ಆ್ಯಪ್ನಗರ

ಗುರು ನಿಮ್ಮ ವಿರುದ್ಧ ಕೇಸ್‌ ಹಾಕ್ತಿದ್ದೀನಿ ಆಶೀರ್ವದಿಸಿ: ಕಪಿಲ್‌ ಮಿಶ್ರಾ

'ಗುರು' ಕೇಜ್ರಿವಾಲ್ ನಿಮ್ಮ ವಿರುದ್ಧ ಕೇಸ್‌ ಹಾಕುತ್ತಿದ್ದೇನೆ. ನನ್ನನ್ನು ಆಶೀರ್ವದಿಸಿ ಎಂದು ಕೇಜ್ರಿವಾಲ್‌ಗೆ ಕಪಿಲ್ ಮಿಶ್ರಾ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 9 May 2017, 11:45 am
ಹೊಸದಿಲ್ಲಿ: ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ತೋರಿಸಿ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ಕಪಿಲ್ ಮಿಶ್ರಾ ಬಹಿರಂಗ ಸವಾಲು ಎಸೆದಿದ್ದಾರೆ.
Vijaya Karnataka Web in letter to guru kejriwal kapil mishra says filing fir against you bless me
ಗುರು ನಿಮ್ಮ ವಿರುದ್ಧ ಕೇಸ್‌ ಹಾಕ್ತಿದ್ದೀನಿ ಆಶೀರ್ವದಿಸಿ: ಕಪಿಲ್‌ ಮಿಶ್ರಾ


'ನೀವು ನನ್ನನ್ನು ವಿಧಾನಸಭೆಯಿಂದ ತೆಗೆದುಹಾಕಲು ಯತ್ನಿಸುತ್ತಿದ್ದೀರಿ. ನೀವು ಯಾವುದೇ ಕ್ಷೇತ್ರದಿಂದ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ತೋರಿಸಿ. ದಿಲ್ಲಿ ಜನ ನಿಮ್ಮನ್ನು ಬೆಂಬಲಿಸುತ್ತಾರೆಂದು ನಂಬಿದ್ದರೆ, ನಾನು ರಾಜೀನಾಮೆ ನೀಡಲು ಸಹ ಸಿದ್ಧ' ಎಂದಿದ್ದಾರೆ.

'ಗುರು' ಕೇಜ್ರಿವಾಲ್ ಅವರೇ ನಿಮ್ಮ ವಿರುದ್ಧ ಕೇಸ್‌ ಹಾಕುತ್ತಿದ್ದೇನೆ. ನನ್ನನ್ನು ಆಶೀರ್ವದಿಸಿ,' ಎಂದು ಭಾರವಾದ ಹೃದಯದಿಂದ ಹೇಳಿದ್ದಾರೆ.

'ನಾನು ಅರವಿಂದ್ ಕೇಜ್ರಿವಾಲ್ ಅವರಿಗೆ ಬಹಿರಂಗ ಪತ್ರ ಬರೆಯುತ್ತಿದ್ದೇನೆ. ಇಂದು ಸಿಬಿಐ ಬಳಿ ಹೋಗುವ ಮೂಲಕ ನನ್ನ ಹೋರಾಟ ಪ್ರಾರಂಭಿಸುತ್ತೇನೆ. ಭ್ರಷ್ಟಾಚಾರ ನಡೆದಿರುವ ಕುರಿತು ನನಗೆ ಸಂಪೂರ್ಣ ಮಾಹಿತಿ ಇದೆ. ನಾನು ಸಿಬಿಐ ಅಧಿಕಾರಗಳ ಮುಂದೆ ಎಲ್ಲ ವಿಷಯವನ್ನು ಬಹಿರಂಗಪಡಿಸುತ್ತೇನೆ' ಎಂದು ಕೇಜ್ರಿವಾಲ್ ಅವರಿಗೆ ಎಚ್ಚರಿಕೆ ನೀಡಿದರು.

''ಎಎಪಿ ಪಕ್ಷ ಹಾಗೂ ದಿಲ್ಲಿ ಸರಕಾರ ಎಸಗಿರುವ 211 ಭ್ರಷ್ಟಾಚಾರ ಪ್ರಕರಣಗಳನ್ನು ಸ್ವೀಕರಿಸಿದ್ದೇನೆ. ಕಳೆದ ಎರಡು ವರ್ಷಗಳಿಂದ ಪರದೆಯ ಹಿಂದೆ ಏನಾಯಿತು ಎನ್ನುವುದನ್ನು ನೆನಸಿಕೊಂಡರೆ ನೋವಾಗುತ್ತದೆ', ಮಿಶ್ರಾ ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ