ಆ್ಯಪ್ನಗರ

ಲಡಾಖ್ ಗಡಿ ಸಮೀಪ ಹೊಸ ರಸ್ತೆ ನಿರ್ಮಾಣಕ್ಕೆ ಸಜ್ಜಾದ ಭಾರತ: ಶತ್ರುಗಳಿಗೆ ಕಾಣದಂತೆ ಸಾಗಲಿದೆ ಸೈನ್ಯ!

ಮನಾಲಿ-ಲೇಹ್ ನಡುವೆ ಹೊಸ ಹೆದ್ದಾರಿ ನಿರ್ಮಾಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಸೈನ್ಯ ತುಕಡಿ ಹಾಗೂ ವಾಹನಗಳು ಶತ್ರುಗಳ ಕಣ್ಣಿಗೆ ಕಾಣದಂತೆ ಸರಾಗವಾಗಿ ಗಡಿ ತಲುಪಲು ಅನುವಾಗುವಂತ ಭಾರೀ ಯೋಜನೆಯನ್ನು ಸಿದ್ಧಪಡಿಸಿದೆ.

Vijaya Karnataka Web 19 Aug 2020, 8:34 pm
ಲಡಾಖ್: ಲಡಾಖ್‌ನಲ್ಲಿ ಚೀನಾದ ಗಡಿ ತಕರಾರು ಹಾಗೂ ಹಿಂಸಾತ್ಮಕ ಘರ್ಷಣೆ, ಭಾರತದ ಸಾಮರಿಕ ಯೋಜನೆಗಳನ್ನು ಬದಲಾಯಿಸುವಂತೆ ಮಾಡಿರುವುದು ಸುಳ್ಳಲ್ಲ.
Vijaya Karnataka Web ladakh
ಸಂಗ್ರಹ ಚಿತ್ರ


ಚೀನಾದ ಗಡಿ ತಕರಾರಿನಿಂದ ಎಚ್ಚೆತ್ತುಕೊಂಡಿರುವ ಭಾರತ, ತನ್ನ ಸೈನ್ಯ ಬಲವರ್ಧನೆ ಜೊತೆಗೆ ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಒತ್ತು ನೀಡಿದೆ.

ಗಡಿಯಿಂದ ಕದಲದ ಚೀನಾಗೆ ಬುದ್ಧಿ ಕಲಿಸಲು ಉನ್ನತ ರಾಜಕೀಯ ಹಾಗೂ ಮಿಲಿಟರಿ ನಾಯಕರ ಸಭೆ!

ಇದಕ್ಕೆ ಪುಷ್ಠಿ ಎಂಬಂತೆ ಮನಾಲಿ-ಲೇಹ್ ನಡುವೆ ಹೊಸ ಹೆದ್ದಾರಿ ನಿರ್ಮಾಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಸೈನ್ಯ ತುಕಡಿ ಹಾಗೂ ವಾಹನಗಳು ಸರಾಗವಾಗಿ ಗಡಿ ತಲುಪಲು ಅನುವಾಗುವಂತ ಭಾರೀ ಯೋಜನೆಯನ್ನು ಸಿದ್ಧಪಡಿಸಿದೆ.

ಪ್ರಸ್ತುತ ಜೋಜಿಲಾ ಪಾಸ್ ಮೂಲಕ ಮನಾಲಿಯಿಂದ ಲೇಹ್ ತಲುಪಬೇಕಿದ್ದು, ಇದರ ಬದಲಾಗಿ ಪ್ರಯಾಣ ಅವಧಿ ಕಡಿಮೆ ಮಾಡುವ ನೀಮು ಪದಮ್ ದರ್ಚಾ ಮಾರ್ಗವಾಗಿ ಲೇಹ್ ತಲುಪುವ ನೂತನ ರಸ್ತೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ಭಾರತದ ಗಡಿಯಿಂದ ಕದಲದ ಡ್ರ್ಯಾಗನ್‌ ರಾಷ್ಟ್ರ; ಪಾಂಗಾಂಗ್‌ ತ್ಸೊ ಸರೋವರ ಬಳಿ ಚೀನಾ ರಹಸ್ಯ ಜಮಾವಣೆ

ಈ ನೂತನ ರಸ್ತೆ ಮಾರ್ಗ ಸುಮಾರು ನಾಲ್ಕು ಗಂಟೆಗಳ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದ್ದು, ಇದರಿಂದ ಸೈನ್ಯ ಹಾಗೂ ಅಗತ್ಯ ಸಾಮಾನು ಸರಂಜಾಮುಗಳನ್ನು ಗಡಿಗೆ ತಲುಪಿಸುವುದು ಸುಲಭವಾಗಲಿದೆ.

ಇಷ್ಟೇ ಅಲ್ಲದೇ ಲಡಾಖ್‌ನ ದೌಲತ್ ಬೇಗ್ ಓಲ್ಡಿಗೆ ಶೀಘ್ರವಾಗಿ ತಲುಪಲಿ ಕಿರು ಹೆದ್ದಾರಿಗಳನ್ನೂ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ವಿಶ್ವದ ಅತಿ ಎತ್ತರದ ವಾಹನ ಸಂಚಾರ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ದುಂಗ್ ಲಾ ಪಾಸ್‌ನಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ.

ತಿರುಗಿ ಕೊಟ್ಟ ಭಾರತ: ಪ್ಯಾಂಗಾಂಗ್ ತ್ಸೋದಿಂದ ಹಿಂದೆ ಸರಿಯಲ್ಲ ಎಂದಿದ್ದಕ್ಕೆ ಬೆಚ್ಚಿಬಿದ್ದ ಚೀನಾ!

ನೀಮು ಪದಮ್ ದರ್ಚಾ ಮಾರ್ಗವಾಗಿ ಮನಾಲಿಯಿಂದ ಲೇಹ್‌ಗೆ ಸಂಪರ್ಕ ಕಲ್ಪಿಸಲಿರುವ ಈ ನೂತನ ರಸ್ತೆ ಮೇಲೆ, ಪಾಕಿಸ್ತಾನ ಹಾಗೂ ಚೀನಾ ನಿಗಾವಹಿಸುವುದು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಈ ಮಾರ್ಗದ ಮೂಲಕ ಶತ್ರುಗಳ ಕಣ್ಣಿಗೆ ಕಾಣದಂತೆ ಸೈನ್ಯ ಹಾಗೂ ಶಸ್ತ್ರಾಸ್ತ್ರ ರವಾನೆ ಮಾಡುವುದು ಸುಲಭವಾಗಲಿದೆ ಎನ್ನಲಾಗಿದೆ.

ಪ್ರಸ್ತುತ ಇರುವ ಮಾರ್ಗದ ಮೇಲೆ ಪಾಕಿಸ್ತಾನ ಹಾಗೂ ಚೀನಾ ಸುಲಭವಾಗಿ ನಿಗಾ ಇಡಬಹುದಾಗಿದ್ದು, ಯುದ್ಧ ಕಾಲದಲ್ಲಿ ನಮ್ಮ ಸೈನಿಕ ಕಾರ್ಯಾಚರಣೆಗಳ ಯೋಜನೆಗಳು ಸುಲಭವಾಗಿ ಶತ್ರುಗಳಿಗೆ ಗೊತ್ತಾಗಲಿದೆ. ಆದ್ದರಿಂದ ಹೊಸ ಹೆದ್ದಾರಿಯನ್ನು ನಿರ್ಮಿಸಿ ಶತ್ರುಗಳ ಕಣ್ತಪ್ಪಿಸಿ ಶೀಘ್ರವಾಗಿ ಗಡಿ ತಲುಪುವ ಯೋಜನೆಗೆ ಹಸಿರು ನಿಶಾನೆ ತೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ