ಆ್ಯಪ್ನಗರ

ದೇಶಾದ್ಯಂತ ಮುಂಗಾರು ಸಮಾನ ಸಿಂಚನ

‘‘ಪೆಸಿಫಿಕ್‌ ಮತ್ತು ಹಿಂದೂ ಮಹಾ ಸಾಗರದ ಮೇಲಿನ ಸಮುದ್ರ ಮಟ್ಟದ ತಾಪಮಾನ ಭಾರತದ ಮುಂಗಾರಿನ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದುವರೆಗಿನ ಅಂದಾಜಿನ ಪ್ರಕಾರ ಮುಂಗಾರು ಋತುವಿನಲ್ಲಿ ದೇಶದಲ್ಲಿ ಒಟ್ಟಾರೆಯಾಗಿ ಸಮ ಹಂಚಿತ ಮಳೆಯಾಗುವ ಸಾಧ್ಯತೆಯಿದೆ.

PTI 20 Apr 2019, 8:21 am
ಹೊಸದಿಲ್ಲಿ: ಮುಂಗಾರು ಮಳೆ ವಿಚಾರವಾಗಿ ಹವಾಮಾನ ಇಲಾಖೆ ರೈತರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದೆ. ಈ ಬಾರಿಯ ನೈರುತ್ಯ ಮುಂಗಾರು ಮಳೆಯು ದೇಶದ ಎಲ್ಲಾ ಭಾಗಗಳಲ್ಲೂ ಉತ್ತಮವಾಗಿ ಹಂಚಿಕೆಯಾಗುವ ಹಿನ್ನೆಲೆಯಲ್ಲಿ, ಸತತ ಮೂರನೇ ಬಾರಿಗೆ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
Vijaya Karnataka Web Rain


‘‘ಪೆಸಿಫಿಕ್‌ ಮತ್ತು ಹಿಂದೂ ಮಹಾ ಸಾಗರದ ಮೇಲಿನ ಸಮುದ್ರ ಮಟ್ಟದ ತಾಪಮಾನ ಭಾರತದ ಮುಂಗಾರಿನ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದುವರೆಗಿನ ಅಂದಾಜಿನ ಪ್ರಕಾರ ಮುಂಗಾರು ಋತುವಿನಲ್ಲಿ ದೇಶದಲ್ಲಿ ಒಟ್ಟಾರೆಯಾಗಿ ಸಮ ಹಂಚಿತ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ಈ ಹಂಗಾಮಿನಲ್ಲಿ ಉತ್ತಮ ಇಳುವರಿ ದೊರೆಯಲಿದ್ದು, ರೈತರಿಗೆ ಹಾಗೂ ಒಟ್ಟಾರೆ ಆರ್ಥಿಕತೆಗೆ ಅನುಕೂಲವಾಗಲಿದೆ,’’ ಎಂದು ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಕೆ.ಜೆ. ರಮೇಶ್‌ ಹೇಳಿದ್ದಾರೆ.

ಈ ಬಾರಿ ಮುಂಗಾರು ಮಳೆ ‘ಸಾಮಾನ್ಯ’ವಾಗಿ ಇರಲಿದೆ ಎಂದು ಈಗಾಗಲೇ ಇಲಾಖೆ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ