ಆ್ಯಪ್ನಗರ

ಖಬರಸ್ತಾನಗಳಲ್ಲಿ ಅಂತ್ಯಕ್ರಿಯೆ ಪ್ರಮಾಣ ದಿಢೀರ್‌ ಹೆಚ್ಚಳ: ಕೊರೊನಾ ವ್ಯಾಪಕವಾಯಿತೇ?

ನಗರದಲ್ಲಿನ ಮುಸ್ಲಿಮರ ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರಗಳು ದಿಢೀರ್‌ ಹೆಚ್ಚುತ್ತಿದ್ದು, ಕೊರೊನಾ ಸೋಂಕು ವ್ಯಾಪಕವಾಗಿರುವ ಆತಂಕ ಮೂಡಿಸಿದೆ. ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ.

Vijaya Karnataka Web 11 Apr 2020, 11:50 pm
ಇಂದೋರ್‌: ನಗರದಲ್ಲಿನ ಮುಸ್ಲಿಮರ ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರಗಳು ದಿಢೀರ್‌ ಹೆಚ್ಚುತ್ತಿದ್ದು, ಕೊರೊನಾ ಸೋಂಕು ವ್ಯಾಪಕವಾಗಿರುವ ಆತಂಕ ಮೂಡಿಸಿದೆ.
Vijaya Karnataka Web kabarstan


ಏ.1 ರಿಂದ 9ರವರೆಗೆ ಮಹು ನಾಕಾ ಸ್ಮಶಾನದಲ್ಲಿ 64 ಶವಗಳನ್ನು ಹೂಳಲಾಗಿದೆ. ನಗರದ ಉಳಿದ ಖಬರಸ್ತಾನಗಳಲ್ಲಿ 183 ಶವಗಳನ್ನು ದಫನ್‌ ಮಾಡಲಾಗಿದೆ ಎಂದು ಸ್ಥಳೀಯ ಆಡಳಿತದ ದಾಖಲೆಗಳು ಬಹಿರಂಗಪಡಿಸಿವೆ. ಆದರೆ ಸ್ಮಶಾನದಲ್ಲಿನ ದಾಖಲೆಗಳಲ್ಲಿ ಬಹುತೇಕ ಸಾವಿನ ಕಾರಣ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಎಂದು ನಮೂದಿಸಲಾಗಿದೆ. ಕೊರೊನಾ ಕುರಿತ ಕಟ್ಟುನಿಟ್ಟನ ಕ್ರಮಗಳ ಭೀತಿಯಿಂದ ಮಾಹಿತಿ ನೀಡದೇ ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

''ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ ವರ್ಷದ ಸಾವಿನ ದಾಖಲೆಗಳ ಜತೆಗೆ ಕಳೆದ 5 ವರ್ಷಗಳ ದಾಖಲೆಗಳನ್ನು ಹೋಲಿಕೆ ಮಾಡಬೇಕಿದೆ. ಆದರೆ ಜಿಲ್ಲಾಡಳಿತಕ್ಕೆ ಸಮಯದ ಅಭಾವವಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಿದರೆ ತನಿಖೆಗೆ ಆದೇಶಿಸಲಾಗುವುದು,'' ಎಂದು ಜಿಲ್ಲಾಧಿಕಾರಿ ಮನೀಶ್‌ ಸಿಂಗ್‌ ತಿಳಿಸಿದ್ದಾರೆ.

ಏ.30ರವರೆಗೂ ಗೃಹ ಬಂಧನ: ಈ ಅವಧಿ ಮತ್ತಷ್ಟು ಕಠಿಣ, ಅಧಿಕೃತ ಘೋಷಣೆ ಬಾಕಿ!

ಹೊಸ ಹಾಟ್‌ಸ್ಪಾಟ್‌: ಮಧ್ಯಪ್ರದೇಶದಲ್ಲಿನ ಒಟ್ಟು ಸೋಂಕಿತರ ಪೈಕಿ ಅರ್ಧದಷ್ಟು ಮಂದಿಯನ್ನು ಹೊಂದಿರುವ ಇಂದೋರ್‌ ನಗರ ಸದ್ಯ ರಾಜ್ಯದ ಹೊಸ ಹಾಟ್‌ಸ್ಪಾಟ್‌ ಆಗಿದೆ. ರಾಜ್ಯದಲ್ಲಿ ಕೊರೊನಾಗೆ ಬಲಿಯಾಗಿರುವ 36 ಮಂದಿಯ ಪೈಕಿ 27 ಜನರು ಇಂದೋರ್‌ ನಗರದವರು ಎನ್ನುವುದು ಗಮನಾರ್ಹ.

ಹಸುಳೆಯನ್ನು ತನ್ನ ಬೈಕ್‌ನಲ್ಲೇ ಆಸ್ಪತ್ರೆಗೆ ಸಾಗಿಸಿ ಬದುಕಿಸಿದ ವೈದ್ಯ!

ಕೊರೊನಾ ಸಾವಿನ ರಾಷ್ಟ್ರೀಯ ಸರಾಸರಿಗಿಂತ ಮೂರು ಪಟ್ಟು ವೇಗದಲ್ಲಿ ಮಧ್ಯಪ್ರದೇಶದಲ್ಲಿ ಸೋಂಕಿಗೆ ಜನರು ಬಲಿಯಾಗಿರುವುದು ಆತಂಕ ಮೂಡಿಸಿದೆ. ಸತತ ಮೂರು ವರ್ಷ ದೇಶದ ಅತಿ ಸ್ವಚ್ಛ ನಗರ ಎಂಬ ಖ್ಯಾತಿ ಪಡೆದ ಇಂದೋರ್‌ ಕೊರೊನಾ ವೈರಾಣು ಹರಡುವಿಕೆಯ ಕೇಂದ್ರಬಿಂದುವಾಗುತ್ತಿರುವುದು ಕಳವಳ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ