ಆ್ಯಪ್ನಗರ

ಮುಂಬಯಿ ಮಹಾಮಳೆ: ಜನಜೀವನ ಅಸ್ತವ್ಯಸ್ತ

ಮುಂಬಯಿ ಮಹಾನಗರದಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ 48 ಗಂಟೆಗಳಲ್ಲಿ ಮಳೆ ಮತ್ತಷ್ಟು ಬಿರುಸಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Vijaya Karnataka Web 9 Jun 2018, 6:26 pm
ಮುಂಬಯಿ: ಮುಂಬಯಿ ಮಹಾನಗರದಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ 48 ಗಂಟೆಗಳಲ್ಲಿ ಮಳೆ ಮತ್ತಷ್ಟು ಬಿರುಸಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Vijaya Karnataka Web Mumbai Rain


ರಸ್ತೆಗಳಲ್ಲಿ ಉಂಟಾದ ಬೃಹತ್‌ ಹೊಂಡಗಳಿಂದ ವಾಹನ ಸವಾರರಿಗೆ ಅಡಚಣೆಯಾಗಿದೆ.
ಮಹಾ ನಗರದ 11 ಸ್ಥಳಗಳಲ್ಲಿ ನೆರೆ ನೀರು ನಿಂತಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ 3000 ಸಿಬ್ಬಂದಿಗಳನ್ನು ಬಿಎಂಸಿ ನಿಯೋಜಿಸಿದೆ ಎಂದು ಬಿಎಂಸಿ ವಿಕೋಪ ಪರಿಹಾರ ಮತ್ತು ನಿಯಂತ್ರಣಾ ಕೊಠಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದಾಗಿ ಇದುವರೆಗೆ ಯಾವುದೇ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿಲ್ಲ ಎಂದು ಮುಂಬಯಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.


ಹಿಂದ್‌ಮಾತಾ, ಪರೇಲ್‌ ಮತ್ತು ಧಾರಾವಿಗಳಲ್ಲಿ 100 ಮಿಲಿ ಮೀಟರ್‌ನಷ್ಟು ದಾಖಲೆಯ ಮಳೆಯಾಗಿದೆ.

ಪಟೇಲ್ ಜಂಕ್ಷನ್‌ನಲ್ಲಿ ನೆರೆ ನೀರು ತುಂಬಿದೆ.
ಹಿಂದ್‌ಮಾತಾದಲ್ಲಿ ನೆರೆಯಲ್ಲಿ ಸಿಕ್ಕ ಬಸ್‌ನ ಒಳಗಿನಿಂದ ಕಂಡ ನೋಟವಿದು.
ಸಿಯೋನ್‌ ರೈಲು ನಿಲ್ದಾಣದಲ್ಲಿ ಹಳಿಗಳ ಮೇಲೆ ಪ್ರವಾಹ.
ಹಿಂದ್‌ಮಾತಾದಲ್ಲಿ ಪ್ರವಾಹ ಪರಿಸ್ಥಿತಿಯ ವೀಕ್ಷಣೆ ಮಾಡುತ್ತಿರುವ ಬಿಎಂಸಿ ಕಮಿಷನರ್‌ ಅಜಯ್‌ ಮೆಹ್ತಾ.

ಪಾಮ್‌ ಬೀಚ್‌ ರಸ್ತೆ-ವಾಶಿ, ನವೀ ಮುಂಬಯಿಯ ನೋಟವಿದು.


ಹಿಂದ್‌ಮಾತಾ ಪರೇಲ್‌ನ ಪ್ರವಾಹದ ಚಿತ್ರಣ.


ಭಾಯಂದರ್‌ನ ಪಟಾನ್‌ಬಂದರ್‌ ಗ್ರಾಮದಲ್ಲಿ ಸಿಡಿಲಗೆ ಒಬ್ಬ ಬಲಿಯಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ.

ಮುಂಬಯಿಯಲ್ಲಿ ಭಾರೀ ಮಳೆ (ವೀಡಿಯೋ ನೋಡಿ)


ನವೀ ಮುಂಬಯಿಯ ವಿಮಾನ ನಿಲ್ದಾಣದ ಬಳಿಯ ಕೊಂಬದ್‌ಭುಜೆ ಗ್ರಾಮದ ರಸ್ತೆಗಳಲ್ಲಿ ತುಂಬಿದ ನೆರೆ ನೀರು. (ಚಿತ್ರ: ಕೆ.ಕೆ. ಚೌಧರಿ)


ಕೋಟೆ ಪ್ರದೇಶದಲ್ಲಿ (ಫೋರ್ಟ್‌ ಏರಿಯಾ) ಕಟ್ಟಡವೊಂದು ಕುಸಿಯುತ್ತಿರುವುದು. (ಪ್ರತ್ಯಕ್ಷದರ್ಶಿಗಳು ಚಿತ್ರಿಸಿದ ವೀಡಿಯೋ)


ನವೀ ಮುಂಬಯಿಯ ಥಾಣೆ-ಬೆಲಾಪುರ್‌ ರಸ್ತೆಯ ಟರ್ಭೆಯಲ್ಲಿ ಭಾರೀ ಮಳೆಯಿಂದಾಗಿ ನಿನ್ನೆ ರಾತ್ರಿ ಕಾರಿನ ಮೇಲೆ ಮುರಿದು ಬಿದ್ದ ಗುಲ್‌ಮೊಹರ್‌ ಮರ.


ಮಾಹಿಂನಲ್ಲಿ ಕಂಡು ಬಂದ ದೃಶ್ಯ.


ಮರೈನ್‌ ಡ್ರೈವ್‌ನಲ್ಲಿ ಕಂಡು ಬಂದ ಮಳೆಯ ದೃಶ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ