂರ್‌ ಸ್ಕ್ವಯರ್‌ ಟವರ್‌' ನಿರ್ಮಿಸಲು ಕೊಹಿನೂರ್‌ ಸಿಟಿಎನ್‌ಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯಲ್ಲಿ 'ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಅಂಡ್‌ ಫೈನಾನ್ಷಿಯಲ್‌ ಸರ್ವಿಸಸ್‌ ಕಂಪನಿ 450 ಕೋಟಿ ರೂ. ಹೂಡಿಕೆ ಮಾಡಿದ್ದು, ಇದರಲ್ಲಿ ಭಾರಿ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪಗಳಿವೆ.

PTI 21 Aug 2019, 5:00 am
ಮುಂಬಯಿ: ಬಹುಕೋಟಿ ಹಗರಣದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಗುರುವಾರ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಇದೇ ವೇಳೆ ಅವರು ಅಂದು ಇ.ಡಿ. ಕಚೇರಿ ಮುಂದೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸುವಂತೆ ಪಕ್ಷದ ಕಾರ‍್ಯಕರ್ತರಿಗೆ ನೀಡಿದ್ದ ಕರೆಯನ್ನು ಹಿಂಪಡೆದಿದ್ದಾರೆ. ಮುಂಬಯಿ ಹೊರವಲಯದ ಠಾಣೆ ಜಿಲ್ಲೆಯ ಬಂದ್‌ಗೆ ನೀಡಿದ್ದ ಕರೆಯನ್ನು ಎಂಎನ್‌ಎಸ್‌ ವಾಪಸ್‌ ಪಡೆದಿದೆ. ಮುಂಬಯಿನ ದಾದರ್‌ ಪ್ರದೇಶದಲ್ಲಿ 'ಕೊಹಿನೂರ್‌ ಸ್ಕ್ವಯರ್‌ ಟವರ್‌' ನಿರ್ಮಿಸಲು ಕೊಹಿನೂರ್‌ ಸಿಟಿಎನ್‌ಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯಲ್ಲಿ 'ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಅಂಡ್‌ ಫೈನಾನ್ಷಿಯಲ್‌ ಸರ್ವಿಸಸ್‌ ಕಂಪನಿ 450 ಕೋಟಿ ರೂ. ಹೂಡಿಕೆ ಮಾಡಿದ್ದು, ಇದರಲ್ಲಿ ಭಾರಿ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪಗಳಿವೆ. ಈ ಪ್ರಕರಣದಲ್ಲಿ ಇ.ಡಿ. ರಾಜ್‌ ಠಾಕ್ರೆಯಲ್ಲದೇ ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಶಿವಸೇನೆ ನಾಯಕ ಮನೋಹರ ಜೋಶಿ ಅವರ ಪುತ್ರ ಉನ್ಮೇಶ್‌ ಜೋಶಿ ಅವರಿಗೂ ಇ.ಡಿ. ಸಮನ್ಸ್‌ ನೀಡಿದೆ.
Vijaya Karnataka Web raj

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ