ಆ್ಯಪ್ನಗರ

ಏಕಾಏಕಿ ಎಲ್ಲಾ ವಿಧಧ ಈರುಳ್ಳಿ ರಫ್ತುನ್ನು ನಿಷೇಧಿಸಿದ ಭಾರತ, ಬಾಂಗ್ಲಾದೇಶ ಸೇರಿ ಕೆಲವು ದೇಶಗಳಿಗೆ ಹೊಡೆತ?

ಈ ಬಗ್ಗೆ ಆದೇಶ ಹೊರಡಿಸಿರುವ ​ವಿದೇಶಾಂಗ ವ್ಯವಹಾರ ನಿರ್ದೇಶನಾಲಯ ತನ್ನ ವೆಬ್‌ಸೈಟ್‌ನಲ್ಲಿ ಈ ಕ್ಷಣದಿಂದಲೆ ವಿಧದ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದೆ. ರಫ್ತುದಾರರಿಗೆ ಯಾವುದೇ ರೀತಿಯ ಈರುಳ್ಳಿ ರಫ್ತು ಮಾಡದಂತೆ ಸೂಚನೆ ನೀಡಿದೆ. ​​ಕಳೆದ ಕೆಲ ತಿಂಗಳುಗಳಲ್ಲಿಈರುಳ್ಳಿಯ ಭಾರಿ ರಫ್ತು ನಡೆದಿತ್ತು.

Agencies 15 Sep 2020, 7:43 am
ಹೊಸದಿಲ್ಲಿ: ಭಾರತ ಎಲ್ಲಾ ವಿಧದ ಈರುಳ್ಳಿಯ ರಫ್ತನ್ನು ಸೋಮವಾರ ನಿಷೇಧಿಸಿದೆ. ದೇಶಿ ಮಾರುಕಟ್ಟೆಯಲ್ಲಿಈರುಳ್ಳಿ ಕೊರತೆ ಉಂಟಾಗಿರುವ ಮತ್ತು ದರ ಏರಿಕೆ ಹಿನ್ನೆಲೆಯಲ್ಲಿ ರಫ್ತು ನಿಷೇಧಕ್ಕೆ ನಿರ್ಧರಿಸಲಾಗಿದೆ. ಕತ್ತರಿಸಿದ ಮತ್ತು ಪುಡಿಯ ರೂಪದಲ್ಲಿರುವ ಈರುಳ್ಳಿ ಹೊರತುಪಡಿಸಿ, ಬೆಂಗಳೂರು ಗುಲಾಬಿ ಈರುಳ್ಳಿ, ಕೃಷ್ಣಾಪುರಂ ಈರುಳ್ಳಿ ಸೇರಿದಂತೆ ಎಲ್ಲ ಬಗೆಯ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.
Vijaya Karnataka Web onion
The average wholesale onion price has stabilized at Rs 750 per quintal at Lasalgaon


ಈ ಬಗ್ಗೆ ಆದೇಶ ಹೊರಡಿಸಿರುವ ವಿದೇಶಾಂಗ ವ್ಯವಹಾರ ನಿರ್ದೇಶನಾಲಯ ತನ್ನ ವೆಬ್‌ಸೈಟ್‌ನಲ್ಲಿ ಈ ಕ್ಷಣದಿಂದಲೆ ವಿಧದ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದೆ. ರಫ್ತುದಾರರಿಗೆ ಯಾವುದೇ ರೀತಿಯ ಈರುಳ್ಳಿ ರಫ್ತು ಮಾಡದಂತೆ ಸೂಚನೆ ನೀಡಿದೆ. ಕಳೆದ ಕೆಲ ತಿಂಗಳುಗಳಲ್ಲಿಈರುಳ್ಳಿಯ ಭಾರಿ ರಫ್ತು ನಡೆದಿತ್ತು.

ಬಾಂಗ್ಲಾದೇಶಕ್ಕೆ ಹೊಡೆತ?
ಇನ್ನು ಭಾರತ ಈರುಳ್ಳಿ ರಫ್ತನ್ನು ನಿಷೇಧಿಸಿದರೆ ಈ ಪೈಕಿ ಭಾರೀ ಹೊಡೆತ ತಿನ್ನುವ ದೇಶವೆಂದರೆ ಅದು ಬಾಂಗ್ಲಾದೇಶ. ಈರುಳ್ಳಿ ಆಮದಿನಲ್ಲಿ ಭಾರತವನ್ನೆ ನೆಚ್ಚಿಕೊಂಡಿರುವ ಬಾಂಗ್ಲಾದೇಶ ಅತೀ ಹೆಚ್ಚು ಅಂದರೆ 7-8 ಲಕ್ಷ ಟನ್‌ ವರ್ಷಕ್ಕೆ ಆಮದು ಮಾಡಿಕೊಳ್ಳುತ್ತದೆ. ಕಳೆದ ಹಲವು ಹಲವು ತಿಂಗಳಲ್ಲಿ ಬಾಂಗ್ಲಾದೇಶ ಈರುಳ್ಳಿ ಕೊರತೆಯನ್ನು ಎದುರಿಸುತ್ತಿದೆ. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಭಾರತ ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ನಿಲ್ಲಿಸಿತ್ತು.

ವಿಚಿತ್ರ ಶಿಕ್ಷೆ: ಮಾಸ್ಕ್‌ ಹಾಕದೆ ಹೊರಗೆ ಬಂದರೆ ಇಲ್ಲಿ ಸಮಾಧಿ ಗುಂಡಿ ಅಗೆಯಬೇಕು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ