ಆ್ಯಪ್ನಗರ

ವಾಟ್ಸಆ್ಯಪ್‌ ಮೆಸೇಜ್‌ ಮೂಲಕ್ಕೆ ಕೈ

'' ಸರಕಾರ ವಾಟ್ಸ್‌ಆ್ಯಪ್‌ ಮೆಸೇಜ್‌ಗಳನ್ನು ಓದಲು ಬಯಸುವುದಿಲ್ಲ. ಆದರೆ ಸಮಸ್ಯೆ ಸೃಷ್ಟಿಸುವ ಸಂದೇಶಗಳನ್ನು ನಿಯಂತ್ರಿಸಲು, ಅದರ ಮೂಲವನ್ನು ಪತ್ತೆ ಹಚ್ಚಲು ವಾಟ್ಸ್‌ಆ್ಯಪ್‌ ಸಹಕರಿಸಬೇಕು'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PTI 19 Jun 2019, 5:00 am
ಹೊಸದಿಲ್ಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್‌ ಆ್ಯಪ್‌ ಮೂಲಕ ಸುಳ್ಳು ಸುದ್ದಿ, ವದಂತಿ, ದ್ವೇಷಮಯ ಹೇಳಿಕೆಗಳನ್ನು ರವಾನಿಸುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ, ಎಲ್ಲ ಮೆಸೇಜ್‌ಗಳ ಡಿಜಿಟಲ್‌ ಫಿಂಗರ್‌ಪ್ರಿಂಟ್‌ಗಳನ್ನು ತೆಗೆದಿಡುವಂತೆ ಕೇಂದ್ರ ಸರಕಾರ ಕಂಪನಿಗೆ ಸೂಚಿಸಿದೆ.
Vijaya Karnataka Web india asks whatsapp to fingerprint messages to ensure traceability
ವಾಟ್ಸಆ್ಯಪ್‌ ಮೆಸೇಜ್‌ ಮೂಲಕ್ಕೆ ಕೈ


ಇದರಿಂದ ವಾಟ್ಸ್‌ ಆ್ಯಪ್‌ ಸಂದೇಶಗಳ ಮೂಲ ಯಾವುದು? ಎಷ್ಟು ಮಂದಿ ಓದಿದ್ದಾರೆ ಹಾಗೂ ಎಷ್ಟು ಮಂದಿ ಹಂಚಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕಬಹುದು. ಸಮಾಜದಲ್ಲಿ ವದಂತಿಗಳು ಹಬ್ಬುವುದನ್ನು ಇದರಿಂದ ತಡೆಯಬಹುದು.

'' ಸರಕಾರ ವಾಟ್ಸ್‌ಆ್ಯಪ್‌ ಮೆಸೇಜ್‌ಗಳನ್ನು ಓದಲು ಬಯಸುವುದಿಲ್ಲ. ಆದರೆ ಸಮಸ್ಯೆ ಸೃಷ್ಟಿಸುವ ಸಂದೇಶಗಳನ್ನು ನಿಯಂತ್ರಿಸಲು, ಅದರ ಮೂಲವನ್ನು ಪತ್ತೆ ಹಚ್ಚಲು ವಾಟ್ಸ್‌ಆ್ಯಪ್‌ ಸಹಕರಿಸಬೇಕು'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2018ರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳ ಅಪಹರಣ ಕುರಿತ ವದಂತಿಗಳು ಹಬ್ಬಿ ನಿರಪರಾಧಿಗಳ ಮೇಲೆ ಹಲ್ಲೆ ನಡೆದಿತ್ತು. ಇದರ ಬೆನ್ನಲ್ಲೇ ವಾಟ್ಸ್‌ ಆ್ಯಪ್‌ ಸಂದೇಶಗಳ ಮೇಲೆ ನಿಗಾ ಇಡಲು ಸರಕಾರ ಗಂಭೀರ ಕ್ರಮಗಳಿಗೆ ಮುಂದಾಗಿತ್ತು.

ವಾಟ್ಸ್‌ ಆ್ಯಪ್‌ ತನ್ನ ಮೂಲಕ ಪ್ರಸಾರವಾಗುವ ಸಂದೇಶ, ಫೋಟೊ, ವಿಡಿಯೊ, ವಾಯ್ಸ್‌ ಮೆಸೇಜ್‌ ಇತ್ಯಾದಿಗಳನ್ನು 'ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಷನ್‌' ತಂತ್ರಜ್ಞಾನದ ಅಡಿಯಲ್ಲಿ ಸುರಕ್ಷಿತವಾಗಿಡುತ್ತಿರುವುದಾಗಿ ಹಾಗೂ ಬೇರೆಯವರು ದುರ್ಬಳಕೆ ಮಾಡದಂತೆ ತಡೆಯುತ್ತಿರುವುದಾಗಿ ಬಳಕೆದಾರರಿಗೆ ಭರವಸೆ ನೀಡುತ್ತದೆ. ಆದರೆ ಡಿಜಿಟಲ್‌ ಫಿಂಗರ್‌ಪ್ರಿಂಟ್‌ನಿಂದ ಎನ್‌ಕ್ರಿಪ್ಷನ್‌ ಅನ್ನು ಭೇದಿಸದೆಯೇ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಬಹುದು.

ಸಾಮಾಜಿಕ ಜಾಲತಾಣ ಕಂಪನಿಗಳು ಭಾರತದಲ್ಲಿ, ಬಳಕೆದಾರರ ಅಹವಾಲುಗಳಿಗೆ ಸಂಬಂಧಿಸಿ ಪ್ರತ್ಯೇಕ ಅಧಿಕಾರಿಗಳನ್ನು ನಿಯುಕ್ತಿಗೊಳಿಸಬೇಕು ಎಂದು ಸರಕಾರ ಸೂಚಿಸಿದೆ. ವಾಟ್ಸ್‌ ಆ್ಯಪ್‌ ಕಳೆದ ವರ್ಷ ಕೋಮಲ್‌ ಲಹಿರಿ ಎಂಬುವರನ್ನು ಅಹವಾಲುಗಳಿಗೆ ಸಂಬಂಧಿಸಿದ ಅಧಿಕಾರಿಯಾಗಿ ನೇಮಿಸಿದೆ.

ಪ್ರಯೋಜನವೇನು?
ವಾಟ್ಸ್‌ಆ್ಯಪ್‌ ಮೆಸೇಜ್‌ಗಳ ಡಿಜಿಟಲ್‌ ಫಿಂಗರ್‌ಪ್ರಿಂಟ್‌ನಿಂದ, ಸಂದೇಶಗಳ ಎನ್‌ಕ್ರಿಪ್ಷನ್‌ ಕೋಡ್‌ ಅನ್ನು ಭೇದಿಸದೆಯೇ ಮೊದಲು ಯಾರು ಪ್ರಸಾರ ಮಾಡಿದರು ಎಂಬುದನ್ನು ಪತ್ತೆ ಹಚ್ಚಬಹುದು'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಠಿಣ ಸವಾಲು
ಪ್ರಸ್ತುತ ವಾಟ್ಸ್‌ಆ್ಯಪ್‌ ಯಾವುದೇ ಸಂದೇಶಗಳನ್ನು ಸ್ಟೋರ್‌ ಮಾಡುವುದಿಲ್ಲ. ಪ್ರತಿ ಸಂದೇಶದ ಡಿಜಿಟಲ್‌ ಫಿಂಗರ್‌ಪ್ರಿಂಟ್‌ ಬೇಕೆಂದರೆ, ಎಲ್ಲಾ ಸಂದೇಶಗಳನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸಬೇಕು. ಒಂದೊಂದು ಸಂದೇಶಕ್ಕೂ ಒಂದು ವಿಶಿಷ್ಟ ಐಡಿ ಒದಗಿಸಬೇಕು. ಇದಕ್ಕಾಗಿ ಇಡೀ ತಂತ್ರಾಂಶವನ್ನು ಪುನರ್‌ವ್ಯವಸ್ಥೆ ಮಾಡಬೇಕು.

ನಿರಾಕರಣೆ
ಆದರೆ, ಸರಕಾರದ ಮನವಿಯನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ನಿರಾಕರಿಸಿದ್ದು, ಈ ವಿಚಾರದಲ್ಲಿ ಹೇಳಲು ಮತ್ತೇನೂ ಹೊಸದಿಲ್ಲ. ಹೇಳಬೇಕಾದ್ದನ್ನು ಸರಕಾರಕ್ಕೆ ಈಗಾಗಲೇ ಹೇಳಿದ್ದೇವೆ ಎಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ