ಆ್ಯಪ್ನಗರ

ಜಾಧವ್‌ ಜತೆ ಮುಕ್ತ ಮಾತುಕತೆಗೆ ಅವಕಾಶ ಕಲ್ಪಿಸಲು ಭಾರತ ಆಗ್ರಹ

ಅಂತಾರಾಷ್ಟ್ರೀಯ ಕೋರ್ಟ್‌ನ ಛೀಮಾರಿ ಬಳಿಕ ಪಾಕಿಸ್ತಾನವು ಜಾಧವ್‌ ಅವರನ್ನು ಭೇಟಿಯಾಗಲು ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಶುಕ್ರವಾರ ಅವಕಾಶ ಕಲ್ಪಿಸುವುದಾಗಿ ಗುರುವಾರ ಹೇಳಿತ್ತು.

Agencies 3 Aug 2019, 5:00 am
ಹೊಸದಿಲ್ಲಿ: ಸೆರೆಯಲ್ಲಿರುವ ಭಾರತೀಯ ನೌಕಾಪಡೆ ಮಾಜಿ ಯೋಧ ಕುಲಭೂಷಣ್‌ ಜಾಧವ್‌ ಅವರಿಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನಂತೆ ಯಾವುದೇ ಅಡೆತಡೆ ಇಲ್ಲದ ರಾಯಭಾರ ಸಂಪರ್ಕ ಒದಗಿಸುವಂತೆ ಭಾರತವು ಪಾಕಿಸ್ತಾನಕ್ಕೆ ಮನವಿ ಮಾಡಿದೆ.
Vijaya Karnataka Web india asks pakistan for unimpeded consular access to kulbhushan jadhav
ಜಾಧವ್‌ ಜತೆ ಮುಕ್ತ ಮಾತುಕತೆಗೆ ಅವಕಾಶ ಕಲ್ಪಿಸಲು ಭಾರತ ಆಗ್ರಹ


ಅಂತಾರಾಷ್ಟ್ರೀಯ ಕೋರ್ಟ್‌ನ ಛೀಮಾರಿ ಬಳಿಕ ಪಾಕಿಸ್ತಾನವು ಜಾಧವ್‌ ಅವರನ್ನು ಭೇಟಿಯಾಗಲು ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಶುಕ್ರವಾರ ಅವಕಾಶ ಕಲ್ಪಿಸುವುದಾಗಿ ಗುರುವಾರ ಹೇಳಿತ್ತು. ಆದರೆ, ಭಾರತದ ಅಧಿಕಾರಿಗಳು ಕಾರಾಗೃಹದಲ್ಲಿ ಜಾಧವ್‌ ಅವರನ್ನು ಭೇಟಿಯಾಗುವ ವೇಳೆ ಪಾಕಿಸ್ತಾನದ ಅಧಿಕಾರಿಯೂ ಜತೆಗಿರುತ್ತಾರೆ ಮತ್ತು ಈ ಭೇಟಿಯನ್ನು ಸಿ.ಸಿ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುವುದು ಎಂದು ಪಾಕಿಸ್ತಾನ ಹೇಳಿತ್ತು. ಈ ಷರತ್ತನ್ನು ಭಾರತ ತಿರಸ್ಕರಿಸಿದ್ದು, ಯಾವುದೇ ಷರತ್ತು ವಿಧಿಸದೇ ರಾಯಭಾರ ಕಚೇರಿ ಅಧಿಕಾರಿಗಳಿಗೆ ಅವಕಾಶ ನೀಡಬೇಕು. ನಿರ್ಭೀತ ಹಾಗೂ ಒತ್ತಡರಹಿತ ವಾತಾವರಣದಲ್ಲಿ ಮಾತುಕತೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದೆ. ಇದಕ್ಕೆ ಪಾಕ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಬೇಹುಗಾರಿಕೆ ಆರೋಪದಲ್ಲಿ ಜಾಧವ್‌ ಅವರಿಗೆ ವಿಧಿಸಿರುವ ಗಲ್ಲು ಶಿಕ್ಷೆ ತೀರ್ಪನ್ನು ಪಾಕ್‌ ಪುನರ್‌ ಪರಿಶೀಲಿಸಬೇಕು ಹಾಗೂ ರಾಯಭಾರ ನೆರವು ಒದಗಿಸಬೇಕು. ಇಲ್ಲದಿದ್ದರೆ ಅದು 1963ರ ವಿಯೆನ್ನಾ ಒಪ್ಪಂದ ಉಲ್ಲಂಘಿಸಲಾಗುತ್ತದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯವು ಜುಲೈ 17ರಂದು ತೀರ್ಪಿ ನೀಡಿದೆ. ಆ ಹಿನ್ನೆಲೆಯಲ್ಲಿ ರಾಯಭಾರ ನೆರವಿಗೆ ಪಾಕಿಸ್ತಾನ ಸಮ್ಮತಿಸಿರುವುದರಿಂದ ಗಲ್ಲು ಶಿಕ್ಷೆಯ ತೀರ್ಪನ್ನೂ ಪುನರ್‌ ಪರಿಶೀಲಿಸಬಹುದು ಎಂಬ ಆಶಾಭಾವ ಜಾಧವ್‌ ಕುಟುಂಬದಲ್ಲಿ ಮೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ