ಆ್ಯಪ್ನಗರ

ಭಾರತ-ಚೀನಾ 5ನೇ ಸುತ್ತಿನ ಮಿಲಿಟರಿ ಮಾತುಕತೆ: ಸಂಪೂರ್ಣ ಸೈನ್ಯ ತೆರವಿಗೆ ಒತ್ತಾಯಿಸಲಿದೆ ಭಾರತ!

ಇಂದು(ಭಾನುವಾರ) ಭಾರತ-ಚೀನಾ ನಡುವೆ ಐದನೇ ಸುತ್ತಿನ ಮಿಲಿಟರಿ ಮಾತುಕತೆ ನಡೆಯಲಿದ್ದು, ಈಶಾನ್ಯ ಲಡಾಖ್ ಗಡಿಯಿಂದ ಸಂಪೂರ್ಣವಗಿ ಸೈನ್ಯವನ್ನು ಹಿಂಪಡೆಯಲು ಭಾರತ ಒತ್ತಡ ಹೇರಲಿದೆ ಎನ್ನಲಾಗಿದೆ.

Vijaya Karnataka Web 2 Aug 2020, 12:01 pm
ನವದೆಹಲಿ: ಇಂದು(ಭಾನುವಾರ) ಭಾರತ-ಚೀನಾ ನಡುವೆ ಐದನೇ ಸುತ್ತಿನ ಮಿಲಿಟರಿ ಮಾತುಕತೆ ನಡೆಯಲಿದ್ದು, ಈಶಾನ್ಯ ಲಡಾಖ್ ಗಡಿಯಿಂದ ಸಂಪೂರ್ಣವಗಿ ಸೈನ್ಯವನ್ನು ಹಿಂಪಡೆಯಲು ಭಾರತ ಒತ್ತಡ ಹೇರಲಿದೆ ಎನ್ನಲಾಗಿದೆ.
Vijaya Karnataka Web ladakh
ಸಂಗ್ರಹ ಚಿತ್ರ


ಈ ಹಿಂದಿನ ನಾಲ್ಕು ಮಿಲಿಟರಿ ಮಾತುಕತೆಗಳಲ್ಲಿ ಹಂತ ಹಂತವಾಗಿ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ಒತ್ತು ನೀಡಿತ್ತು. ಆದರೆ ಈ ಬಾರಿ ಸಂಪೂರ್ಣವಾಗಿ ಸೈನ್ಯವನ್ನು ಹಿಂಪಡೆಯಲು ಒತ್ತಡ ಹೇರಲಾಗುವುದು ಎಂದು ಮೂಲಗಳು ತಿಳಿಸಿವೆ.

ಚಳಿಗಾಲದಲ್ಲೂ ಲಡಾಖ್ ಗಡಿಯಲ್ಲಿ ಇದೇ ಸೈನ್ಯ ಸಾಮರ್ಥ್ಯ ಹೊಂದಲಿರುವ ಭಾರತೀಯ ಸೇನೆ: ಯಾಕೆ?

ಪ್ರತಿ ಬಾರಿಯ ಮೀಟಿಂಗ್‌ನಲ್ಲೂ ಸೈನ್ಯ ಹಿಂಪಡೆಯುವುದಾಗಿ ಬೊಗಳೆ ಬಿಡುವ ಚೀನಾ, ಗಡಿಯ ಮುಂಚೂಣಿ ನೆಲೆಗಳಲ್ಲಿ ಇನ್ನೂ ಸೈನ್ಯವನ್ನು ಜಮಾವಣೆಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಈ ಭಾರತೀಯ ಸೇನೆ ಸಂಪೂರ್ಣವಾಗಿ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ನಡೆಸಲೇಬೇಕೆಂದು ಪಟ್ಟು ಹಿಡಿಯಲಿದೆ ಎನ್ನಲಾಗಿದೆ. ಇಂದಿನ ಕಮಾಂಡರ್ ಲೇವಲ್‌ ಮಟ್ಟದ ಮಾತುಕತೆ ಅತ್ಯಂತ ನಿರ್ಣಾಯಕ ಎಂದು ಹೇಳಲಾಗಿದೆ.

ಚೀನಾದ ಸೈನ್ಯ ವಿಸರ್ಜನೆ ಹಸಿ ಸುಳ್ಳು: ಭಾರತದ ಪ್ರತಿಪಾದನೆ ಏನು?

ಈಶಾನ್ಯ ಲಡಾಖ್ ಗಡಿಯ ಗಲ್ವಾನ್ ವ್ಯಾಲಿ ಸೇರಿದಂತೆ ಇಡೀ ಪ್ರದೇಶದಿಂದ ಸಂಪೂರ್ಣವಾಗಿ ಸೈನ್ಯವನ್ನು ಹಿಂಪಡೆಯುವುದೇ ಶಾಂತಿ ಮರುಸ್ಥಾಪನೆಗೆ ಇರುವ ಏಕೈಕ ಮಾರ್ಗ ಎಂದು ಭಾರತ ಆರಂಭದಿಂದಲೂ ಪ್ರತಿಪಾದಿಸುತ್ತಲೇ ಬಂದಿರುವುದನ್ನು ಇಲ್ಲಿ ಗಮನಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ